ಹಿರಿಯೂರು :
ನಗರದ 16ನೇ ವಾರ್ಡ್ನಲ್ಲಿ ವಾಸಿಸುವ ಬಡಕೂಲಿ ಕಾರ್ಮಿಕರ 6 ಗಡಿಸಲುಗಳು ಅಗ್ನಿಗೆ ಆಹುತಿಯಾಗಿ ಎಲ್ಲವು ಸುಟ್ಟುಹೋಗಿ ನಿರಾಶ್ರಿತರಾಗಿದ್ದು, ಈ ಅಗ್ನಿಸಂತ್ರಸ್ತರಾದ ಶಾಂತಮ್ಮವೇಲುಸ್ವಾಮಿ, ಪೊನ್ನಮ್ಮಮುನಿಸ್ವಾಮಿ, ಭಾಗ್ಯಮ್ಮನಾರಾಯಣಸ್ವಾಮಿ, ಲಕ್ಷ್ಮೀಸೆಲ್ವಿ, ಗಂಗಮ್ಮರಂಗನಾಥ್, ಜಯಮ್ಮರಂಗಪ್ಪ ಇವರುಗಳಿಗೆ ಈ ಆರು ಕುಟುಂಬಗಳಿಗೆ ನಗರದ ರೆಡ್ ಕ್ರಾಸ್ ಸಂಸ್ಥೆವತಿಯಿಂದ ದಿನ ಬಳಕೆ ವಸ್ತುಗಳು ಪಾತ್ರೆ ತಟ್ಟೆ ಲೋಟ ಅಗತ್ಯ ವಸ್ತುಗಳನ್ನು ನೀಡಲಾಯಿತು.ಈ ಸಂದರ್ಭದಲ್ಲಿ ರೆಡ್ಕ್ರಾಸ್ಸಂಸ್ಥೆ ಕಾರ್ಯದರ್ಶಿ ಎಂ.ಎಸ್.ರಾಘವೇಂದ್ರ, ಪದಾಧಿಕಾರಿಗಳಾದ ಕೆ.ಎಸ್.ಮಹಾಬಲೇಶ್ವರಶೆಟ್ಟಿ, ಪಿ.ಆರ್.ಸತೀಶ್ಬಾಬು, ಎ.ರಾಘವೇಂದ್ರ, ಟಿ.ಎಸ್.ಬಸವರಾಜ್, ರಾಮಕೃಷ್ಣ, ನಗರಸಭೆ ಸದಸ್ಯರಾದ ಎಚ್.ನಟರಾಜ್ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
