ಮಿಡಿಗೇಶಿ
ಯಾದವ ಕುಲದ ಶ್ರೀ ಯಾದವಾನಂದ ಸ್ವಾಮೀಜಿಯವರ ಆಶೀರ್ವಾದದೊಂದಿಗೆ ಜ. 7 ರ ಸೋಮವಾರ ಚಿಕ್ಕಕೆರೆ ಗೊಲ್ಲರಹಟ್ಟಿಯಲ್ಲಿ ಶ್ರೀರಂಗನಾಥ ಸ್ವಾಮಿಯ ಹೂವಿನ ರಥೋತ್ಸವವು ವಿಜೃಂಭಣೆಯಿಂದ ನೆರವೇರಿತು. ಶ್ರೀರಂಗನಾಥಸ್ವಾಮಿಗೆ ಪ್ರತಿ ಶನಿವಾರ ಹಾಗೂ ಸೋಮವಾರದ ದಿನಗಳಂದು ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯುತ್ತವೆ. ಸ್ವಾಮಿಗೆ ಹಲವಾರು ಭಕ್ತರು ತಮ್ಮ ಇಷ್ಟಾರ್ಥಗಳ ಪೂರೈಕೆಗಾಗಿ ಹರಕೆಗಳನ್ನು ಕಟ್ಟಿಕೊಳ್ಳುತ್ತಾರೆ.
ಹರಕೆ ಹೊತ್ತ ಭಕ್ತರಿಗೆ ಅನುಕೂಲ ಲಭಿಸುತ್ತೆ ಎಂಬ ನಂಬಿಕೆಯಿರುತ್ತದೆ. ಸದರಿ ಭಕ್ತರಲ್ಲಿ ಕೆಲವರಿಗೆ ಸಂತಾನವಿಲ್ಲದವರಿಗೆ ಸಂತಾನಭಾಗ್ಯ ಲಭಿಸುತ್ತದೆಂಬ ಪ್ರತೀತಿಯಿದೆ. ಸಂತಾನದ ಅನುಕೂಲ ಲಭಿಸಿದವರು ತಮ್ಮ, ತಮ್ಮ ಮಕ್ಕಳ ತೂಕದಷ್ಟು ಹೂವು, ಹೂವಿನಹಾರಗಳನ್ನು ದೇವರಿಗೆ ಅರ್ಪಿಸುವುದುಂಟು. ರಥೋತ್ಸವದ ದಿನದಂದು ತೇರಿಗೆ ಹೂವು ಹಾಗೂ ಹೂವಿನಹಾರಗಳು ಹಾಗೂ ಕಪ್ಪುಬಳೆಗಳನ್ನು ದೇವರಿಗೆ ಸಮರ್ಪಿಸಿದರು. ರಥೋತ್ಸವಕ್ಕೆ ಬಂದ ಭಕ್ತರಿಗೆ ದಾನಿಗಳು ಪಾನಕ ಮತ್ತು ಮಜ್ಜಿಗೆಯನ್ನು ವಿತರಿಸಿದರು.
ಶಾಸಕ ಎಂ.ವಿ.ವೀರಭದ್ರಯ್ಯನವರ ಮಗ ಕಾರ್ತಿಕ್, ತಾಲ್ಲೂಕು ಜೆ.ಡಿ.ಎಸ್ನ ಮಾಜಿ ಅಧ್ಯಕ್ಷ ತುಂಗೋಟಿ ರಾಮಣ್ಣ, ಹೊಸಕೆರೆ ಗ್ರಾಮಪಂಚಾಯಿತಿಗೆ ಸೇರಿದ ಚಿಕ್ಕಕೆರೆ ಗೊಲ್ಲರಹಟ್ಟಿ ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಕಮಲಮ್ಮ, ಗೊವಿಂದರಾಜು, ಮಾಜಿ ಗ್ರಾ.ಪಂ.ಉಪಾಧ್ಯಕ್ಷ ಈರಣ್ಣ, ಮಾಜಿ ಸದಸ್ಯ ಗೌಡೀರಪ್ಪ. ಗೋವಿಂದರಾಜು, ಮಾಜಿ ಗ್ರಾಮಪಂಚಾಯಿತಿ ಉಪಾಧ್ಯಕ್ಷ ಭೂತಣ್ಣ, ಪಿ.ಎನ್ ರಾಜಶೇಖರ್, ರಕ್ಷಣಾ ಇಲಾಖೆಯ ಎ.ಎಸ್.ಐ ತಾರಾಸಿಂಗ್ ಮತ್ತು ಸಿಬ್ಬಂದಿ ಸೇರಿದಂತೆ ನೂರಾರು ಭಕ್ತ ಮಹಾಶಯರು ರಥೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
