ರಂಗಭೂಮಿಗೆ ಸಿಜಿಕೆ ಕೊಡುಗೆ ಮಹತ್ವದ್ದು : ಬಸವರಾಜ್

ಚಿತ್ರದುರ್ಗ

   ಸಿಜೆಕೆ ಅವರು ರಂಗಭೂಮಿಗೆ ನೂರಾರು ಕಲಾವಿದರನ್ನು ಕೊಡುಗೆಯಾಗಿ ನೀಡಿದ್ದಾರೆ ಎಂದು ರಂಗ ವಿಮರ್ಶಕ ಡಾ.ಎಲ್.ಬಸವರಾಜ ಹೇಳಿದರು.

    ನಗರದ ಬಾಪೂಜಿ ಸಭಾಂಗಣದಲ್ಲಿ ಗುರುವಾರ ರಂಗಸೌರಭ ಕಲಾ ಸಂಘ, ಕರ್ನಾಟಕ ರಂಗ ಪರಿಷತ್ತು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಆಯೋಜಿಸಲಾಗಿದ ಬೀದಿರಂಗಭೂಮಿ ದಿನಾಚರಣೆ ಹಾಗೂ ಸಿಜಿಕೆ ರಂಗ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

   ರಂಗ ಚಟುವಟಿಕೆಗಳು ಮನುಷ್ಯನಿಗೆ ಜೀವಂತಿಕ್ಕೆ ತಂದು ಕೊಡುತ್ತದೆ. ಅಂತಹ ಜೀವಂತಿಕ್ಕೆಯನ್ನು ನಾವು ಸಿಜಿಕೆ ಅವರಲ್ಲಿ ಕಾಣಬಹುದು. 70ರ ದಶಕದಲ್ಲಿ ಬಿ.ವಿ.ಕಾರಂತರು ತಮ್ಮ ಸಂಗೀತ ಹಾಗೂ ನಾಟಕಗಳಿಂದ ರಂಗಭೂಮಿಯನ್ನು ಶ್ರೀಮಂತಗೊಳ್ಳಿಸಿದರು. 80ರ ದಶಕದಲ್ಲಿ ಗಿರೀಶ್ ಕಾರ್ನಾಡ ಮತ್ತು ನಾನಾ ಬರಹಗಾರರು ರಂಗಭೂಮಿಯನ್ನು ಇನ್ನೊಂದು ಹಂತಕ್ಕೆ ತಲುಪಿಸಿದರು. 90ರ ದಶಕದಲ್ಲಿ ಸಿಜಿಕೆ ಅವರು ತಮ್ಮ ಬೀದಿ ನಾಟಕಗಳ ಮೂಲಕ ಹೊಸ ಅಲೆಯನ್ನು ಸೃಷ್ಠಿಸಿದರು.

      ಅವರ ಒಡಲಾಳ ನಾಟಕ ದೆಹಲಿಯಲ್ಲಿ ಸುಮಾರು ನೂರು ಪ್ರದರ್ಶನ ಕಂಡಿತು. ಉಮಾಶ್ರೀ ಅವರ ಮನೋಜ್ಞ ಅಭಿನಯ ಎಲ್ಲರ ಮನಸೋರೆಗೊಂಡಿತ್ತು. ಸಿಜಿಕೆ ಅವರು ದಲಿತ ಹೋರಾಟದಿಂದ ಬೆಳೆದುಬಂದರು. ಯಾರಿಗೂ ಬೇಡವಾದ ಚಿಂತನೆಗಳನ್ನು ಅವರು ಮುಖ್ಯವಾಹಿನಿಗೆ ತಂದರು. ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಅವರ ಕಾರ್ಯ ವ್ಯಾಪಿಸಿತು ಎಂದರು.

     ವಿದ್ಯಾರ್ಥಿಗಳು ಪುಸ್ತಕ ಓದುವ ಹವ್ಯಾಸ ಬೆಳಸಿಕೊಳ್ಳಬೇಕು. ವಿದ್ಯಾರ್ಥಿಗಳು ರಂಗಭೂಮಿಯಲ್ಲಿ ತೊಡಗಿಸಿಕೊಂಡರೆ ಅವರಲ್ಲಿ ಶಿಸ್ತು ಬೆಳೆಯುತ್ತದೆ. ರಂಗ ತರಬೇತಿ ಶಿಬಿರಗಳಲ್ಲಿ ಭಾಗವಹಿಸಿ ರಂಗ ಕಲೆಯ ನಾನಾ ವಿಭಾಗಗಳನ್ನು ಪರಿಚಯ ಮಾಡಿಕೊಳ್ಳಬೇಕು. ಇಂದು ಅಸತ್ಯ ತಾಂಡವಾಡುತ್ತಿದೆ. ಆದರಿಂದ ಸಮಾನ ಮನಸ್ಕರರು ಒಂದು ಕಡೆ ಸೇರಿ ನಮ್ಮ ಸಂಸ್ಕತಿ ಬಗ್ಗೆ ಚರ್ಚೆ, ವಿಮರ್ಶೆ ಮಾಡುವಂತಾಗಬೇಕು ಎಂದರು.

      ಚಳ್ಳಕೆರೆಯ ಎಚ್.ಪಿ.ಸಿ.ಸಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಡಾ.ಕೆ.ಚಿತ್ತಯ್ಯ ಮಾತನಾಡಿ, ಹೊಸ ಚಿಂತನೆಗಳ ಹಿರಿಕಾರ ಸಿಜಿಕೆ. ತಮ್ಮ ಆಲೋಚನೆಗಳಿಂದ ರಂಗಭೂಮಿಗೆ ಹೊಸ ರೂಪ ನೀಡಿದರು. ನಾಡಿಗೆ ಹಲವಾರ ದಿಗ್ಗಜ ಕಲಾವಿದರನ್ನು ನೀಡಿ ಅವರಿಂದ ಬೀದಿ ನಾಟಕಗಳನ್ನು ಮಾಡಿಸಿದರು. ಸಿಜೆಕೆ ಅವರಿಗೆ ಜಿಲ್ಲೆಯ ಸಾಂಸ್ಕತಿಕ ವೀರರ ಬಗ್ಗೆ ನಾಟಕ ಮಾಡುವ ಆಸೆ ಇತ್ತು. ಸಾಣೇಹಳ್ಳಿಯ ಶಿವಸಂಚಾರಕ್ಕೆ ಅವರ ಕೊಡುಗೆ ಅಪಾರ. ಇಂದಿನ ವಿದ್ಯಾರ್ಥಿಗಳಿಗೆ ಸಿಜಿಕೆ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಮುಂದಿನ ದಿನಗಳಲ್ಲಿ ಸಿಜಿಕೆ ಜೀವನದ ಬಗ್ಗೆ ಪಠ್ಯಪುಸಕ್ತದಲ್ಲಿ ಮಾಹಿತಿ ಬರುವಂತಾಗಲ್ಲಿ ಎಂದು ತಿಳಿಸಿದರು.

     ಇದೇ ಸಂದರ್ಭದಲ್ಲಿ ಚಳ್ಳಕೆರೆಯ ಹಿರಿಯ ರಂಗಕರ್ಮಿ ಪಿ.ತಿಪ್ಪೇಸ್ವಮಿ ಅವರಿಗೆ 2019ನೇ ಸಾಲಿನ ಸಿಜಿಕೆ ರಂಗ ಪುರಸ್ಕಾರ ಪ್ರಧಾನ ಮಾಡಲಾಯಿತು. ರಂಗಕರ್ಮಿ ಕೆ.ಪಿ.ಎಂ.ಗಣೇಶಯ್ಯ ಮತ್ತು ಸಂಗಡಿಗರು ರಂಗಗೀತೆಗಳನ್ನು ಹಾಡಿದರು.

      ಶರಣ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಂ.ವಿರೇಶ್. ಬಾಪೂಜಿ ದೂರ ಶಿಕ್ಷಣ ಸಂಯೋಜಕ ಎಂ.ರುದ್ರಪ್ಪ, ರಂಗಸೌರಭ ಕಲಾ ಸಂಘದ ಅಧ್ಯಕ್ಷ ಕೆಪಿಎಂ ಸಧ್ಯೋಜಾತಯ್ಯ, ಕೆಎಂಎಸ್ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಕೆ.ಜಂಬುನಾಥ್, ರಂಗಸೌರಭ ಕಲಾ ಸಂಘದ ಕೆಪಿಎಂ ಗಣೇಶಯ್ಯ, ರಂಗಭೂಮಿ ಕಲಾವಿದ ಮಲ್ಲಪ್ಪನಹಳ್ಳಿ ಮಹಲಿಂಗಯ್ಯ, ರಾಜ್ಯ ಯುವ ಪ್ರಶಸ್ತಿ ವಿಜೇತ ಶ್ರೀನಿವಾಸ್ ಮಳಲಿ, ಕಲಾವಿದ ಎಂ.ಕೆ.ಹರೀಶ್, ಕಲಾವಿದ ಶ್ರೀಕುಮಾರ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap