ಪಾವಗಡ
ಪದವಿ ವಿದ್ಯಾರ್ಹತೆ ಮತ್ತು ಸೇನಾನುಭವ ಪಡೆದಿರುವ ಸೇವಾನಿರತ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ವೃಂದಕ್ಕೆ ಪದನಾಮಕರಿಸುವಂತೆ[ಸಿ. ಆಂಡ್ ಆರ್ ರೂಲ್] ನ್ನು ಓತ್ತಾಯಿಸಿ ಕರ್ನಾಟಕ ರಾಜ್ಯ ಸರ್ಕಾರಿ ಪ್ರಾಥಮಿಕ ಪಾಠಶಾಲಾ ಪದವೀಧರ ಶಿಕ್ಷಕರ ಸಂಘ ದಿಂದ ಪಟ್ಟಣದ ಬಿ.ಇ.ಓ. ಕಛೇರಿಯ ಮುಂಬಾಗ ಶನಿವಾರ ಸಾಂಕೇತಿಕ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗಿತ್ತು.
ಮಧುಗಿರಿ ಶೈಕ್ಷಣಿಕ ಜಿಲ್ಲಾ ಸಂಘದ ಅಧ್ಯಕ್ಷ ರಾಮೇಗೌಡ ಮಾತನಾಡಿ,ರಿಂದ 7 ನೇ ತರಗತಿಯ ಶಿಕ್ಷಕರನ್ನು 1ರಿಂದ 5 ರವರೆಗೆ ಹಿಂಬಡ್ತಿ ನೀಡಿರುವುದು ಸಮಂಜಸವಲ್ಲ, ಇಲಾಖೆಯಿಂದಲೇ ಅನುಮತಿ ಪಡೆದುಕೊಂಡು ಉನ್ನತ ವ್ಯಾಸಾಂಗ ಮಾಡಿದ್ದು ಹೀಗ ಏಕಾಎಖಿ 1 ರಿಂದ 5 ನೇ ತರಗತಿಗೆ ಹಿಂಬಡ್ತಿ ನಿಡಿದ್ದಾರೆ ಇದು ಸರಿಯಲ್ಲ2005 ರಿಂದ ರಿಂದ 8 ನೇ ತರಗತಿ ಪ್ರಾರಂಭವಾದಗಿನಿಂದಲೂ 6-8 ನೇ ತರಗತಿಗಳನ್ನು ಸೇವೆಯಲ್ಲಿರುವ ಪದವೀಧರ ಶಿಕ್ಷಕರು ಭೋದಿಸುತ್ತಾ ಬಂದಿರುತ್ತಾರೆ ರಾಜ್ಯದಲ್ಲಿ 82 ಸಾವಿರಕ್ಕಿಂತ ಅಧಿಕ ಪದವಿ ಪಡೆದ ಶಿಕ್ಷಕರು ಕಳೆದ 14 ವರ್ಷ ಗಳಿಂದ ಬೋದಿಸುತ್ತಾ ಬಂದಿದ್ದರೂ ಅವರಿಗೆ ಮುಂಬಡ್ತಿ ನೀಡದೇ, ಪ್ರಾಥಮಿಕ ಪಾಠಶಾಲಾ ಪದವೀಧರ ಶಿಕ್ಷಕ ಹುದ್ದೆಗಳನ್ನು 2 ಬಾರಿ ನೇಮಕ ಮಾಡಿ, ಹೀಗ ಮತ್ತೆ 3 ನೇ ಬಾರಿಗೆ ನೇಮಕ ಮಾಡಲು ಹೊರಟಿದೆ, ನಮ್ಮ ಈ ಬೇಡಿಕೆಯನ್ನು ಈಡೇರಿಸದಿದ್ದರೆ ಜುಲೈ 1 ರಂದು ರಾಜ್ಯಾದಾದ್ಯಂತ ಮುಷ್ಕರ ಆರಂಬಿಸುವುದಾಗಿ ಹೆಚ್ಚರಿಸಿದರು.
ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಗಳಿಸಿರುವ ಸಾದೀಕುಲ್ಲಾಷರೀಫ್ ಮಾತನಾಡಿ, 2017 ರಿಂದ ಸಿ. ಆಂಡಾರ್ ರೂಲ್ ಜಾರಿಗೆ ತಂದು ಶಿಕ್ಷಣದಲ್ಲಿ ಗುಣಾತ್ಮಕ ಶಿಕ್ಷಣ ನೀಡಲು ಜಾರಿಗೆ ತಂದಿದ್ದರೂ, ಅದರೇ ಸರ್ಕಾರ ಕಣ್ಣು ಹೊರೆಸುವ ತಂತ್ರ ಅನುಸುರಿಸುತ್ತಿದ್ದು ಗುಣಾತ್ಮಕ ಶಿಕ್ಷಣ ಹೆಸರಿನಲ್ಲಿ ಶಿಕ್ಷಕರನ್ನು ಬಲಿಪಶುಮಾಡುತ್ತಿದೆ, 1 ರಿಂದ 7 ನೇ ತರಗತಿಗೆ ನಮ್ಮನ್ನು ಆಯ್ಕೆ ಮಾಡಿ, 1 ರೀಂದ 5 ನೇ ತರಗತಿಗೆ ಪಾಠಮಾಡಲು ಹೇಳುವುದು ಯಾವ ನ್ಯಾಯ, 55 ಸಾವಿರ ಶಿಕ್ಷಕರನ್ನು ಹೆಚ್ಚುವರಿ ನೇಮಕಮಾಡಿದ್ದು, ಗುಣಾತ್ಮಕ ಶಿಕ್ಷಣ ನೀಡುವಲ್ಲಿ ಸರ್ಕಾರ ಎಡವುತ್ತಿದೆ, ನಮಗೆ ಹಿಂಬಡ್ತಿ ನೀಡಿ ನಮ್ಮ ಮೇಲೆ ದಬ್ಬಾಳಿಕೆ ಮಾಡುತ್ತಿದೆ, ಶಿಕ್ಷಕರು ದೇಶದ ಬೆನ್ನೆಲುಬು ಅವರಿಗೆ ನೋವುಂಟು ಮಾಡುವುದು ಸರಿಯಲ್ಲಾ ಎಂದು ಬೇಸರ ವ್ಯಕ್ತ ಪಡಿಸಿದರು. ಜಿಲ್ಲಾ ಸಂಘಟನಾ ಕಾರ್ಯದರ್ಶಿ ಪ್ರಕಾಶ್ನಾಯ್ಕ, ಆರ್. ರೂಪಾ, ತಾ. ಅಧ್ಯಕ್ಷ ಹರಿಕೃಷ್ಣ, ಉಪಾದ್ಯಕ್ಷ ಪ್ರಕಾಶ್,ಪ್ರಧಾನ ಕಾರ್ಯದರ್ಶಿ ನಾಗೇಂದ್ರ, ಖಜಾಂಚಿ ರಾಜಾನಾಯಕ ಮಾತನಾಡಿದರು.
ಬಿ.ಇ.ಒ. ಸಿದ್ದಗಂಗಯ್ಯಗೆ ಮನವಿ ಪತ್ರ ಸಲ್ಲಿಸಿದರು.ಧರಣಿಯಲ್ಲಿ ಗೌರವಾಧ್ಯಕ್ಷ ಚಿಕ್ಕೋಬಳಪ್ಪ, ಶಿಕ್ಷರಾಶದ ಮಲ್ಲೇಶಪ್ಪ ದುರ್ಗಮ್ಮ, ಆನಂದ್, ನರಸಿಂಹ,ಡಿ.ಎಸ್. ಸತ್ಯಾನಾರಾಯಣ, ಸಂದ್ಯಾರಾಣಿ,ಲತಾ, ಮತ್ತಿತರಿದ್ದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
