ರೆಡ್‍ ಕ್ರಾಸ್‍ ಸಂಸ್ಥೆಯಿಂದ ರೋಗಿಗಳಿಗೆ ಉಚಿತ ಹಣ್ಣು ವಿತರಣೆ

ಹಿರಿಯೂರು :

     ವಿಶ್ವ ರೆಡ್‍ ಕ್ರಾಸ್‍ ಸಂಸ್ಥೆಯ ಸಂಸ್ಥಾಪಕರಾದ ಜೀನ್ ಹೆನ್ರೀಡ್ಯುನಂಟ್ ಅವರ ಸವಿನೆನಪಿಗಾಗಿ ಹಾಗೂ ವಿಶ್ವರೆಡ್‍ಕ್ರಾಸ್‍ಸಂಸ್ಥೆಯ ಸ್ಥಾಪನಾ ದಿನಾಚರಣೆ ಅಂಗವಾಗಿ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಹಿರಿಯೂರು ರೆಡ್‍ಕ್ರಾಸ್‍ಸಂಸ್ಥೆ ವತಿಯಿಂದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಒಳರೋಗಿಗಳಿಗೆ ಬ್ರೆಡ್-ಬಿಸ್ಕತ್ತು ಮತ್ತು ಹಣ್ಣುಹಂಪಲು ವಿತರಿಸಲಾಯಿತು.

      ಈ ಸಂದರ್ಭದಲ್ಲಿ ಸಾರ್ವಜನಿಕ ಆಸ್ಪತ್ರೆಯ ವೈದ್ಯರುಗಳಾದ ಡಾ||ಮೋಹನ್‍ಕುಮಾರ್, ಡಾ||ಶ್ರೀಧರ್‍ರೆಡ್ಡಿ, ಡಾ||ಎಂ.ಸಂದೀಪ್, ರೆಡ್‍ಕ್ರಾಸ್ ಗೌ||ಅಧ್ಯಕ್ಷ ಕೆ.ಆರ್.ವೆಂಕಟೇಶ್, ಉಪಾಧ್ಯಕ್ಷರಾದ ಬಿ.ಎಸ್.ನವಾಬ್‍ಸಾಬ್, ಕಾರ್ಯದರ್ಶಿ ಎಂ.ಎಸ್.ರಾಘವೇಂದ್ರ, ರೆಡ್‍ಕ್ರಾಸ್ ನಿರ್ದೇಶಕರುಗಳಾದ ಕೆ.ಎಸ್.ಮಹಾಬಲೇಶ್ವರ್‍ಶೆಟ್ಟಿ, ದೇವರಾಜ್‍ಮೂರ್ತಿ, ರವೀಂದ್ರನಾಥ್‍ಹೇಮದಳ, ಸಣ್ಣಭೀಮಣ್ಣ, ರವಿ, ಪರಮೇಶ್ವರ್‍ಭಟ್, ಹಾಗೂ ರೆಡ್‍ಕ್ರಾಸ್‍ರಿಪೋರ್ಟರ್‍ಗಳಾದ ಆಲೂರುಹನುಮಂತರಾಯಪ್ಪ, ಪಿ.ಆರ್.ಸತೀಶ್‍ಬಾಬು, ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ