ತುರುವೇಕೆರೆ:
ಖಾಸಗಿ ಪೈನಾನ್ಸ್ಗಳು ಸಾಲ ವಸೂಲಾತಿ ನೆಪದಲ್ಲಿ ಜನರಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ರೈತ ಸಂಘದ ಅಧ್ಯಕ್ಷ ಶ್ರೀನಿವಾಸ್ ಆರೋಪಿಸಿದ್ಧಾರೆ.
ಪಟ್ಟಣದ ತಾಲೂಕು ಕಚೇರಿಯಲ್ಲಿ ಶನಿವಾರ ತಹಶಿಲ್ದಾರ್ ನಯಿಂಉನ್ನಿಸಾರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿ ಕೊರಾನ ರೋಗದಿಂದ ಲಾಕ್ ಡೌನ್ ಹಿನ್ನಲೇ ಗ್ರಾಮೀಣ ಹಾಗೂ ಪಟ್ಟಣದ ಕೂಲಿ ಕಾರ್ಮಿಕರು, ಬಡ ಜನರು ಕೆಲಸ ವಿಲ್ಲದೆ ಜೀವನ ನಿರ್ವಹಿಸುವುದೇ ಕಷ್ಟವಾಗಿದೇ ಇಂತಹ ಸಂದರ್ಬದಲ್ಲಿ ಸರ್ಕಾರ ಹಾಗೂ ಸಂಘ ಸಂಸ್ಥೆಗಳು ನೆರವಿಗೆ ದಾವಿಸಿ ದಿನಸಿ, ದಾನ್ಯ ಆಹಾರ ಪದಾರ್ತಗಳನ್ನು ನೀಡುತ್ತಿದೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರವೇ ಮೂರು ತಿಂಗಳು ಸಾಲದ ಕಂತುಗಳನ್ನು ಮುಂದೂಡಿ ಆದೇಶ ನೀಡಿದೆ. ಆದರೂ ಸಾಲ ನೀಡಿದ ಖಾಸಗಿ ಪೈನಾನ್ಸ್ ಗಳು ಸಾಲ ಕಂತುಗಳನ್ನು ಕಟ್ಟಿ ಎಂದು ಒತ್ತಾಯ ಮಾಡುತ್ತಿದ್ದಾರೆ ಇಂತಹ ಪೈನಾನ್ಸ್ ಗಳಿಗೆ ಸರ್ಕಾರ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದ್ಧಾರೆ.ಈ ಸಂದರ್ಬದಲ್ಲಿ ರೈತ ಸಂಘದ ಗೌರಾವಾದ್ಯಕ್ಷ ಅಸ್ಲಾಂಪಾಷ, ಪದಾಧಿಕಾರಿಗಳಾದ ನಾಗರಾಜು, ಶಂಕರ್, ಲೋಕೇಶ್, ರಾಜಣ್ಣ, ತಿಮ್ಮಪ್ಪ, ರಹಮತ್, ಜಾಫರ್, ಯುಗಂತ್ ಕುಮಾರ್ ಸೇರಿದಂತೆ ಇತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
