ಹುಳಿಯಾರು:
ಹುಳಿಯಾರು ಪಟ್ಟಣದ ಬೆಸ್ಕಾಂ ಕಛೇರಿ ಮುಂಭಾಗ ಕಸ ಸುರಿಯುತ್ತಿದ್ದು, ಕೊಳೆತು ನಾರುತ್ತಿರುವ ಕಸದಿಂದಾಗಿ ಸಾರ್ವಜನಿಕರು ಮೂಗು ಮುಚ್ಚಿ ಓಡಾಡುವ ದುಃಸ್ಥಿತಿ ನಿರ್ಮಾಣಗೊಂಡಿದೆ ಎಂದು ಇಲ್ಲಿನ ನಿವಾಸಿ ಅರ್ಚಕ ಗಣೇಶ್ ಆರೋಪಿಸಿದ್ದಾರೆ.
ಬೆಸ್ಕಾಂ ಎದುರಿಗೆ ರಾಷ್ಟ್ರೀಯ ಹೆದ್ದಾರಿ ಕೂಡ ಹಾದು ಹೋಗಿದೆಯಲ್ಲದೆ ಈ ರಸ್ತೆಯ ಇಕ್ಕೆಲಗಳಲ್ಲಿ ಅನೇಕ ಅಂಗಡಿ, ಹೋಟೆಲ್ಗಳಿಗೆ. ಹಾಗಾಗಿ ಇಲ್ಲಿ ಕಸ ಸುರಿಯುತ್ತಿರುವುದರಿಂದಾಗಿ ದಿನ ನಿತ್ಯ ಓಡಾಡುವವರಿಗೆ ತೊಂದರೆ ಉಂಟಾಗಿದೆ. ಕಸ ಕಣ್ಣಿಗೆ ರಾಚುವಂತೆ ಇದ್ದರೂ ಈ ಬಗ್ಗೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಈವರೆಗೆ ಕ್ರಮ ಕೈಗೊಳ್ಳದಿರುವುದು ಬೇಸರ ತರಿಸಿದೆ.
ಅಷ್ಟೇ ಅಲ್ಲದೇ, ಇಲ್ಲಿ ಸರ್ಕಾರ ನಿಷೇಧಿಸಿರುವ ಪ್ಲಾಸ್ಟಿಕ್ ಕವರ್ಗಳು ಸಹ ಬೀಳುತ್ತಿದ್ದು ದನ ಕರುಗಳು ಪ್ಲಾಸ್ಟಿಕ್ ವಸ್ತುಗಳನ್ನು ತಿನ್ನುತ್ತಿದ್ದು ಅವುಗಳ ಜೀವಕ್ಕೂ ಅಪಾಯ ಎದುರಾಗಿದೆ. ಅಲ್ಲದೆ ರಾತ್ರಿ ಸಮಯದಲ್ಲಿ ಅಪರಿಚಿತರು ಬಂದು ಇಲ್ಲಿ ಕಸ ಎಸೆಯುವ ಜೊತೆಗೆ ಕೆಟ್ಟ ಮತ್ತು ಕೊಳೆತ ತರಕಾರಿ, ಹಣ್ಣು ಎಡೆಯುತ್ತಿದ್ದು ಹಂದಿಗಳ ಆವಾಸ ತಾಣವಾಗಲು ಕಾರಣರಾಗಿದ್ದಾರೆ. ಇನ್ನಾದರೂ ಪಟ್ಟಣ ಪಂಚಾಯಿತಿಯವರು ಇಲ್ಲಿನ ಕಸ ವಿಲೇವಾರಿ ಮಾಡುವ ಜೊತೆಗೆ ಕಸ ಎಸೆಯುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಗಣೇಶ್ ಒತ್ತಾಯಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
