ಮಲೇಶಿಯಾದಿಂದ ಬೆಂಗಳೂರಿಗೆ ಬಂದ ವಿದ್ಯಾರ್ಥಿ ಭಾರ್ಗವ್ ಈ ಬಗ್ಗೆ ಪ್ರತಿಕ್ರಿಯಿಸಿ ‘‘ವಿಮಾನ ವ್ಯವಸ್ಥೆ ಮಾಡಲು 2 ತಿಂಗಳಿಗೂ ಹೆಚ್ಚು ಕಾಲ ತೆಗೆದುಕೊಳ್ಳಲಾಯಿತು. ಇರುವ ಹಣವೆಲ್ಲ ಖರ್ಚು ಮಾಡಿಕೊಂಡವರಿಂದ ದುಬಾರಿ ಟಿಕೆಟ್ ದರ ಪಡೆಯಲಾಗಿದೆ. ಬೆಂಗಳೂರಿಗೆ ಬರುವವರಿಗೆ ಒಂದು ದರವಿದ್ದರೆ, ಕೊಚ್ಚಿಗೆ ಮರಳುವವರಿಗೆ ದರ ಅರ್ಧಕ್ಕರ್ಧ ಕಮ್ಮಿ ಇದೆ. ಈ ತಾರತಮ್ಯ ಏಕೆ ? ನಾವು ಬೆಂಗಳೂರಿಗೆ ಬಂದ ಬಳಿಕ ಹೊಟೇಲ್ ಕ್ವಾರಂಟೈನ್ನಲ್ಲಿರಬೇಕು. ಅದಕ್ಕೆ ಮತ್ತೆ 14 ದಿನ ಸಾವಿರಾರು ರೂ. ಖರ್ಚು ಮಾಡಬೇಕು,’’ ಎಂದರು.
ಮಲೇಶಿಯಾದಲ್ಲಿ ಹೆಸರು ನೋಂದಾಯಿಸಿಕೊಂಡಿರುವ ಕನ್ನಡಿಗರ ಪೈಕಿ ಅರ್ಧದಷ್ಟು ಜನರು ಮಾತ್ರ ಬೆಂಗಳೂರಿಗೆ ಮರಳಿದ್ದಾರೆ. ಉಳಿದವರಿಗೆ ವಾಪಸ್ ಬರಲು ಅವಕಾಶ ಸಿಕ್ಕಿಲ್ಲ. ಈ ಸಂಬಂಧ ಜಾಲತಾಣಗಳ ಮೂಲಕ ಹೈಕಮಿಷನರ್ ಕಚೇರಿಗೆ ಮನವಿ ಮಾಡುತ್ತಿದ್ದಾರೆ.
ಮಲೇಶಿಯಾದಲ್ಲಿ ಸಿಲುಕಿದ್ದ 60ಕ್ಕೂ ಹೆಚ್ಚು ಕನ್ನಡಿಗರು ಮಂಗಳವಾರ ಸಂಜೆ ವಂದೇ ಭಾರತ್ ಮಿಷನ್ ಅಡಿ ವ್ಯವಸ್ಥೆ ಮಾಡಲಾಗಿದ್ದ ವಿಮಾನದಲ್ಲಿ ಕೌಲಾಲಂಪುರದಿಂದ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮರಳಿದರು. 142 ಪ್ರಯಾಣಿಕರೊಂದಿಗೆ ವಿಮಾನ ಬೆಂಗಳೂರಿನಲ್ಲಿ ಲ್ಯಾಂಡ್ ಆಯಿತು. 60ಕ್ಕೂ ಹೆಚ್ಚು ಪ್ರಯಾಣಿಕರನ್ನು ಇಳಿಸಿ ಗುಜರಾತ್ನ ಅಹಮದಾಬಾದ್ಗೆ ಪ್ರಯಾಣ ಮುಂದುವರಿಸಿತು.