ಹರಪನಹಳ್ಳಿ
ಬಗರ್ ಹುಕ್ಕುಂ ಸಾಗುವಳಿದಾರರಿಗೆ ಪಟ್ಟಾ ವಿತರಿಸಬೇಕು ಹಾಗೂ 2017-18ನೇ ಸಾಲಿನ ಬೆಳೆ ಪರಿಹಾರ ಮತ್ತು ಬೆಂಬಲ ಬೆಲೆ ನಿರ್ಧರಿಸುವಂತೆ ಒತ್ತಾಯಿಸಿ ಪಟ್ಟಣದ ತಾಲೂಕು ಮಿನಿವಿಧಾನಸೌಧದ ಎದುರು ಸೋಮುವಾರ ಕರ್ನಾಟಕ ರಾಜ್ಯ ರೈತ ಸಂಘ ಹಸೀರು ಸೇನೆ ಹುಚ್ಚವ್ವನಹಳ್ಳಿ ಮಂಜುನಾಥ ಬಣ ತಾಲೂಕು ಸಮಿತಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.
ಜಿಲ್ಲಾಧ್ಯಕ್ಷ ಅರಸನಾಳು ಸಿದ್ದಪ್ಪ ಮಾತನಾಡಿ ಪ್ರತಿನಿತ್ಯವು ಅನ್ನದಾತನ ಮೇಲೆ ದೌರ್ಜನ್ಯ ದಬ್ಬಳಿಕೆ ನಡೆಯುತ್ತಲೇ ಇದೆ ಇದರಿಂದ ದೇಶದ ಬೆನ್ನೆಲುಬಾಗಿರುವ ರೈತರು ಆತ್ಮಹತ್ಯೆ ಇತ್ಯಾದಿಗಳ ಮೊರೆ ಹೋಗುವುದು ಮಾತ್ರ ನಿಂತಿಲ್ಲ ಎಂದೂ ಆರೋಪಿಸಿದರು.
ಸರಕಾರ ಇಲ್ಲಿಯವರೆಗೂ 2017-18ನೇ ಸಾಲಿನಲ್ಲಿ ಬೆಳೆಯಲಾಗಿದ್ದ ಬೆಳೆ ಪರಿಹಾರವನ್ನು ಸರಿಯಾಗಿ ನೀಡದೇ ರೈತರಿಗೆ ಅನ್ಯಾಯ ಮಾಡುತ್ತಿರುವುದು ಖಂಡನೀಯವಾಗಿದೆ ಎಂದರು.
ಪ್ರಧಾನ ಕಾರ್ಯದರ್ಶಿ ಎಚ್.ಚನ್ನಪ್ಪ ಮಾತನಾಡಿ ಸರಕಾರ ರೈತರು ಬೆಳೆದಂತಹ ಬೆಳೆಗೆ ವೈಜ್ಞಾನಿಕ ಬೆಲೆಯನ್ನು ನಿಗದಿಮಾಡಬೇಕು ಹಾಗೂ ತಾಲೂಕಿನಲ್ಲಿ ಬಗರ್ ಹುಕ್ಕುಂ ಸಾಗುವಳಿದಾರರಿಗೆ ಸ್ಥಳ ಪರಿಶೀಲಿಸಿ ನಿಜವಾದ ಸಾಗುವಳಿದಾರರಿಗೆ ಮಾತ್ರ ಪಟ್ಟ ಮಂಜೂರಾತಿ ಮಾಡಬೇಕು ಎಂದು ಆಗ್ರಹಿಸಿದರು.
ಕಸಬಾ ಹೋಬಳಿ ಆನಂತನಹಳ್ಳಿ ಗ್ರಾಮದ ಸರ್ವೇ ನಂಬರ್ 42/ಪಿರಲ್ಲಿ ಸಾಗುವಳಿ ಮಾಡಿರುವ ಸ್ಥಳೀಯ ರೈತರನ್ನು ಬಿಟ್ಟು ನಗರ ಪ್ರದೇಶದಲ್ಲಿ ವಾಸವಾಗಿರುವ ಶ್ರೀಮಂತರಿಗೆ ಪಟ್ಟಾ ಮಂಜೂರು ಮಾಡಿರುವುದರಿಂದ ಅವರ ಅರ್ಜಿಗಳನ್ನು ತಿರಸ್ಕರಿಸಬೇಕು ಮತ್ತು ಇವರುಗಳ ವಿರುದ್ಧ ಉಗ್ರವಾದ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.
ತಾಲೂಕು ಉಪಾಧ್ಯಕ್ಷ ಆಲೂರು ಶ್ರೀನಿವಾಸ, ಚೌಡಪ್ಪ, ಗಿಡ್ಡಹಳ್ಳಿ ತಿಮ್ಮಪ್ಪ, ಹನುಮಂತಪ್ಪ, ಸೋಮಶೇಖರ, ಪತ್ಯನಾಯ್ಕ, ಎಸ್.ಕೆಂಚಪ್ಪ, ಪರಸಪ್ಪ, ಬಾಣದ ಗಂಗಪ್ಪ, ಅರಸನಾಳು ಯಲ್ಲ್ಪ, ತಲುವಾಗಲು ಕರಿಯಪ್ಪ, ಕುಮಾರನಾಯ್ಕ, ಶೀಲ್ಯಾನಾಯ್ಕ, ಬಸವರಾಜ, ಶಶಿನಾಯ್ಕ, ಸಿದ್ದಣ್ಣ ಪ್ರತಿಭಟನೆಯಲ್ಲಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
