ತುರುವೇಕೆರೆ:
ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮದ ಗಂಗಾ ಕಲ್ಯಾಣ ಯೋಜನೆಯಡಿ ಮುಂಜೂರಾದ ತಾಲೂಕಿನ ಅಲ್ಪಸಂಖ್ಯಾತ 10 ಫಲಾನುಭವಿಗಳಿಗೆ ಶಾಸಕ ಮಸಾಲಾಜಯರಾಮ್ ಪಂಪು ಮೋಟಾರ್ ಸೆಟ್ಗಳನ್ನು ವಿತರಿಸಿದರು.
ಪಟ್ಟಣದ ಪೋಲೀಸ್ ಕ್ವಾಟ್ರಸ್ ಆವರಣದಲ್ಲಿ ಅಲ್ಪಸಂಖ್ಯಾತ ಫಲಾನುಭವಿಗಳಿಗೆ ಪಂಪ್ ಮೋಟರ್ ಸೆಟ್ ವಿತರಿಸಿ ಮಾತನಾಡಿದ ಶಾಸಕ ಮಸಾಲಾಜಯರಾಮ್ ಸರ್ಕಾರದ ಸವಲತ್ತುಗಳು ಅರ್ಹ ಫಲಾನುಭವಿಗಳಿಗೆ ಸಿಗುವಂತಾಗಬೇಕು, ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ಸರ್ಕಾರದ ಸವಲತ್ತುಗಳು ತಲುಪಿದಾಗ ಮಾತ್ರ ಯೋಜನೆಯ ಉದ್ದೇಶ ಈಡೇರಿದಂತಾಗುತ್ತದೆ, ಸರ್ಕಾರದ ಯೋಜನೆಗಳಿಗೆ ಅರ್ಜಿ ಸಲ್ಲಿಸಿದವರು ನೇರವಾಗಿ ನನ್ನನ್ನು ಭೇಟಿ ಮಾಡಿ ನಿಮ್ಮ ಸವಲತ್ತುಗಳನ್ನು ಪಡೆದುಕೊಳ್ಳಲು ತಿಳಿಸಿ ನಾನು ತಾಲೂಕಿನ ಸಮಸ್ತ ಜನಸಾಮಾನ್ಯರು ಬೇಟಿ ಮಾಡಿ ಎಂದು ತಿಳಿಸಿದರು.
ಈ ಸಂಧರ್ಬದಲ್ಲಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಸಯ್ಯದ್ ಅಬೂಕಲಾಮ್, ಪಕ್ಷದ ಮುಖಂಡರುಗಳಾದ ವಿ.ಟಿ.ವೆಂಕಟರಾಮ್, ಸೋಮಣ್ಣ, ಚಿದಾನಂದ್, ಮಹಾವೀರ್ ಬಾಬು, ಯೂನಿಸ್, ಆನಂತ್, ಮುಗಳೂರು ಮಂಜಣ್ಣ, ಸೇರಿದಂತೆ ಅಲ್ಪಸಂಖ್ಯಾತ ಫಲಾನುಭವಿಗಳು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
