ಪಾನಮತ್ತನಿಂದ ಅನುಚಿತ ವರ್ತನೆ : ಪ್ರಕರಣ ದಾಖಲು

ಮಧುಗಿರಿ    ಮಹಿಳಾ ಭದ್ರತಾ ಸಿಬ್ಬಂದಿಯೊಬ್ಬರ ಮೇಲೆ ಪಾನ ಮತ್ತ್ತ ವ್ಯಕ್ತಿಯೊಬ್ಬ ಮೈ ಮುಟ್ಟಿ ನಿಂದಿಸಿರುವ ಘಟನೆ ಬುಧವಾರ ಸಂಜೆ ಸುಮಾರು 4 ರ ಸಮಯದಲ್ಲಿ ನಡೆದಿದೆ.

    ಪಟ್ಟಣದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದಲ್ಲಿ ಎಂದಿನಂತೆ ನಿಲ್ದಾಣದ ಮುಖ್ಯದ್ವಾರದಲ್ಲಿ ಮಹಿಳಾ ಭದ್ರತಾ ಸಿಬ್ಬಂದಿ  ಕರ್ತವ್ಯ ನಿರ್ವಹಿಸುತ್ತಿದ್ದರು. ಬಸ್ ಬಗ್ಗೆ ವಿಚಾರಿಸುವ ನೆಪದಲ್ಲಿ ಬಂದ ಆರೋಪಿಯು ಮಹಿಳೆಯ ಮೈ ಮುಟ್ಟಿದ್ದಾನೆ. ಇದರಿಂದ ಕುಪಿತಗೊಂಡ ಮಹಿಳಾ ಸಿಬ್ಬಂದಿ ಪೊಲೀಸರಿಗೆ ಕರೆ ಮಾಡಿದಾರೆ. ಪೊಲೀಸ್ ಸಿಬ್ಬಂದಿ ಬಂದು ಕಂಠ ಪೂರ್ತಿ ಯಾಗಿ ಕುಡಿದು ಗಲಾಟೆ ಮಾಡಿದ್ದ ಕೊಡಿಗೇನಹಳ್ಳಿ ಹೋಬಳಿಯ ದೊಡ್ಡ ಮಾಲೂರು ಗ್ರಾಮದ ವಾಸಿ ಸೋಮಶೇಖರ್‍ನನ್ನು ಠಾಣೆಗೆ ಕರೆದು ಕೊಂಡು ಹೋಗಿದ್ದಾರೆ. ಆದರೆ ಆರೋಪಿಯು ಅಲ್ಲಿಯು ಸಹ ಪೊಲೀಸ್ ಸಿಬ್ಬಂದಿಯನ್ನು ನಿಂದಿಸಿದ್ದಾನೆ ಎನ್ನಲಾಗಿದ್ದು, ಪ್ರಕರಣ ದಾಖಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap