ಹಬ್ಬ ಬಿಟ್ಟು ಋಣಮುಕ್ತರಾಗಲು ಹೊರಟ ಜನರು.!

1300 ಸಾವಿರ ದಾಟಿದ ಅರ್ಜಿಗಳ ಸಂಖ್ಯೆ
ತಿಪಟೂರು
ರಂಗನಾಥ್ ಪಾರ್ಥಸಾರಥಿ
       ಇನ್ನೇನು ಗೌರಿ-ಗಣೇಶ, ಚೌತಿನಾಗರ, ಬಾಗಿನಕೊಡಲು ಸರಕು ಸರಂಜಾಮುಗಳನ್ನು ಖರೀದಿಸಲು ಬಂದ ಜನರು ಮಾರುಕಟ್ಟೆಯನ್ನು ಪ್ರವೇಶಿಸದೆ ನೇರವಾಗಿ ಉಪವಿಭಾಗಾಧಿಕಾರಿಗಳ ಕಚೇರಿಗೆ ದೌಡಾಯಿಸುತ್ತಿದ್ದರು. ಏಕೆಂದು ವಿಚಾರಿಸಿದಾಗ ಋಣಮುಕ್ತ ಅರ್ಜಿಯನ್ನು ಕೊಡುತ್ತಿದ್ದಾರೆ. ಅದಕ್ಕಾಗಿ ಎಂದು ಓಡುತ್ತಿದ್ದ ಜನರೆ ತಿಳಿಸಿ ಎಲ್ಲರನ್ನು ಕರೆದುಕೊಂಡು ಹೋಗುತ್ತಿದ್ದರು. ಇದರಿಂದ ಉಪವಿಭಾಗಾಧಿಕಾರಿಗಳ ಕಚೇರಿ ಮುಂದೆ ಒಂದು ರೀತಿಯ ಜಾತ್ರೆಯ ಸನ್ನಿವೇಶ ಸೃಷ್ಟಿಯಾಗಿತ್ತು.
     ಸರ್ಕಾರದ ಆದೇಶದಂತೆ ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ಋಣಮುಕ್ತ ಕಾಯ್ದೆ ಅನ್ವಯ ಖಾಸಗಿ ಗಿರವಿ ಅಂಗಡಿಗಳಲ್ಲಿ ಇಟ್ಟಿರುವ ಚಿನ್ನಾಭರಣಗಳ ಮೇಲಿನ ಸಾಲವನ್ನು ಸರ್ಕಾರ ತೀರಿಸಿ ತಮ್ಮ ಒಡವೆಗಳು ನಮಗೆ ಸಿಗುತ್ತವೆಂದು ಹೆಚ್ಚಿನದಾಗಿ ಮಹಿಳೆಯರು ಮನೆಯನ್ನು ಸಿದುಕಿ ಹಳೆಯ ವಾಯಿದೆ ಮುಗಿದ ರಸೀದಿಗಳನ್ನು ತರುತ್ತಿದ್ದು ಇವರನ್ನು ಬರುತ್ತದೆಯೇ ಎಂದು ಕೇಳಿದ್ದಕ್ಕೆ ನೋಡೋಣ ಅರ್ಜಿಯನ್ನು ಹಾಕುತ್ತೇವೆ ಬಂದರೆ ಬರಲಿ ಹೋದರೆ ಹೋಗಲಿ ಎಂದು ಅರ್ಜಿಯನ್ನು ತೆಗೆದುಕೊಂಡು ಹೋಗುತ್ತಿದ್ದೇವೆಂದು ತಿಳಿಸಿದರು.
      ಇನ್ನು ಧಾವಂತದಿಂದ ಓಡಿಬಂದ ಕೆಲವು ಮಹಿಳೆಯರು ಸಿಕ್ಕಸಿಕ್ಕವರನ್ನು ಅಣ್ಣ ಇಲ್ಲಿ ಬ್ಯಾಂಕ್, ಮುತ್ತೋಟ್, ಮಣಪ್ಪುರಂ, ಐ.ಎಫ್.ಎಲ್ ಕಂಪನಿಯಲ್ಲಿ ಇಟ್ಟಿರುವುದಕ್ಕೆ ಅರ್ಜಿ ಹಾಕಬಹುದೆ ಎಂದು ಕೇಳಿದಾಗ, ಇಲ್ಲ ಎಂದಿದ್ದಕ್ಕೆ ಪೆಚ್ಚುಮೋರೆ ಹಾಕಿಕೊಂಡು ಹೋಗುವುದು ಸರ್ವೇಸಾಮಾನ್ಯವಾಗಿತ್ತು.
    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link