ರೌಡಿ ವಿಜಿ ಕೊಲೆಗಾರರ ಬಂಧನ..!!

ಬೆಂಗಳೂರು

      ಯಶವಂತಪುರದ ಬಜಾಜ್ ವೃತ್ತದ ಬಳಿ ರೌಡಿ ವಿಜಯ್ ಕುಮಾರ್ ಅಲಿಯಾಸ್ ವಿಜಿಯನ್ನು ಚಾಕುವಿನಿಂದ ಇರಿದು ಭೀಕರವಾಗಿ ಕೊಲೆಮಾಡಿದ್ದ ಇಬ್ಬರು ರೌಡಿಗಳು ಸೇರಿ, ನಾಲ್ವರನ್ನು ಬಂಧಿಸುವಲ್ಲಿ ಉತ್ತರ ವಿಭಾಗದ ಪೊಲೀಸರು ಯಶಸ್ವಿಯಾಗಿದ್ದಾರೆ.

      ನಂದಿನಿ ಬಡಾವಣೆಯ ಪರಿಮಳ ನಗರದ ಮಂಜುನಾಥ್ ಅಲಿಯಾಸ್ ಕಿರಿಕ್ ಮಂಜ (22), ನವೀನ್ ಕುಮಾರ್ ಅಲಿಯಾಸ್ ಬಿಕ್ಳ (22), ಜೀವನ್ ಅಲಿಯಾಸ್ ಬೀಡಿ (22) ಹಾಗೂ ಕಂಠೀರವ ನಗರದ ಶಿವರಾಜ್ (40) ಬಂಧಿತ ಆರೋಪಿಗಳಾಗಿದ್ದಾರೆ ಎಂದು ಡಿಸಿಪಿ ಶಶಿಕುಮಾರ್ ತಿಳಿಸಿದ್ದಾರೆ.

       ನಂದಿನಿ ಲೇಔಟ್ ಪೆÇಲೀಸ್ ಠಾಣೆಯ ರೌಡಿಪಟ್ಟಿಯಲ್ಲಿದ್ದ ವಿಜಿಯನ್ನು ಕಳೆದ ಮೇ 25 ರಂದು ಮುಂಜಾನೆ 3.30ರ ವೇಳೆ ಯಶವಂತಪುರದ ಬಜಾಜ್ ವೃತ್ತದ ಪ್ಯಾರಿಸ್ ರೆಸ್ಟೊರೆಂಟ್ ಬಳಿ ಕೊಲೆಗೈದು ಪರಾರಿಯಾಗಿದ್ದ ಆರೋಪಿಗಳನ್ನು ಖಚಿತ ಮಾಹಿತಿ ಆಧರಿಸಿ, ಕಾರ್ಯಾಚರಣೆ ನಡೆಸಿ ಬಂಧಿಸಲಾಗಿದೆ.

      ಆರೋಪಿಗಳು ವಿಚಾರಣೆಯಲ್ಲಿ ರೌಡಿ ವಿಜಿ ತಮ್ಮನ್ನು ಸ್ನೇಹಿತರ ಮುಂದೆ ಹೀಯಾಳಿಸಿ, ನಿಂದಿಸಿ ಮಾತನಾಡುತ್ತಿದ್ದ ಹಲವು ಬಾರಿ ಬುದ್ಧಿ ಹೇಳಿ ಎಚ್ಚರಿಕೆ ನೀಡಿದ್ದರೂ ಆತನ ವರ್ತನೆ ಸರಿಯಾಗಿರಲಿಲ್ಲ. ಇದರಿಂದ ಆಕ್ರೋಶಗೊಂಡು ಮನೆಯಿಂದ ಕಾರಿನಲ್ಲಿ ಕರೆದುಕೊಂಡು ಬಂದು ಮದ್ಯಪಾನ ಮಾಡಿಸಿ, ಕೊಲೆಗೈದಿರವುದಾಗಿ ಬಾಯ್ಬಿಟ್ಟಿದ್ದಾರೆ.

       ಬಂಧಿತ ಆರೋಪಿಗಳಲ್ಲಿ ಕಿರಿಕ್ ಮಂಜ, ಆರ್‍ಎಂಸಿ ಯಾರ್ಡ್ ಪೊಲೀಸ್ ಠಾಣೆಯ ರೌಡಿಪಟ್ಟಿಯಲ್ಲಿದ್ದರೆ, ಶಿವರಾಜ್, ನಂದಿನಿ ಲೇಔಟ್ ಪೊಲೀಸ್ ಠಾಣೆಯ ಹಳೆರೌಡಿಪಟ್ಟಿಯಲ್ಲಿದ್ದಾನೆ. ಆರೋಪಿಗಳನ್ನು ಯಶವಂತಪುರ ಪೊಲೀಸ್ ಇನ್ಸ್‍ಪೆಕ್ಟರ್ ನಾಗರೆಡ್ಡಿ, ಮತ್ತವರ ಸಿಬ್ಬಂದಿ ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದು ಡಿಸಿಪಿ ಶಶಿಕುಮಾರ್ ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link