ಗುಬ್ಬಿ
ಕಳೆದ ಎರಡು ದಿನಗಳಿಂದ ತಾಲ್ಲೂಕಿನಾಧ್ಯಂತ ಸುರಿಯುತ್ತಿರುವ ಮಳೆಗೆ ಗ್ರಾಮೀಣ ಭಾಗದ ರಸ್ತೆಗಳು ಹಾಳಾಗಿದ್ದು ವಾಹನ ಸವಾರರು ತೀವೃತರ ಸಮಸ್ಯೆ ಎದುರಿಸುವಂತಾಗಿದೆ ಕಳೆದ ರಾತ್ರಿಯಿಡಿ ಸುರಿದ ಮಳೆಗೆ ತಾಲ್ಲೂಕಿನ ನಿಟ್ಟೂರು ಬಳಿಯ ಹೇಮಾವತಿ ಮುಖ್ಯನಾಲೆ ಹಾಗೂ ಹೆದ್ದಾರಿ ಸೇತುವೆಯಲ್ಲಿ ಮುಂಜಾನೆ ಮಣ್ಣು ಕುಸಿತ ಕಂಡಿದೆ. ಈ ಮಣ್ಣು ಕುಸಿತಕ್ಕೆ ನಾಲೆ ಮೇಲ್ಬಾಗ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯ ರಸ್ತೆಯು ಕುಸಿದು ಕೆಲ ಕಾಲ ಏಕಮುಖ ಸಂಚಾರಕ್ಕೆ ಅನುವು ಮಾಡಲಾಗಿತ್ತು.
ರಾಷ್ಟ್ರೀಯ ಹೆದ್ದಾರಿ 206 ಹಾದು ಹೋದ ರಸ್ತೆಯ ಕೆಳಭಾಗದಲ್ಲಿ ಹರಿಯುವ ಹೇಮಾವತಿಗೆ ಸುರಿದ ಮಳೆ ನೀರು ಮತ್ತಷ್ಟು ರಭಸದಿಂದ ಹರಿಯುತ್ತಿದೆ. ರಾತ್ರಿ ಪೂರ್ತಿ ಸುರಿದ ಧಾರಾಕಾರ ಮಳೆಯಿಂದಾಗಿ ಹೆದ್ದಾರಿ ಮತ್ತು ನಾಲೆಯು ಸಂದಿಸುವ ರಸ್ತೆ ಬದಿಯಲ್ಲಿ ಈ ಹಿಂದೆ ಯುಜಿ ಕೇಬಲ್ ಅಳವಡಿಕೆ ಕಾಮಗಾರಿ ನಡೆಸಲಾಗಿದೆ. ವೈರ್ ಅಳವಡಿಕೆ ನಂತರ ಕಾಣಿಸಿಕೊಂಡ ಗುಂಡಿಗಳಲ್ಲಿ ಒಂದೇ ಸಮನೇ ನೀರು ಹರಿದು ಮಣ್ಣು ಕುಸಿತ ಕಂಡಿದೆ.
ನಾಲೆಗೆ ನಿರ್ಮಾಣವಾದ ಹೆದ್ದಾರಿಯ ಸೇತುವೆಯ ಒಂದು ಬದಿಯಲ್ಲಿ ಮಣ್ಣು ಕುಸಿತ ನಿಮಿಷಕ್ಕೊಮ್ಮೆ ಹೆಚ್ಚಾಗುತ್ತಿತ್ತು. ರಾತ್ರಿ ಯಾವುದೇ ಅಪಾಯ ಕಾಣಿಸಿಕೊಳ್ಳದ ಕಾರಣ ಅಚಾತುರ್ಯ ನಡೆದಿಲ್ಲ. ಮಣ್ಣು ಕುಸಿತವು ತೀವ್ರಗೊಂಡಿದ್ದರೆ ಹೆದ್ದಾರಿ ರಸ್ತೆಯು ನಾಲೆಯೊಳಗೆ ನೀರು ಪಾಲಾಗುತ್ತಿತ್ತು. ಈ ಸಂದರ್ಭದಲ್ಲಿ ಸಂಚರಿಸುವ ವಾಹನದ ಗತಿ ಏನು ಎಂಬ ಚರ್ಚೆ ಸ್ಥಳೀಯರಲ್ಲಿ ಕಾಣಿಸಿಕೊಂಡಿತು. ಮಣ್ಣು ಕಸಿಯುತ್ತಿರುವ ಬಗ್ಗೆ ಆತಂಕ ವ್ಯಕ್ತ ಪಡಿಸಿದ ಸ್ಥಳೀಯರು ಮುಂಜಾನೆಯೇ ಎಚ್ಚೆತ್ತು ರಸ್ತೆಯ ಒಂದು ಬದಿಯಲ್ಲಿ ಸಂಚಾರ ನಿಲ್ಲಿಸಿ ಮತ್ತೊಂದು ಬದಿಯಲ್ಲಿ ಏಕಮುಖ ಸಂಚಾರಕ್ಕೆ ಅನುವು ಮಾಡಿದರು.
ಸ್ಥಳಕ್ಕೆ ಅಧಿಕಾರಿಗಳು ಬರುವ ವೇಳೆಗೆ ಸ್ಥಳೀಯರೇ ನಾಲೆಯ ದುರಸ್ಥಿಗೆ ಕೈ ಜೋಡಿಸಿದ್ದರು.ಹತ್ತಾರು ವರ್ಷದಿಂದ ನಾಲೆಯ ಎರಡೂ ಬದಿಯಲ್ಲಿ ಮಣ್ಣು ಕಸಿಯುವುದು ಸಾಮಾನ್ಯವಾಗಿದೆ. ಆದರೆ ಈ ಬಾರಿ ಸುರಿದ ಭಾರಿ ಮಳೆ ನಾಲೆಗೆ ಅಪಾಯಕಾರಿ ಯಾಗಲಿದೆ. ಈ ಜತೆಗೆ ಹೆದ್ದಾರಿಯು ಸಹ ಅಪಾಯದಲ್ಲಿದೆ. ಹಲವು ವರ್ಷಗಳಿಂದ ಮಣ್ಣು ಕುಸಿಯುವ ಪ್ರಕ್ರಿಯೆ ನಾಲೆಯಲ್ಲಿ ನೋಡಿರುವ ಬಗ್ಗೆ ಸಾರ್ವಜನಿಕರು ತಿಳಿಸುತ್ತಾರೆ. ಮಣ್ಣು ಕಸಿದು ರಸ್ತೆಯ ಡಾಂಬಾರು ಕೆಳಭಾಗದಲ್ಲೂ ಮಣ್ಣು ಕಸಿದಿದೆ. ವಾಹನ ಸಂಚಾರ ಮುಂದುವರೆದಿದ್ದರೇ ದೊಡ್ಡ ಅನಾಹುತ ಕಾದಿತ್ತು. ಯುಜಿ ಕೇಬಲ್ ಅವಳಡಿಕೆ ನಂತರ ಇಂತಹ ಸೂಕ್ಷ್ಮ ಸ್ಥಳಗಳಿಗೆ ಸರಿಯಾದ ಕ್ರಮವಹಿಸಬೇಕಿತ್ತು ಎಂದು ಬೆಲವತ್ತ ಗ್ರಾಪಂ ಉಪಾಧ್ಯಕ್ಷ ಎನ್.ಬಿ.ರಾಜಶೇಖರ್ ತಿಳಿಸಿದರು.
ಪಟ್ಟಣದಿಂದ ಚೇಳೂರು ಭಾಗದ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರೈಲ್ವೆ ಅಂಡರ್ಪಾಸ್ನಲ್ಲಿ ಮಳೆ ನೀರು ತುಂಬಿಕೊಂಡಿದ್ದು ವಾಹನ ಸವಾರರು ಜೀವ ಬಿಗಿ ಹಿಡಿದು ಓಡಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಇನ್ನು ಸಿಐಟಿ ಕಾಲೇಜು ಹಿಂಭಾಗದ ರೈಲ್ವೆ ಅಂಡರ್ ಪಾಸ್ನಲ್ಲಿ ಯೂ ಮಳೆ ನೀರು ತುಂಬಿಕೊಂಡಿದ್ದು ಕೆರೆಯಂತಾಗಿದೆ ಈಭಾಗದಲ್ಲಿ ಸಂಚರಿಸುವ ವಾಹನ ಸವಾರರು ತೀವೃತರ ಸಮಸ್ಯೆ ಎದುರಿಸುವಂತಾಗಿದೆ.
ಬಹುತೇಕ ತಾಲ್ಲೂಕಿನಾಧ್ಯಂತ ಎಡಬಿಡದೆ ಸುರಿಯುತ್ತಿರುವ ಮಳೆಯಿಂದ ಹಳ್ಳ ಕೊಳ್ಳಗಳಲ್ಲಿ ಮಳೆ ನೀರು ತುಂಬಿಕೊಂಡಿದೆ ಗ್ರಾಮೀಣ ಭಾಗದ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳಲ್ಲಿ ಮಳೆ ನೀರು ತುಂಬಿಕೊಂಡಿರುವುದರಿಂದ ದ್ವಿಚಕ್ರ ವಾಹನ ಸವಾರರು ಬಿದ್ದು ಎದ್ದು ಹೋಗುವಂತಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
