ಬಾಳೆಹಣ್ಣು ಪೆಟ್ಟು ತಿಂದು ಭಯಭೀತರಾದ ಅರ್ಚಕರು

ಹುಳಿಯಾರು:

     ರಥ ಎಳೆಯುವ ಮುನ್ನವೇ ಭಕ್ತರು ತೇರಿಗೆ ಬಾಳೆಹಣ್ಣು ಎಸೆಯುವ ಮೂಲಕ ರಥೋತ್ಸವ ಕೊಂಚ ತಡವಾಗುವುದಕ್ಕೆ ಕಾರಣವಾದ ಘಟನೆ ಹುಳಿಯಾರು ಹೋಬಳಿಯ ಚಿಕ್ಕಬಿದರೆಯಲ್ಲಿ ಜರುಗಿದೆ.

      ಚಿಕ್ಕಬಿದರೆಯ ಏಳುಹಳ್ಳಿ ಕರಿಯಮ್ಮ ದೇವಿಯವರ ಜಾತ್ರಾ ಮಹೋತ್ಸವದ ಅಂಗವಾಗಿ ರಥೋತ್ಸವ ಏರ್ಪಡಿಸಲಾಗಿತ್ತು. ಈ ರಥೋತ್ಸವದಲ್ಲಿ ಪಾಲ್ಗೊಳ್ಳಲು ದೊಡ್ಡಬಿದರೆ ಕರಿಯಮ್ಮ, ಪೋಚಕಟ್ಟೆ ಕರಿಯಮ್ಮ, ಕೋಡಿಹಳ್ಳಿ ಕೋಲ್ಲಾಪುರದಮ್ಮ ದೇವರುಗಳು ಆಗಮಿಸಿದ್ದವು.

      ಚಿಕ್ಕಬಿದರೆ ಕರಿಯಮ್ಮನ ದೇವರ ಜೊತೆ ಜಾತ್ರಾಮಹೋತ್ಸವಕ್ಕೆ ಆಗಮಿಸಿದ್ದ ಉಳಿದ ದೇವರುಗಳನ್ನು ರಥದಲ್ಲಿ ಕುಳ್ಳಿರಿಸಿ ತೇರು ಎಳೆಯುವುದು ಇಲ್ಲಿನ ವಾಡಿಕೆ. ಹಾಗೂ ರಥ ಎಳೆಯುವ ಸಂದರ್ಭದಲ್ಲಿ ಭಕ್ತರು ರಥಕ್ಕೆ ಬಾಳೆಹಣ್ಣು ಎಸೆಯುವ ಮೂಲಕ ಭಕ್ತಿಬಾವ ಪ್ರದರ್ಶಿಸುವುದು ಪದ್ಧತಿ.

      ಅದರಂತೆ ರಥಕ್ಕೆ ಶ್ರೀ ಕರಿಯಮ್ಮ ದೇವಿ ಸಹಿತ ಉಳಿದ ದೇವರುಗಳನ್ನು ಕುಳ್ಳಿರಿಸಲು ಅರ್ಚಕರುಗಳು ಮುಂದಾದರು. ರಥ ಎಳೆಯುವ ಸಂದರ್ಭದಲ್ಲಿ ಎಸೆಯಬೇಕಿದ್ದ ಬಾಳೆಹಣ್ಣನ್ನು ರಥಕ್ಕೆ ದೇವರು ಕುಲ್ಳಿರಿಸುವ ಸಂದರ್ಭದಲ್ಲೇ ಎಸೆಯಲು ಭಕ್ತರು ಮುಂದಾದರು. ಯುವ ಭಕ್ತರಂತು ಬಾಳೆಹಣ್ಣು ಎಸೆಯುವುದು ತಮ್ಮ ಶಕ್ತಿ ಪ್ರದರ್ಶನಕ್ಕೆ ಮೀಸಲಿಟ್ಟಿದ್ದರು.

      ಪರಿಣಾಮ ದೇವರನ್ನು ರಥದ ಮೇಲೆ ಕುಳ್ಳಿರಿಸಲಕು ಆಗದಂತೆ ತಡೆಯೊಡ್ಡುವ ಮಟ್ಟಕ್ಕೆ ವೇಗದಿಂದಲೂ ಮೇಲಿಂದ ಮೇಲೆ ಬಾಳೆಹಣ್ಣು ಎಸೆದರು. ಮೂರ್ನಲ್ಕು ಬಾರಿ ರಥಕ್ಕೆ ದೇವರನ್ನು ಕರೆದುಕೊಳ್ಳುವ ವಿಫಲಪ್ರಯತ್ನ ನಡೆಸಿದರಾದರೂ ಬಾಳೆಹಣ್ಣಿನ ಹೊಡೆದ ಅರ್ಚಕರ ತಳ್ಮೆ ಕಡೆಸಿತ್ತು. ಕೆಲವೊತ್ತು ರಥಕ್ಕೆ ದೇವರನ್ನು ಕರೆತರುವುದನ್ನು ನಿಲ್ಲಿಸಿ ಬಾಳೆಹಣ್ಣು ಎಸೆಯದಂತೆ ಮನವಿ ಮಾಡಿದರು.

         ಆದರೂ ಕೇಳದೆ ಭಕ್ತರು ಮೇಲಿಂದ ಮೇಲೆ ಬಾಳೆಹಣ್ಣು ಎಸೆಯುತ್ತಲೇ ಇದ್ದರು. ಈ ಸಂದರ್ಬದಲ್ಲಿ ಅರ್ಚಕರು ಬಾಳೆಹಣ್ಣು ಏಟು ತಿನ್ನಲಾಗದೆ ರಥದ ಕಂಬದ ಮರೆಯಲ್ಲಿ ಅವಿತುಕೊಂಡರು. ಕೆಲ ಅರ್ಚಕರು ಕೈಮುಗಿದು ಮನವಿ ಮಾಡಿದರು. ಹೀಗೆ ಹತ್ತದಿನೈದು ನಿಮಿಷ ನಡೆದ ತರುವಾಯ ಭಕ್ತರು ಬಾಳೆಹಣ್ಣು ಎಸೆಯುವುದನ್ನು ನಿಲ್ಲಿಸಿದರು. ನಂತರ ದೇವರುಗಳನ್ನು ರಥಕ್ಕೆ ಕುಳ್ಳಿರಿಸಿ ತೇರು ಎಳೆಯಲಾಯಿತು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link