ತಿಪಟೂರು
ಬೆನ್ನಾಯಕನಹಳ್ಳಿ, ಕರಡಿ ಶೆಟ್ಟಿಹಳ್ಳಿ ಸುತ್ತಮುತ್ತಲಿನ ಅನೇಕಾರು ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಹಾಹಕಾರವಿದ್ದರು ಅಧಿಕಾರಿಗಳು ಕೆಲ ವ್ಯಕ್ತಿಗಳ ಮಾತು ಕೇಳಿ ನೀರಿನ ಸಮಸ್ಯೆ ಬಗೆಹರಿಸುತ್ತಿಲ್ಲಾವೆಂದು ಮಾಜಿ ತಾ.ಪಂ ಅಧ್ಯಕ್ಷ ಎಂ.ಎನ್ ಸುರೇಶ್ ಅಧಿಕಾರಿಗಳ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದರು.
ನಗರದ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಸೋಮವಾರ ನಡೆದ 2019-20ನೇ ಸಾಲಿನ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು ಕೆಲ ಗ್ರಾಮಗಳಲ್ಲಿ ಅರ್.ಓ ಘಟಕಗಳು, ಪೂರ್ಣವಾಗಿದ್ದರು ಕೆಲ ಪ್ರಭಾವಿ ವ್ಯಕ್ತಿಗಳ ಮಾತು ಕೇಳಿ ಈ ಹಳ್ಳಿಗಳಿಗೆ ನೀರು ಪೂರೈಸುತ್ತಿಲ್ಲಾ, ಇನ್ನೂ ಹೊಸದಾಗಿ ಕೊಳವೆ ಬಾವಿ ಕೊರೆಯಲು ಯೊಜನೆ ಮಾಡಿದ್ದರು ಇದರ ಬಗ್ಗೆ ಗಮನ ಹರಿಸಿಲ್ಲಾ ಇದನ್ನು ನೋಡಿದರೆ ಅಧಿಕಾರಿಗಳ ವರ್ತನೆ ಯಾವ ಮಟ್ಟಕ್ಕಿದೆ ಎಂದರು.
ಇದರ ಬಗ್ಗೆ ಶಾಸಕರಿಗೆ, ನಮ್ಮ ಜಿಲ್ಲಾ ಮಂತ್ರಿಗೆ, ಸಂಸದರಿಗೆ, ಜಿ.ಪಂ ಕಾರ್ಯನಿರ್ವಾಣಾಧಿಕಾರಿಗೆ ದೂರು ಕೊಟ್ಟು, ಈ ಗ್ರಾಮಗಳಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸುವಂತೆ ಕೇಳಿಕೊಂಡರು.ಇಲಾಖೆಯ ಕೆಲ ಅಭಿವೃದ್ಧಿ ಕೆಲಸಗಳಿಗೆ ಸಂಭಂದಪಟ್ಟ ಅಧಿಕಾರಿಗಳನ್ನು ಹಾಗೂ ಜನಪ್ರತಿನಿದಿಗಳನ್ನು ಕರೆಯದೆ ಎಜೆನ್ಸಿಯವರು ಭೂಮಿ ಪೂಜೆ ಮಾಡುತ್ತಿರುವುದು ಎಷ್ಟು ಸರಿ, ಇಲಾಖೆಗಳಿಗೆ ಅನುದಾನ ಮಾಡಲು ಪಂಚಾಯತಿ ಬೇಕು ಇದರ ಪೂಜೆಗೆ ಮಾತ್ರ ಬೇಡವೆಂದರೆ ಹೇಗೆ ಎಂದು ಅಧ್ಯಕ್ಷ ಶಿವಸ್ವಾಮಿ ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಎ.ಇ.ಇ ಮಲ್ಲಿಕಾರ್ಜುನ್ ಆಡಳಿತ ಪಕ್ಷದ ಕಾರ್ಯಕರ್ತರೆ ಕಾಮಗಾರಿಗಳ ಪೂಜಾ ಕಾರ್ಯಕ್ಕೆ ಸಾರ್ವಜನಿಕರನ್ನು ಕರೆತುತ್ತಾರೆ, ಹಾಗಾಗಿ ನಾವು ಕರೆದಿಲ್ಲಾ ಎಂದು ಉತ್ತರಿಸಿದಕ್ಕೆ, ಸಿಟ್ಟು ಗೆದ್ದ ಸದಸ್ಯರು ನಾವು ಕೂಡ ಜನರಿಂದ ಅಯ್ಕೆಯಾಗಿರುವವರೆ ನಮ್ಮನ್ನು ಪರಿಗಣನೆಗೆ ತೆಗೆದುಕೊಳ್ಳದೆ ಇದ್ದರೆ ಇದರ ಪರಿಣಾಮ ಎದುರಿಸ ಬೇಕಾಗುತ್ತದೆ ಎಂದು ಎಲ್ಲರೂ ಒಕ್ಕೊರಿಲಿನಿಂದ ಹೇಳಿದರು.ಮದ್ಯ ಪ್ರವೇಶಿಸಿ ಮಾತನಾಡಿದ ಇಇಓ ಸುದರ್ಶ್ನ್ ಈ ಇಲಾಖೆಗೆ ಸಂಬಂಧ ಪಟ್ಟ ಜನಪ್ರತಿನಿಧಿಗಳನ್ನು ಪ್ರೋಟೋ ಕಾಲ್ ಮುಖಾಂತರ ಕರೆಯಲೇ ಬೇಕು ಯಾರು ಯಾರನ್ನು ನಿರ್ಲಕ್ಷಿಸುವಂತಿಲ್ಲಾ, ಇದು ನಿಮ್ಮ ಸ್ವಂತ ಕೆಲಸವಲ್ಲಾ, ಇವು ಸರಕಾರಿ ಯೋಜನೆಗಳು ಮುಂದೆ ಈ ರೀತಿ ನಡೆದರೆ ನಿರ್ದಾಕ್ಷಣವಾಗಿ ಕ್ರಮ ಜರುಗಿಸಲಾಗುವುದು ಎಂದರು.
ಅರೋಗ್ಯ ಇಲಾಖೆಯ ಟಿ.ಎಚ್.ಓ ಮಾತನಾಡಿ ಇಲ್ಲಿಯವರೆಗೂ ನಾಲ್ಕು ಡೆಂಗ್ಯೂ ಪ್ರಕರಣಗಳು ದಾಖಲಾಗಿವೆ, ಚಿಕನ್ ಗುನ್ಯಾ ಮತ್ತು ಮಲೇರಿಯಾ ಕಂಡು ಬಮದಿಲ್ಲಾ ಆದರೆ ಕೆಲ ಖಾಸಗಿ ವೈದ್ಯರು ರೋಗಿಯ ರಕ್ತದ ಪ್ಲೇಟ್ ಲೇಟ್ಸ್ ಕಡಿಮೆಯಾಗಿದೆ ಎಂದು ಇದು ಡೆಂಗ್ಯೂ ಪ್ರಕರಣ ಎಂದು ಜನರಿಗೆ ಎದರಿಸುತ್ತಿದ್ದಾರೆ ಈ ರೀತಿಯ ದೂರು ಬಂದರೆ ಸಂಬಂಧ ಪಟ್ಟ ಅಸ್ಪತ್ರೆಗಳ ಮೇಲೆ ಕ್ರಮ ಜರುಗಿಸಲಾಗುವುದು.ಸಭೆಯಲ್ಲಿ ತಾ.ಪಂ, ಇ.ಇ.ಓ ಸುದರ್ಶ್ನ್, ಉಪಾಧ್ಯಕ್ಷ ಶಂಕರ್, ಸ್ಥಾಯಿ ಸಮಿತಿ ಅಧ್ಯಕ್ಷೆ ಜಯಂತಿ ಕುಮಾರ್, ತಾ.ಪಂ ಸದಸ್ಯರುಗಳು, ಇಲಾಖಾ ಅಧಿಕಾರಿಗಳು ಮತ್ತಿತರರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
