ಹುಳಿಯಾರು
ಹುಳಿಯಾರಿನ ರಂಗನಾಥಸ್ವಾಮಿ ದೇವಸ್ಥಾನದ ರಸ್ತೆಗೆ ಅಡ್ಡಲಾಗಿ ಇರುವ ಪಪಂ ಚರಂಡಿಯ ಸ್ಲ್ಯಾಬ್ಗಳು ತುಂಡಾಗಿದ್ದು ತಕ್ಷಣ ಬದಲಾಯಿಸುವಂತೆ ಇಲ್ಲಿನ ಸನತ್ ಒತ್ತಾಯಿಸಿದ್ದಾರೆ.ಈ ಚರಂಡಿಯನ್ನು ದಶಕಗಳ ಹಿಂದೆ ಬಸ್ ನಿಲ್ದಾಣದಿಂದ ರಾಮಗೋಪಾಲ್ ಸರ್ಕಲ್ವರೆವಿಗೆ ನಿರ್ಮಾಣ ಮಾಡಲಾಗಿತ್ತು. ಆದರೆ ಸರಿಯಾದ ನಿರ್ವಹಣೆ ಇಲ್ಲದೆ ಮಣ್ಣಿನಿಂದ ಚರಂಡಿ ಮುಚ್ಚಿ ಹೋಗಿತ್ತು. ಹಾಗಾಗಿ ವಾಹನಗಳು ಯಾವುದೇ ಕಿರಿಕಿರಿಯಿಲ್ಲದೆ ಸಂಚಾರ ಮಾಡುತ್ತಿದ್ದವು.
ಆದರೆ ಊರು ಕ್ಲೀನ್ ಮಾಡುವ ಕನಸು ಹೊತ್ತು ಇಲ್ಲಿನ ಪಪಂ ಅಧಿಕಾರಿಗಳು ಆರಂಭದಲ್ಲಿ ಈ ಚರಂಡಿಯಲ್ಲಿ ತುಂಬಿದ್ದ ಹೂಳನ್ನು ತೆಗೆದರು. ಹೂಳು ತೆಗೆದಾದ ಮೇಲೆ ಚರಂಡಿ ಮೇಲೆ ಹೈವೆ ರಸ್ತೆಯವರು ತೆರವುಗೊಳಿಸಿದ್ದ ಚರಂಡಿ ಸ್ಲ್ಯಾಬ್ಗಳನ್ನು ಹಾಕಿ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಿದ್ದರು.
ಮೊದಲೇ ಈ ರಸ್ತೆಯಲ್ಲಿ ನಿತ್ಯ ನೂರಾರು ವಾಹನಗಳು ಓಡಾಡುವುದರಿಂದ ಅದರಲ್ಲೂ ಲಾರಿಗಳು ಹೆಚ್ಚಾಗಿ ಓಡಾಡುವುದರಿಂದ ಈ ಸ್ಲ್ಯಾಬ್ಗಳು ಹಾಕಿದ ಒಂದೆರಡು ವಾರದಲ್ಲೇ ಮುರಿದು ಬಿದ್ದವು. ಹಾಕಿದ್ದ ಶೇ.90 ರಷ್ಟು ಸ್ಲ್ಯಾಬ್ಗಳು ಈಗಾಗಲೇ ತುಂಡಾಗಿ ಚರಂಡಿ ಒಳಗೆ ಬಿದ್ದಿವೆ.
ಪರಿಣಾಮ ಯಾವುದೇ ನಾಲ್ಕು ಚಕ್ರದ ವಾಹನಗಳು ಓಡಾಡಲು ಆಗದಂತಾಗಿದೆಯಲ್ಲದೆ ರಾತ್ರಿ ವೇಳೆಯಲ್ಲಿ ಸ್ಲ್ಯಾಬ್ಗಳು ತುಂಡಾಗಿರುವ ಬಗ್ಗೆ ಅರಿವಿಲ್ಲದೆ ಬರುವ ವಾಹನಗಳು ಅದರಲ್ಲಿ ಸಿಲುಕುತ್ತಿವೆ. ಅಲ್ಲದೆ ವೃದ್ಧರು ಮಕ್ಕಳು ರಾತ್ರಿ ವೇಳೆಯಲ್ಲಿ ಬಿದ್ದ ಉದಾಹರಣೆಗಳು ಸಾಕಷ್ಟಿವೆ.
ಹಾಗಾಗಿ ತಕ್ಷಣ ಈ ಸ್ಲಾö್ಯಬ್ಗಳನ್ನು ತೆರವು ಮಾಡಿ ಸರ್ಕಾರಿ ಆಸ್ಪತ್ರೆ ಬಳಿ ಹಾಕಿರುವ ಪಪಂ ಚಪ್ಪಡಿ ಕಲ್ಲುಗಳನ್ನು ಚರಂಡಿ ಮೇಲಾಕಿ ಸುಗಮ ಸಂಚಾರಕ್ಕೆ ನೆರವಾಗುವಂತೆ ಅವರು ಮನವಿ ಮಾಡಿದ್ದಾರೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ