ಮಿಡಿಗೇಶಿ
ಕೊರೋನಾ ಸೋಂಕು ನಿಯಂತ್ರಣಕ್ಕೆ ಸರ್ಕಾರ ಅನೇಕ ಕ್ರಮಗಳನ್ನು ಕೈಗೊಳ್ಳುತ್ತಿದ್ದು ಸರ್ಕಾರದ ಪ್ರಯತ್ನಕ್ಕೆ ಸಂಘ ಸಂಸ್ಥೆಗಳ ಹಾಗೂ ಸಾರ್ವಜನಿಕರ ಸಹಕಾರ ಅವಶ್ಯಕ ಎಂದು ಮಿಡಿಗೇಶಿ ಪೊಲೀಸ್ ಠಾಣಾಧಿಕಾರಿ ಹನುಮಂತರಾಯಪ್ಪ ಅ.14ರಂದು ಬೆಳಿಗ್ಗೆ 11-30 ಗಂಟೆಯ ಸಮಯದಲ್ಲಿ ಪೊಲೀಸ್ ಜೀಪ್ನಲ್ಲಿ ಧ್ವನಿ ವರ್ಧಕದ ಮೂಲಕ ಹಾಗೂ ನಾಮಫಲಕದಲ್ಲಿ ಪ್ರಕಟಿಸಿರುವಂತ ಕೊರೋನಾ ವೈರಸ್ ವಿರುದ್ದ ಹೋರಾಡೋಣ
ರೋಗ ಹರಡದಂತೆ ಎಲ್ಲರೂ ಜಾಗೃತಿ ವಹಿಸೋಣ ಎಂಬುದಾಗಿ ಮಿಡಿಗೇಶಿ ಬಸ್ ನಿಲ್ದಾಣದ ಬಳಿ ಹಾಗೂ ಕರ್ನಾಟಕ ಬ್ಯಾಂಕಿನ ಮುಂಭಾಗ ರಕ್ಷಣಾ ಸಿಬ್ಬಂಧಿ ಹಾಗೂ ಸಾರ್ವಜನಿಕರನ್ನು ಒಟ್ಟಾರೆ ಸೇರಿಸಿ ಆರು ಅಡಿಗಳ ಅಂತರ ಕಾಯ್ದು ಕೊಳ್ಳುವಂತೆ, ದಿನ ನಿತ್ಯ ಬಿಸಿನೀರಿನ ಸ್ನಾನ ಮಾಡಿಕೊಳ್ಳುವಂತೆ, ಪ್ರತಿಯೊಬ್ಬರು ಖಡ್ಡಾಯವಾಗಿ ಮಾಸ್ಕ್ ಧರಿಸಿಕೊಂಡು ಓಡಾಡುವಂತೆ, ಸ್ಯಾನಿಟೈಸರ್ ಖಡ್ಡಾಯವಾಗಿ ಬಳಸುವಂತೆ ನಮ್ಮ ದೇಶದ ಪ್ರಧಾನ ಮಂತ್ರಿಗಳವರ ಆದೇಶದಂತೆ ಕೋವಿಡ್-19 ವಿರುದ್ದ ಜನಾಂದಲೋನ ಕಾರ್ಯಕ್ರಮಗಳನ್ನು ಪಾಲಿಸುವಂತೆ ಎಚ್ಚರಿಸಿದರಲ್ಲದೆ ಮಾಸ್ಕ್ ಧರಿಸುವುದು, ಆರು ಅಡಿಗಳ ಅಂತರ ಕಾಪಾಡಿಕೊಳ್ಳುವುದು ಹಾಗೂ ಸ್ಯಾನಿಟೈಸರ್ ಬಳಸುವುದು ತಪ್ಪಿನಲ್ಲಿ ರಕ್ಷಣಾ ಇಲಾಖೆ ನಡೆಸುವ ತಪಾಸಣಾ ಸಂಧರ್ಭದಲ್ಲಿ ಸಿಲುಕಿಕೊಂಡವರ ವಿರುದ್ದ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮವನ್ನು ಜಿಲ್ಲೆಯ ಪೋಲಿಸ್ ಅಧಿಕ್ಷಕರವರ ಆದೇಶದ ಮೇಲೆ ಕ್ರಮ ಜರುಗಿಸಲಾಗುವುದೆಂಬುದಾಗಿ ಎಚ್ಚರವನ್ನು ನೀಡಿದರು ಇದೇ ದಿನ ಹೊಸಕೆರೆಯ ಬಸ್ ನಿಲ್ದಾಣದ ಬಳಿಯೂ ಕೊವಿಡ್-19ರ ವಿರುದ್ದ ಜನಾಂದಲೋನ ಕಾರ್ಯಕ್ರಮ ನೆರವೇರಿಸಿದರು, ಸದರಿ ಕಾರ್ಯಕ್ರಮದಲ್ಲಿ ಎ.ಎಸ್.ಐ. ತಾರಾಸಿಂಗ್, ಪ್ರಕಾಶ್ ಮುಖ್ಯಪೇದೆ ಸಂಜೀವಯಾಪ್ಪ, ಪಿ.ಸಿ.ರವಿ, ಶ್ರೀನಿವಾಸ, ಪೇದೆ ಪುಂಡಲಿಕ, ಇನ್ನು ಮುಂತಾದವರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
