ರಮೇಶ್ ಜಾರಕಿಹೊಳಿ ಕಾಂಗ್ರೆಸ್ ತೊರೆಯುವುದಿಲ್ಲ: ಸಿದ್ದರಾಮಯ್ಯ

ಜಮುಖಂಡಿ

         ಶಾಸಕ ಸ್ಥಾನಕ್ಕೆ ಯಾರೂ ರಾಜೀನಾಮೆ ನೀಡುವುದಿಲ್ಲ. ಪಕ್ಷದಲ್ಲಿ ಅತೃಪ್ತಿಯೂ ಇಲ್ಲ. ಅಸಮಾಧಾನವೂ ಇಲ್ಲ. ರಮೇಶ್ ಜಾರಕಿಹೊಳಿ ಕಾಂಗ್ರೆಸ್ ತೊರೆಯುತ್ತಾರೆ ಎನ್ನುವುದು ಸಹ ಊಹಾಪೋಹ ಎಂದು ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

          ಬಾಗಲಕೋಟೆಯ ಜಮಖಂಡಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಮುಳುಗುತ್ತಿರುವ ಹಡಗು. ಇಂತಹ ಹಡಗು ಹತ್ತಲು ಯಾರೂ ಬಯಸುವುದಿಲ್ಲ. ರಮೇಶ್ ಜಾರಕಿಹೊಳಿ ಪಕ್ಷ ತೊರೆಯುವ ವರದಿಗಳು ಊಹಾಪೋಹಗಳಿಂದ ಕೂಡಿದೆ. ಲೋಕಸಭೆ ಚುನಾವಣೆ ಬಳಿಕ ಮತ್ತೆ ಸಚಿವ ಸಂಪುಟ ಪುನಾರಚನೆ ಆಗಲಿದೆ. ಸಚಿವರ ಕಾರ್ಯದಕ್ಷತೆ, ಕಾರ್ಯಕ್ರಮ ಅನುಷ್ಟಾನ, ಪಕ್ಷ ಸಂಘಟನೆ ಎಲ್ಲವನ್ನು ನೋಡಿ ಲೋಕಸಭಾ ಚುನಾವಣೆ ಬಳಿಕ ಸಂಪುಟ ಪುನಾರಚನೆ ಮಾಡುತ್ತೇವೆ ಎಂದು ಸಚಿವಾಕಾಂಕ್ಷಿಗಳಲ್ಲಿ ಮತ್ತೊಮ್ಮೆ ಆಸೆ ಹುಟ್ಟಿಸಿದ್ದಾರೆ.

          ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಎಂಟಿಬಿ ನಾಗರಾಜ್ ಈ ಕುರಿತು ನಿನ್ನೆ ಹೇಳಿಕೆ ನೀಡಿ, ತಮ್ಮ ಅಧಿಕಾರದ ಅವಧಿ ಕೇವಲ 20 ತಿಂಗಳು ಎಂದ್ದಿದ್ದರು. ಈಗ ಸಿದ್ದರಾಮಯ್ಯ ಅವರ ಹೇಳಿಕೆ ಇದಕ್ಕೆ ಪುಷ್ಠಿ ನೀಡುವಂತಿದೆ.

         ಸಂಪುಟದಿಂದ ಕೈಬಿಟ್ಟ ರಮೇಶ್ ಜಾರಕಿಹೊಳಿ ಮಾತನಾಡಿರುವ ಆಡಿಯೋ ಬಗ್ಗೆ ತಮಗೆ ಮಾಹಿತಿ ಇಲ್ಲ. ನನಗೆ ತಿಳಿದಿರುವ ಹಾಗೆ ಆತ ಕಾಂಗ್ರೆಸ್ಸಿಗ. ಪಕ್ಷ ತೊರೆಯುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದರು.

           ತಮಗೆ ಸಚಿವ ಸ್ಥಾನ ತಪ್ಪಲು ಕಾಂಗ್ರೆಸ್‍ನ ನಾಲ್ವರು ಹಿರಿಯರು ಕಾರಣ ಎಂದು ಟೀಕಿಸಿರುವ ರಾಮಲಿಂಗಾ ರೆಡ್ಡಿಗೆ ಹೇಳಿಕೆಗೆ ಪ್ರತಿಕ್ರಯಿಸಿದ ಸಿದ್ದರಾಮಯ್ಯ, ಅವರಿಗೆ ಮಂತ್ರಿಗಿರಿ ತಪ್ಪಲು ನಾಲ್ಕು ಜನರ ಕೈವಾಡವೂ ಇಲ್ಲ. ಹತ್ತು ಜನರ ಕೈವಾಡವೂ ಇಲ್ಲ. ಎಲ್ಲವೂ ನಿರ್ಧರಿಸಿದಂತೆಯೇ ನಡೆದಿದೆ. ಹಿರಿಯ ನಾಯಕರಾಗಿ ಸಚಿವರಾಬೇಕು ಎಂದು ಬಯಸುವುದು ಸಹಜ. ಹಾಗೆಂದು ಎಲ್ಲಾ ಹಿರಿಯರನ್ನು ಸಚಿವರನ್ನಾಗಿ ಮಾಡಲು ಸಾಧ್ಯವಿಲ್ಲ. ಸಚಿವ ಪದವಿ ಕೈತಪ್ಪಿರುವ ಎಲ್ಲರ ಜತೆ ಮಾತುಕತೆ ನಡೆಸಿ ಸಮಸ್ಯೆ ಇತ್ಯರ್ಥಮಾಡುತ್ತೇವೆ ಎಂದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link