ತುರುವೇಕೆರೆ:
ಕೂಡಲೇ ನಮ್ಮ ಗ್ರಾಮಕ್ಕೆ ಶಾಶ್ವತ ಕುಡಿಯುವ ನೀರನ್ನು ಓದಗಿಸಬೇಕೆಂದು ಒತ್ತಾಯಿಸಿ ಮುನಿಯೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬಳ್ಳೆಕಟ್ಟೆ ಗ್ರಾಮದ ನೂರಾರು ಮಹಿಳೆಯರು ಖಾಲಿ ಕೊಡ ಹಿಡಿದು ಗ್ರಾಮ ಪಂಚಾಯ್ತಿಗೆ ಬೀಗ ಜಡಿದು ಗುರುವಾರ ಪ್ರತಿಭಟನೆ ನೆಡೆಸಿದರು.
ತಾಲೂಕಿನ ಬಳ್ಳೆಕಟ್ಟೆಯಲ್ಲಿ ಸುಮಾರು 50ಕ್ಕೂ ಹೆಚ್ಚು ಮನೆಗಳಿದ್ದು ಸುಮಾರು 250ಕ್ಕೂ ಹೆಚ್ಚು ಜನರು ವಾಸಿಸುತ್ತಿದ್ದಾರೆ. ಬಳ್ಳೆಕಟ್ಟೆ ಗ್ರಾಮದಲ್ಲಿರುವ ಕೊಳವೇ ಬಾವಿಗಳಲ್ಲಿ ನೀರು ಪೂರೈಸಲಾಗುತ್ತಿತ್ತು. ಆದರೆ ಸುಮಾರು 4 ವರ್ಷದದಿಂದ ಕೊಳವೆ ಬಾವಿಯಲಲಿ ನೀರು ಬಾರದೆ ಕುಡಿಯಲು ನೀರಿಲ್ಲದೆ ಜನರಿಗೆ ನೀರಿನ ಹಾಹಕಾರ ತಲೆದೋರಿದೆ. ಗ್ರಾಮ ಪಂಚಾಯ್ತಿ ಕೇವಲ ದಿನಕ್ಕೆ ಒಂದು ಟ್ಯಾಂಕರ್ ಮಾತ್ರ ನೀರು ನೀಡುತ್ತಿದೆ.
ಟ್ಯಾಂಕರ್ ನೀರು ಇಡಿಯಲು ಕೆಲಸ ಕಾರ್ಯ ಬಿಟ್ಟು ದಿನವಿಡಿ ನೀರಿಗಾಗಿ ಕಾಯುವಂತಾಗಿದೆ. ಮಹಿಳೆಯರು, ಮಕ್ಕಳೆನ್ನದೆ ಕುಡಿಯುವ ನೀರಿಗಾಗಿ ಪರದಾಡುವಂತಾಗಿ ನೀರು ಪಡೆಯಲು ಹಗಲು, ರಾತ್ರಿ ಎನ್ನದೆ ದೂರದ ತೋಟಗಳಿಗೆ ತೆರಳಿ ನೀರು ತರಬೇಕಿದೆ ಆದರೆ ತೋಟದ ಮಾಲೀಕರು ಕೇವಲ 2 ರಿಂದ ಮೂರು ಬಿಂದಿಗೆ ಮಾತ್ರ ನೀಡುತ್ತಿದ್ದು ನಮಗೆ ಸಿಕ್ಕಷ್ಟೇ ನೀರಿನಲ್ಲಿಯೇ ಅಡುಗೆ, ಸ್ನಾನ, ಬಟ್ಟೆ ತೊಳೆಯವುದು ಮಾಡಬೇಕಿದೆ.
ಈಗಾಗಲೇ ಗ್ರಾಮ ಪಂಚಾಯ್ತಿಗೆ ಹಲವಾರು ಭಾರಿ ಮನವಿ ಮಾಡಲಾಗಿದೆ ಗ್ರಾಮ ಪಂಚಾಯ್ತಿಯವರು ಕೇವಲ ಒಂದು ಟ್ಯಾಂಕರ್ ನೀರು ನೀಡಿ ಸುಮ್ಮನಾಗುತ್ತಿದ್ದಾರೆ. ಕೂಡಲೇ ಸಂಭಂದ ಪಟ್ಟ ಇಲಾಖೆಯವರು ಹೊಸ ಕೊಳವೆ ಬಾವಿ ಕೊರಸಿ ನೀರಿನ ಸಮಸ್ಯೆ ಬಗ್ಗೆ ಹರಿಸಬೇಕು ಇಲ್ಲವಾದರೆ ತಾಲೂಕು ಪಂಚಾಯ್ತಿ ಎದುರು ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದು ಪ್ರತಿಭಟನಕಾರರು ಎಚ್ಚರಿಸಿದರು.
ಮೊದಲು ಗ್ರಾಮದ ಕಿರು ನೀರು ಸಿಸ್ಟನ್ನಲ್ಲಿ ನೀರು ಸಿಗುತ್ತಿತ್ತು ತರುತ್ತಿದ್ದೆ ಆದರೆ ಇತ್ತಿಚೀಗೆ ನನಗೆ ನೀರು ಸಿಗದೆ ಪರದಾಡುವಂತಾಗಿದೆ. ನ್ಸಿಸ್ಟನ್ನಲ್ಲಿ ನೀರಿಲ್ಲ, ಟ್ಯಾಂಕರ್ ನೀರು ಬಂದಾಗ ನೀರು ಇಡಿಯಲು ಸಾದ್ಯವಾಗಲ್ಲ. ಜನರ ನೂಕು ನುಗ್ಗಲು ಹೆಚ್ಛಾಗಿರುತ್ತದೆ ನೀರು ಸಿಗುತ್ತಿಲ್ಲ ಶಾಶ್ವತ ನೀರು ನೀಡಬೇಕು ಎಂದು 75 ವರ್ಷದ ಬೈರಮ್ಮ ತಿಳಿಸಿದರು.
ಪಿಡಿಓ ಮನವೊಲಿಕೆ ಪತ್ರಿಭಟನೆ ಅಂತ್ಯ: ಪ್ರತಿಭಟನಕಾರರ ಜೊತೆ ಪಿಡಿಓ ಬಾಬುಶ್ರೀನಿವಾಸ್ ಮಾತನಾಡಿ ನಲೆಯಿಂದಲೇ ಇನ್ನೆರೆಡು ಟ್ಯಾಂಕರ್ ನೀರು ಒದಗಿಸುವುದಾಗಿ ಆಶ್ವಾಸನೆ ನೀಡಿದರಲ್ಲದೆ ಪ್ರತಿಭಟನೆ ಕೈಬಿಡುವಂತೆ ಮನವಿ ಮಾಡಿದರು ಇದಕ್ಕೆ ಒಪ್ಪದ ಪ್ರತಿಭಟನಕಾರರು ಶಾಶ್ವತ ಪರಿಹಾರ ಆಗಬೇಕು ಎಂದು ಒತ್ತಾಯಿಸಿದರು. ಕೂಡಲೇ ಜಿಲ್ಲಾ ಪಂಚಾಯ್ತಿ ಸದಸ್ಯರು ಹಾಗೂ ಕುಡಿಯುವ ನೀರಿನ ಇಂಜಿನಿಯರ್ ಜೊತೆ ಮಾತನಾಡಿ ಅವರ ಆದೇಶದಂತೆ ಸದ್ಯದಲ್ಲಿಯೇ ಹೊಸ ಬೋರ್ವೆಲ್ ಕೊರಸಿಕೊಡುವುದಾಗಿ ಭರವಸೆಯ ಮೇರೆಗೆ ಪ್ರತಿಭಟನೆ ಅಂತ್ಯಗೊಳಿಸಿದರು.
ಪ್ರತಿಭಟನೆಯಲ್ಲಿ ಗ್ರಾಮದ ಮುಖಂಡ ಗಂಗಾಧರ್, ಕುಮಾರಣ್ಣ, ಸಿದ್ದಲಿಂಗಯ್ಯ, ನಂಜುಂಡಯ್ಯ, ಸಾಗರ್, ನರಸಿಂಹಯ್ಯ, ವಿಜಿಕುಮಾರ್, ಕೃಷ್ಣಪ್ಪ, ಮಹಿಳೆಯರಾದ ಬಸಮ್ಮ, ಕಾಮಾಕ್ಷಿ, ಕಮಲಮ್ಮ, ಬೈರಮ್ಮ, ರತ್ನಮ್ಮ, ಮಾನಸ, ಗಂಗಮ್ಮ, ಮಂಜಮ್ಮ, ಲಕ್ಷ್ಮಮ್ಮ ಸೇರಿದಂತೆ ಇತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
