ಮನೆಗಳ ಮೇಲೆ ವಿದ್ಯುತ್ ತಂತಿ, ಕಂಬ ತೆರವಿಗೆ ಮನವಿ

ದಾವಣಗೆರೆ:

       ವಿದ್ಯುತ್ ತಂತಿಗಳು ಮನೆಗಳ ಮೇಲೆ ಹಾದು ಹೋಗಿರುವ ಕಾರಣ, ವಿದ್ಯುತ್ ಕಂಬಗಳನ್ನು ತೆರವುಗೊಳಸಬೇಕೆಂದು ಎಸ್.ಪಿ.ಎಸ್ ನಗರದ ನಿವಾಸಿ ಟಿ. ಶ್ರೀಧರ ಒತ್ತಾಯಿಸಿದರು.ನಗರದ ಜಿಲ್ಲಾಡಳಿತ ಭವನದಲ್ಲಿ ಸೋಮವಾರ ಅಪರ ಜಿಲ್ಲಾಧಿಕಾರಿ ಪದ್ಮ ಬಸವಂತಪ್ಪನವರ ಅಧ್ಯಕ್ಷತೆಯಲ್ಲಿ ನಡೆದ ಜನಸ್ಪಂದನ ಸಭೆಯಲ್ಲಿ ಮನವಿ ಸಲ್ಲಿಸಿದ ಅವರು, ಮಹಾನಗರ ಪಾಲಿಕೆಯ ವ್ಯಾಪ್ತಿಯ ಎಸ್.ಪಿ.ಎಸ್ ನಗರದ 1ನೇ ಹಂತ, 3ನೇ ಕ್ರಾಸ್‍ನಲ್ಲಿ 11 ಕೆ.ವಿ ವಿದ್ಯುತ್ ಕಂಬದ ವೈರ್‍ಗಳು ವಾಸದ ಮನೆಗಳ ಮೇಲೆ ಹಾದುಹೋಗಿದ್ದು, ಆದ್ದರಿಂದ ಇಲ್ಲಿಯ ಜನತೆ ಭಯದಲ್ಲೇ ಜೀವನ ನಡೆಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ವಿದ್ಯುತ್ ಕಂಬ ತೆರವುಗೊಳಿಸಿ, ನೆಮ್ಮದಿಯ ಜೀವನ ನಡೆಸಲು ಅನುವು ಮಾಡಿಕೊಡಬೇಕೆಂದು ಮನವಿ ಮಾಡಿದರು.

      ಇದಕ್ಕೆ ಪ್ರತಿಕ್ರಯಿಸಿದ ಅಪರ ಜಿಲ್ಲಾಧಿಕಾರಿ ಪದ್ಮ ಬಸವಂತಪ್ಪನವರು, ಬೆಸ್ಕಾಂ ಇಲಾಖೆಗೆ ಈ ಬಗ್ಗೆ ತಿಳಿಸಿ ಸಮಸ್ಯೆ ನಿವಾರಿಸುವಂತೆ ಸೂಚಿಸಲಾಗುವುದು ಎಂದು ಭರವಸೆ ನೀಡಿದರು

        ದಾವಣಗೆರೆ ತಾಲ್ಲೂಕಿನ ಕೊಡಗನೂರು ಗ್ರಾಮದಲ್ಲಿ ಕರ್ನಾಟಕ ಅಬಕಾರಿ ನಿಯಮಾಳಿಗಳನ್ನು ಉಲ್ಲಂಘನೆ ಮಾಡಿ, ಮದ್ಯದ ಅಂಗಡಿಯನ್ನು ತೆರೆಯಲು ನೀಡಿರುವ ಅನುಮತಿ ಪರವಾನಿಗೆಯನ್ನು ರದ್ದು ಪಡಿಸಬೇಕೆಂದು ಗ್ರಾಮದ ಹೆಚ್.ತಿಮ್ಮಪ್ಪ ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಅಪರ ಜಿಲ್ಲಾಧಿಕಾರಿ, ಈ ಕುರಿತು ಅಬಕಾರಿ ಇಲಾಖೆಯ ಆಯುಕ್ತರಿಗೆ ತಿಳಿಸಿ ಸಮಸ್ಯೆ ನಿವಾರಿಸುವಂತೆ ಸೂಚಿಸುವುದಾಗಿ ತಿಳಿಸಿದರು.

       ಲೋಕಿಕೆರೆ ಗ್ರಾಮದ ಎಂ.ಕೆ ಅಂಜಿನಪ್ಪ ಎಂಬಾವರು ತತ್ಕಾಲ್ ಪೋಡಿಗಾಗಿ ಮನವಿ ಸಲ್ಲಿಸಿದರು. ಅಪರ ಜಿಲ್ಲಾಧಿಕಾರಿಗಳು ಅರ್ಜಿಗಳನ್ನು ಸಾಮಾಜಿಕ ಭದ್ರತೆ ಶಾಖೆಯ ವಿಷಯ ನಿರ್ವಾಹಕರಿಗೆ ನೀಡಿ, ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಹರಿಹರ ತಾಲ್ಲೂಕಿನ ಧೂಳೆಹೊಳೆ ಗ್ರಾಮದ ಕಮಲಮ್ಮ ಅರ್ಜಿ ಸಲ್ಲಿಸಿ, ಗ್ರಾಮದ ರಿ.ಸ.ಸಂ 86/10 ರಲ್ಲಿ 3 ಎಕರೆ ಜಮೀನನ್ನು ಪಾಲು ವಿಭಾಗ ಮಾಡಿಸಲು ಹೋದಾಗ ಡಾಟಾ ಎಂಟ್ರಿಯಲ್ಲಿ ಸರ್ಕಾರಿ ಎಂದು ತೋರಿಸುತ್ತಿದ್ದು, ಚಾಲ್ತಿ ಪಹಣಿಯಲ್ಲಿ ಕಮಲಮ್ಮ, ಲೋಕೆಶಪ್ಪ, ಜಾನಪ್ಪ, ಜಟ್ಯಪ್ಪ, ತಿಪ್ಪಣ್ಣ ಮತ್ತು ಭರಮಪ್ಪ ಇವರುಗಳ ಜಂಟಿ ಹೆಸರುಗಳು ಬರವಂತೆ ಸರಿಪಡಿಸಿಕೊಡಿ ಎಂದು ಮನವಿ ಮಾಡಿದರು.
ದಾವಣಗೆರೆ ವಿಜಯನಗರ ಬಡಾವಣೆಯ ಗೋಪಾಲಮ್ಮ ಎಂಬುವವರು ವಿಕಲಚೇತನ ಮಗಳಿಗೆ ಒಂದು ಕೆಲಸ ಕೊಡಿಸುವಂತೆ ಮನವಿ ಸಲ್ಲಿಸಿದರು.

      ಹರಿಹರ ತಾಲ್ಲೂಕಿನ ದೂಳೆಹೊಳೆ ಗ್ರಾಮದ ಕೆ. ಹನುಮಂತಪ್ಪ ಹಾಗೂ ಇತರರು ಗ್ರಾಮದ ಸರ್ವೆ.ನಂ 26 ರಲ್ಲಿ 4-10 ಗುಂಟೆ ಜಮೀನನ್ನು ಸರ್ಕಾರವು ನಂದಿಗಾವಿ ಮೂಲಕ ನಿವೇಶನ ಇಲ್ಲದವರಿಗೆ ನಿವೇಶನ ಹಂಚಿ ಹಕ್ಕು ಪತ್ರ ನೀಡಲಾಗಿದೆ. ಇ-ಸ್ವತ್ತು ಮೂಲ ಗ್ರಾಮಠಾಣಾ ಹೊರಗಡೆ ಬರುತ್ತಿದೆ ಎಂದು ಮೌಖಿಕವಾಗಿ ತಿಳಿಸಿದ್ದು, ದೂಳೆಹೊಳೆ ಗ್ರಾಮದ ರಿ.ಸ.ನಂ 26 ರಲ್ಲಿ 4-10 ಗುಂಟೆ ಜಮೀನನ್ನು ಗ್ರಾಮ ಠಾಣಾ ವ್ಯಾಪ್ತಿಯಲ್ಲಿ ಸೇರ್ಪಡೆ ಮಾಡಲು ಹಾಗೂ ಹಂಚಿಕೆಯಾದ ನಿವೇಶನಗಳ ಕುರಿತು ಇ-ದಾಖಲೆ ಕೊಡಿಸುವಂತೆ ಮನವಿ ಮಾಡಿದರು.

       ತಾಲ್ಲೂಕಿನ ಕುಕ್ಕವಾಡ ಗ್ರಾಮದ ಡಿ.ಬಿ. ಮುರುಗೇಂದ್ರಪ್ಪ ಎಂಬುವವರು ಮನೆಯನ್ನು ಕಟ್ಟಿಕೊಳ್ಳಲು ಜಮೀನಿನಲ್ಲಿರುವ ಮರಳನ್ನು ಬಳಸಿಕೊಳ್ಳಲು ಅನುಮತಿ ನೀಡುವಂತೆ ಮನವಿ ಸಲ್ಲಿಸಿದರು.

       ಸಭೆಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳಾದ ರೇಷ್ಮ ಹಾನಗಲ್, ಡಿಹೆಚ್‍ಓ ಡಾ.ತ್ರಿಪುಲಾಂಬ, ಜಿಲ್ಲಾ ವಿಕಲಚೇತನಾಧಿಕಾರಿ ಶಶಿಧರ್, ಡಾ.ಸಿದ್ದೇಶ್ ಇತರರು ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link