ಬೆಳಗಾವಿ ಡಿವೈಎಸ್ಪಿ ಪ್ರಿಯದರ್ಶಿನಿ ವಿವಾಹ

ಚಿತ್ರದುರ್ಗ

       ಬೆಳಗಾವಿಯ ಡಿವೈಎಸ್ಪಿ ಪ್ರಿಯದರ್ಶಿನಿ ಅವರು ಬುಧವಾರ ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ ಸರಳವಾಗಿ ವಿವಾಹವಾಗಿದ್ದಾರೆ
ಇಲ್ಲಿನ ಮುರುಘಾಮಠದಲ್ಲಿ ಜರುಗಿದ ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ ಪ್ರಿಯದರ್ಶಿನಿ ಅವರು ತೋಟಗಾರಿಕಾ ಕಾಲೇಜು ಪ್ರಾಧ್ಯಾಪಕ ಡಾ.ಸಂತೋಷ್ ಅವರ ಜೊತೆ ಸರಳವಾಗಿ ವಿವಾಹವಾಗುವ ಮೂಲಕ ತಮ್ಮ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

        ಈ ಇಬ್ಬರೂ ಜೋಡಿ ಉನ್ನತ ಹುದ್ದೆಯಲ್ಲಿದ್ದರೂ ಸರಳವಾಗಿ ವಿವಾಹವಾಗಿ ಹಲವರಿಗೆ ಮಾದರಿಯಾಗಿದ್ದಾರೆ. ಇದೇ ವೇಳೆ ಬೆಂಗಳೂರಿನ ಎಸ್‍ಬಿಐ ಬ್ಯಾಂಕಿನ ಮ್ಯಾನೇಜರ್ ರಂಗಮೂರ್ತಿ ಮತ್ತು ಶ್ರೇಷ್ಠ ಅವರೂ ಸಹ ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ ವಿವಾಹವಾದರು.

        ಕಾರ್ಯಕ್ರಮದ ಸಾನಿದ್ಯವಹಿಸಿದ್ದ ಡಾ.ಶಿವಮೂರ್ತಿ ಮುರುಘಾ ಶರಣರು ಮಾತನಾಡಿ, ಆದರ್ಶ ಕಲ್ಯಾಣ ಮಹೋತ್ಸವ ಪದ್ಧತಿ ವಿವಾಹಕ್ಕಿಂತಲೂ ಶ್ರೇಷ್ಠವಾದುದು ಇಲ್ಲಿ ಆಡಂಬರ ಇಲ್ಲ. ಇಲ್ಲಿ ಆದರ್ಶವೇ ಮುಖ್ಯ. ವರದಕ್ಷಿಣೆ ರಹಿತವಾದ ವಾತಾವರಣ ಸೃಷ್ಟಿಯಾಗುತ್ತದೆ ಎಂದು ಹೇಳಿದರು.

        ಸಂಪ್ರದಾಯಬದ್ಧ ವಿವಾಹದಲ್ಲಿ ಪುರೋಹಿತರು, ಶಾಸ್ತ್ರಗಳು, ವೈದಿಕರು, ಮೊದಲಾದವರು ಬರುತ್ತಾರೆ. ಪಂಚಾಂಗವನ್ನು ನೋಡುತ್ತಾರೆ. ಇಲ್ಲಿ ವೈದಿಕತೆಗೆ ಹೆಚ್ಚು ಪ್ರಾಧಾನ್ಯ. ಸಂಸ್ಕøತ ಶ್ಲೋಕಗಳು ಹೆಚ್ಚಿರುತ್ತವೆ. ಲಗ್ನದ ಸಮಯ ಹೆಚ್ಚು ಮಹತ್ವ ಪಡೆದುಕೊಳ್ಳುತ್ತದೆ. ಅದ್ಧೂರಿ ವಿವಾಹಗಳು ವಿವಾದ ಪಡೆದುಕೊಳ್ಳುತ್ತವೆ. ಕೊಡುವುದು ತೆಗೆದುಕೊಳ್ಳುವುದು ಹೆಚ್ಚಿರುತ್ತದೆ. ಇಲ್ಲಿ ವ್ಯವಹಾರ ಇರುತ್ತದೆ ಎಂದು ವಿಶ್ಲೇಷಿಸಿದರು

        ಆಡಂಬರದ ವಿವಾಹಗಳು ಹೆಚ್ಚು ದೊಡ್ಡ ದೊಡ್ಡ ನಗರಗಳಲ್ಲಿ ನಡೆಯುತ್ತವೆ. ಪೀಠೋಪಕರಣಗಳಿಗೆ ಹೆಚ್ಚಿನ ಅಲಂಕಾರ ಮಾಡುತ್ತಾರೆ. ಹೆಚ್ಚು ಖರ್ಚು ಮಾಡುತ್ತಾರೆ. ಇಲ್ಲಿ ಸ್ಪರ್ಧೆ ಹೆಚ್ಚಿರುತ್ತದೆ ಎಂದರು.

         ಬ್ಯಾಡಗಿಯ ಶ್ರೀ ಚನ್ನಮಲ್ಲಿಕಾರ್ಜುನ ಸ್ವಾಮಿಗಳು ಮಾತನಾಡಿ, ಮುರುಘಾಮಠವು ಇಂದು ವೈಚಾರಿಕ ದೃಷ್ಟಿ ಕೋನಗಳನ್ನಿಟ್ಟುಕೊಂಡು ಮುಂದೆ ಸಾಗುತ್ತಿದೆ. ಇಲ್ಲಿನ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು.

       ಆದರ್ಶ ವಿವಾಹವಾದ ಬೆಳಗಾವಿ ಡಿವೈಎಸ್ಪಿ ಪ್ರಿಯದರ್ಶಿನಿ ಮಾತನಾಡಿ, ಈ ಮಠದಲ್ಲಿ ನನ್ನ ಬಾಲ್ಯವನ್ನು ಮದುವೆಗಳಲ್ಲಿ ದುಂದುವೆಚ್ಚ ಮಾಡಬಾರದು. ಹೆಣ್ಣು ಭ್ರೂಣಹತ್ಯೆ ನಡೆಯುತ್ತಿದ್ದು, ಅದು ಆಗಬಾರದು. ನಾವು ಎಷ್ಟು ಸರಳವಾಗುತ್ತೇವೋ ಅಷ್ಟು ಒಳ್ಳೆಯದು. ಹೆತ್ತವರು ನನ್ನನ್ನು ಹೆಣ್ಣು ಎಂದು ಪರಿಗಣಿಸದೆ ಗಂಡು ಎಂದೇ ತಿಳಿದಿದ್ದರು. ಹೆಚ್ಚಿನ ಓದಿಗಾಗಿ ದೆಹಲಿ, ಹೈದರಾಬಾದ್ ಮೊದಲಾದ ಕಡೆ ಕಳುಹಿಸಿದರು. ನಾನು ಕರಾಟೆ ಪಟುವಾದೆ. ಕೆಎಎಸ್‍ನಲ್ಲಿ ಉತ್ತಮ ಅಂಕ ಗಳಿಸಿ ಇಂದು ಡಿವೈಎಸ್ಪಿ ಆಗಿದ್ದೇನೆ. ಇದಕ್ಕೆ ದೈವದ ಬಲ ಬೇಕು. ದೇವರು ಹಾಗು ಗುರುಗಳ ಆಶೀರ್ವಾದ ಇರುವವರು ಮಾತ್ರ ಸರಳ ವಿವಾಹವಾಗುತ್ತಾರೆ. ಅಂತಹ ಭಾಗ್ಯ ನನ್ನದಾಗಿದೆ. ನನ್ನ ಜೀವನದ ಪ್ರಮುಖ ಘಟ್ಟ. ಇದನ್ನು ಮರೆಯಲು ಸಾಧ್ಯವಿಲ್ಲ ಎಂದರು.

        ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯ ಕುಲಪತಿ ಇಂದಿರೇಶ್, ತುಮಕೂರು ಡಿವೈಎಸ್ಪಿ ಶಾಂತವೀರಪ್ಪ, ಶ್ರೀಮತಿ ಭಾವನಾ ಸಾಣಿಕೊಪ್ಪ ಮತ್ತು ಈಶ್ವರ ಎಂ ಸಾಣಿಕೊಪ್ಪ ವೇದಿಕೆಯಲ್ಲಿದ್ದರು. ಅಥಣಿ ಗಚ್ಛಿನಮಠದ ಶ್ರೀ ಶಿವಬಸವ ಸ್ವಾಮಿಗಳು, ತಿಳುವಳ್ಳಿ ಕಲ್ಮಠದ ಶ್ರೀ ಬಸವ ನಿರಂಜನಸ್ವಾಮಿಗಳು, ನಾಗಗೊಂಡನಹಳ್ಳಿ ಚೆಲುಮೆರುದ್ರಸ್ವಾಮಿ ಮಠದ ಶ್ರೀ ಬಸವಕಿರಣ ಸ್ವಾಮಿಗಳು, ಕವಲೆತ್ತು ಬಸವಕೇಂದ್ರದ ಶರಣೆ ಮುಕ್ತಾಯಕ್ಕ, ಶ್ರೀ ಬಸವ ಕುಂಬಾರ ತಿಪ್ಪೇಸ್ವಾಮಿಗಳು, ಎಸ್.ಜೆ.ಎಂ. ವಿದ್ಯಾಪೀಠದ ಕಾರ್ಯದರ್ಶಿ ಎ.ಜೆ. ಪರಮಶಿವಯ್ಯ, ಕಾರ್ಯನಿರ್ವಹಣಾಧಿಕಾರಿ ಎಂ.ಜಿ.ದೊರೆಸ್ವಾಮಿ, ಪೈಲ್ವಾನ್ ತಿಪ್ಪೇಸ್ವಾಮಿ, ಕೆಇಬಿ ಷಣ್ಮುಖಪ್ಪ, ಎಂ . ಎನ್ . ಬೊಮ್ಮಲಿಂಗಪ್ಪ ಮುಂತಾದವರಿದ್ದರು.ಇದೇ ಸಂದರ್ಭದಲ್ಲಿ ಸಂತೋಷಕುಮಾರ್ (ಒಕ್ಕಲಿಗ) – ಭಾವನಾ (ನಾಯಕ) ಅಂತರ್ಜಾತಿ ವಿವಾಹ ಸೇರಿದಂತೆ 22 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿರಿಸಿದರು.ಪ್ರಾರಂಭದಲ್ಲಿ ಜಮುರಾ ಕಲಾವಿದರು ವಚನ ಪ್ರಾರ್ಥನೆ ನಡೆಸಿಕೊಟ್ಟರು. ಜಮಖಂಡಿ ಬಸವಕೇಂದ್ರದ ಅಧ್ಯಕ್ಷ ರವಿ ಯಡಹಳ್ಳಿ ಸ್ವಾಗತಿಸಿದರು. ಪ್ರದೀಪಕುಮಾರ್ ನಿರೂಪಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link