ವಿವಿಧ ಬೇಡಿಕೆಗಳ ಈಡೇರಿಸುವಂತೆ ರಾಜ್ಯ ರೈತ ಸಂಘದಿಂದ ಸಚಿವರಿಗೆ ಮನವಿ

ಜಗಳೂರು:

       ಜಗಳೂರಿನಲ್ಲಿ ರಾಗಿ ಖರೀದಿ ಕೇಂದ್ರ ಆರಂಭಿಸುವುದು ಹಾಗೂ ಪ್ರೋತ್ಸಾಹ ಧನ ಹೆಚ್ಚಿಸಬೇಕು, ರೈತರ ಸಾಲ ಮನ್ನಾ ಯೋಜನೆಯಲ್ಲಿ ಸಾಲ ಮನ್ನಾ ಆದ ಬಾಕಿ ರೈತರಿಗೆ ಹಣ ಬಿಡುಗಡೆ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರಾದ ಬೈರತಿ ಬಸವರಾಜು ಅವರಿಗೆ ರಾಜ್ಯ ರೈತಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್ ನೇತೃತ್ವದಲ್ಲಿ ಜಗಳೂರಿನಲ್ಲಿ ಸೋಮವಾರ ಮನವಿ ಪತ್ರ ಸಲ್ಲಿಸಲಾಯಿತು.

     ಪ್ರಸಕ್ತ ಸನ್ನಿವೇಶದಲ್ಲಿ ರೈತರು ಪಟ್ಟಣ, ನಗರಗಳಿಗೆ ಬಂದು ಮೆಕ್ಕೆಜೋಳ ,ಹತ್ತಿ,ಶೆಂಗಾ, ಸೂರ್ಯಕಾಂತಿ ಭಿತ್ತನೆ ಬೀಜಕ್ಕಾಗಿ ಮುಗಿ ಬೀಳುವುದನ್ನು ತಪ್ಪಿಸಲು ನಾಲ್ಕೈದು ಗ್ರಾಮಗಳನ್ನು ಸೇರಿಸಿ ಗ್ರಾಮವೊಂದರಂತೆ ಅಂಗಡಿ ತೆರೆದು ಬಿತ್ತನೆ ಬೀಜ ಬೀಜ ಸಿಗುವ ಹಾಗೆ ವ್ಯವಸ್ಥೆಯನ್ನು ಜಿಲ್ಲಾ ಆಡಳಿತದ ಮೂಲಕ ಮಾಡುವುದು. ಕರ್ನಾಟಕ ರಾಜ್ಯ ನಿಗಮದಿಂದ ಸೋನಾ ಭತ್ತದ ಬಿತ್ತನೆ ಕಲಬೆರೆಕೆ ಬಿತ್ತನೆ ಬೀಜ ವಿತರಣೆ ಮಾಡಿರುವುದರಿಂದ ರೈತರಿಗೆ ತುಂಬಾ ನಷ್ಟವಾಗುವುದರಿಂದ ಕಳಪೆ ಬೀಜ ಮಾರಾಟ ಮಾಡುತ್ತಿರುವ ರಾಜ್ಯ ಸರ್ಕಾರದ ಅಡಿಯಲ್ಲಿ ಕೆಲಸ ಮಾಡುತ್ತಿರುವ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳಬೇಕು. ಖಾಸಗಿ ಅಂಗಡಿಗಳಲ್ಲಿಖರೀದಿ ಮಾಡಿರುವ ಬಿ.ಪಿ.ಟಿ.ಸೋನಾ ಬೆಳೆಯಲ್ಲಿ ಕುಂಠಿತವಾಗಿದ್ದು, ಅಂಗಡಿ ಮಾಲಿಕರು ಇಲ್ಲದ ಸಬೂಬು ಹೇಳಿ ದಾರಿ ತಪ್ಪಿಸುವರವಿರುದ್ದ ಕ್ರಮ ಕೈಗೊಳ್ಳಬೇಕೆಂದು ಸಚಿವರಲ್ಲಿ ಮನವಿ ಮಾಡಲಾಯಿತು.

     ಈ ಸಂದರ್ಭದಲ್ಲಿ ತಾಲ್ಲೂಕು ರೈತ ಸಂಘದ ಅಧ್ಯಕ್ಷ ಚಿಕ್ಕಮಲ್ಲನಹೊಳೆ ಚಿರಂಜೀವಿ, ರಾಜನಹಳ್ಳಿ ರಾಜು, ದಿಬ್ಬದಹಳ್ಳಿ ಗಂಗಾದರಪ್ಪ, ಶರಣಪ್ಪ, ಮುದಕದಹಳ್ಳಿ ಕೆಂಚಪ್ಪ, ಗೌಡಗೊಂಡನಹಳ್ಳಿ ಸತೀಶ್, ಹನುಮಂತಾಪುರದ ರಂಗಪ್ಪ, ಶಾಂತಪ್ಪ, ನಾಗರಾಜು, ಮೂಗಣ್ಣ, ಲೋಕೇಶ್, ತಿಪ್ಪೇಸ್ವಾಮಿ ಇತರರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link