ಹರಪನಹಳ್ಳಿ:
ಕಾರ್ಯಕ್ರಮಗಳನ್ನು ವ್ಯವಸ್ಥಿತವಾಗಿ ಮಾಡುವಾಗ ಅಲ್ಲಿ ಎಷ್ಟು ಜನ ಸೇರುತ್ತಾರೆ ಎಂಬುದಕ್ಕಿಂತ ಅವರಿಗೆ ಉತ್ತಮ ರೀತಿಯ ಸ್ಪಂದನೆ ದೊರೆಯುತ್ತದೆ ಎಂದು ವೈದ್ಯ.ಕೆ.ಎಂ.ಖಾನ್ ಹೇಳಿದರು.
ಪಟ್ಟಣದ ಕೊಟ್ಟೂರು ರಸ್ತೆ ಬಳಿ ಇರುವ ಮಸೀದಿಯಲ್ಲಿ ಅಲ್ಪಸಂಖ್ಯಾತರ ಸಮಾವೇಶದ ನಿಮಿತ್ತಾ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅಲ್ಪಸಂಖ್ಯಾತರು ಎಂದರೆ ಬರೀ ಮುಸ್ಲಿಂರಲ್ಲ, ಬುದ್ದ, ಕ್ರೈಸ್ರಾ, ಶಿಖ್, ಪಾರ್ಸಿಯಾ ಸೇರಿದಂತೆ ವಿವಿಧ ಹಿಂದುಳಿದ ಜಾತಿಗಳು ಅಲ್ಪಸಂಖ್ಯಾತರ ಪಟ್ಟಿಯಲ್ಲಿ ಬರುತ್ತಿದ್ದು ಆ ಜಾತಿಗಳ ಮುಖಂಡರನ್ನು ಕರೆಸಿ ಸಮಾವೇಶ ಮಾಡಬೇಕು ಹಾಗೂ ಸಂಘಟನೆಯ ಮೂಲಕ ಸರಕಾರದಿಂದ ಬರುವ ಸೌಲಭ್ಯಗಳನ್ನು ಪಡೆಯಲು ಸಂಘಟನೆ ಅತೀಅವಶ್ಯಕವಾಗಿ ಎಂದರು.
ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಎ.ಮೂಸಾಸಾಬ್ ಮಾತನಾಡಿ ಕಳೇದ ಐದಾರು ವರ್ಷಗಳಿಂದ ಅಲ್ಪಸಂಖ್ಯಾತರ ಸಮಾವೇಶ ಮಾಡುವ ನಿಟ್ಟಿನಲ್ಲಿ ಅನೇಕ ಸಭೆಗಳನ್ನು ನಡೆಸಿದ್ದೇವೆ. ಹರಪನಹಳ್ಳಿ ತಾಲೂಕಿನಲ್ಲಿ ಅಲ್ಪಸಂಖ್ಯಾತರ ವಿಭಾಗದಲ್ಲಿ ಶಿಖ್, ಭೌದ್, ಪಾರ್ಶಿಯಾ ಧರ್ಮದವರು ಇಲ್ಲ, ಮುಖ್ಯವಾಗಿ ಮುಸ್ಲಿಂ, ಕ್ರೀಸ್ಚಿಯನ್, ಜೈನ್ ಧರ್ಮದವರು ಇದ್ದು, ಇವರನ್ನು ಒಳಗೊಂಡು ಸಮಾವೇಶವನ್ನು ನವೆಂಬರ್ ಅಥವಾ ಡಿಸೆಂಬರ್ನಲ್ಲಿ ಸಮಾವೇಶ ಮಾಡುವ ನೀರಿಕ್ಷೆ ಇದೆ. ಮುಖ್ಯಮಂತ್ರಿ ಕುಮಾರಸ್ವಾಮಿ, ಮಾಜಿ ಪ್ರಧಾನಿ ದೇವೆಗೌಡ, ಅಲ್ಪಸಂಖ್ಯಾತರ ಸಚಿವ ಜಮೀರ್ ಅಹ್ಮದ್ಖಾನ್, ಬರುವ ನೀರಿಕ್ಷೆ ಇದೆ ಎಂದು ಹೇಳಿದರು.
ಅಂಜುಮನ್ ಅಧ್ಯಕ್ಷ ಸಿ.ಜಾವೀದ್ ಮಾತನಾಡಿ ಅಲ್ಪಸಂಖ್ಯಾತರ ಸೌಲಭ್ಯಗಳನ್ನು ನಮ್ಮ ಹೆಸರಿನಲ್ಲಿ ಬೇರೆಯವರು ಬಳಸಿಕೊಳ್ಳುತ್ತಿದ್ದಾರೆ ಆದ್ದರಿಂದ ಸಂಘಟನೆಯ ಮೂಲಕ ಜಾಗೃತರಾಗಿ ಸರಕಾರದ ಸೌಲಭ್ಯಗಳನ್ನು ಬಳಸಿಕೊಳ್ಳಲು ಮುಂದಾಗಬೇಕು ಎಂದರು.
ಹೊಸಪೇಟೆ ರಸ್ತೆಯ ಪಾಧರ್ ನೀಲ್ ಅರ್ಮಸ್ರ್ಟ್ರಾಂಗ್ ಮಾತನಾಡಿ ಕಳೆದ ಇಪ್ಪತ್ತು ವರ್ಷದಿಂದ ಮುಸ್ಲಿಂ ಸಮುದಾಯದ ಜೊತೆಗೆ ನಿಕಟ ಸಂಪರ್ಕಹೊಂದಿದ್ದು, ಅಲ್ಪಸಂಖ್ಯಾತರದ ನಾವುಗಳು ಐಕ್ಯತೆಯಿಂದ ಹೋರಾಟದ ಮನೋಭಾವನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಸಭೆಯಲ್ಲಿ ಸಿಸ್ಟರ್ ಸುಂದರಿ, ಸರಕಾರಿ ಮುಸ್ಲಿಂ ನೌಕರರ ಸಂಘದ ಅಧ್ಯಕ್ಷ ದಾದಖಲಂದರ್, ಎಂ.ಷರೀಪ್, ಡಿ.ಮೆಹಬೂಬ್ಸಾಬ್, ಅಕ್ರಮಭಾಷ, ಪದ್ಮರಾಜಜೈನ್, ಡಂಕಿ ಇಮ್ರಾನ್, ನಿ.ಶಿ.ಅಮ್ಮಿದ್,ಮಾತನಾಡಿದರು.ಈ ಸಂದರ್ಭದಲ್ಲಿ ಬಡಿಗಿ ರಹಮತುಲ್ಲಾ, ಜಾವೂರ್, ಎಚ್.ಎಸ್.ಸಹ್ಯದ್, ಬಿ.ರಿಯಾಜ್, ಸುಲೇಮಾನ್ರಾಜ್, ಜಮೀರ್, ಎಸ್.ಎಚ್.ಅಮಾನುಲ್ಲಾ, ಡಿ.ಮೆಹಬೂಬ್ ಸೇರಿದಂತೆ ಮತ್ತಿತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
