ದಾವಣಗೆರೆ:

ಹೈದ್ರಾಬಾದ್ ಮೂಲಕದ ಇಂಡಸ್ ನೇಪಾಳ ರುದ್ರಾಕ್ಷ ಸಂಸ್ಥೆಯ ವತಿಯಿಂದ ಇಲ್ಲಿನ ಅಶೋಕ ರಸ್ತೆಯಲ್ಲಿರುವ ಶಾಂತಿ ರಾಯಲ್ ಹೋಟೆಲ್ ಸಭಾಂಗಣದಲ್ಲಿ ಇಂದಿನಿಂದ (ಮೇ 1ರಿಂದ) ಮೇ.7ರ ವರೆಗೆ ರುದ್ರಾಕ್ಷಗಳ ಪ್ರದರ್ಶನ ಮತ್ತು ಮಾರಾಟ ಏರ್ಪಡಿಸಿದೆ ಎಂದು ಸಂಸ್ಥೆಯ ನಿರ್ದೇಶಕ ನರೇಂದ್ರ ಕಾಶಿರೆಡ್ಡಿ ತಿಳಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಮಾರು ಒಂದು ವಾರಗಳ ಕಾಲ ನಡೆಯುವ ರುದ್ರಾಕ್ಷಗಳ ಪ್ರದರ್ಶನ ಮಾತ್ತು ಮಾರಾಟದಲ್ಲಿ ವಿವಿಧ ಬಗೆಯ ರುದ್ರಾಕ್ಷಗಳು ದೊರೆಯಲಿದ್ದು, ಜಿಲ್ಲೆಯ ಹಾಗೂ ಸುತ್ತ-ಮುತ್ತಲ ಜಿಲ್ಲೆಯ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.
ಇತ್ತೀಚಿನ ದಿನಗಳಲ್ಲಿ ಆಧುನಿಕ ಯುವ ವಿಜ್ಞಾನಿಗಳು ನಿಸರ್ಗದಿಂದ ಬೆಳೆಯುತ್ತಿರುವ ರುದ್ರಾಕ್ಷಗಳ ಕುರಿತು ಮಾಡಿರುವ ಸಂಶೋಧನೆಯಲ್ಲಿ ಅಂತರ್ಗತ ವಿದ್ಯುತ್ಕಾಂತಗಳನ್ನು ಹೊಂದಿರುವ ಅಂಶ ಕಂಡುಬಂದಿದೆ. ರುದ್ರಾಕ್ಷ ಧರಿಸುವುದರಿಂದ ಮನಸ್ಸಿನಲ್ಲಿ ಸಕಾರಾತ್ಮಕ ಭಾವನೆ, ಮನಸ್ಸಿಗೆ ಶಾಂತಿ, ನೆಮ್ಮದಿ, ಆತ್ಮಸ್ತ್ರೈರ್ಯ ದೊರೆಯಲಿದೆ ಎಂಬ ಅಂಶ ಸಂಶೋಧನೆಯಿಂದ ಬೆಳಕಿಗೆ ಬಂದಿದೆ ಎಂದು ಮಾಹಿತಿ ನೀಡಿದರು.
ನಮ್ಮಲ್ಲಿ ಅರ್ಧ ಚಂದ್ರಾಕೃತಿಯ ಮುಖ ಹೊಂದಿರುವ ರುದ್ರಾಕ್ಷ ಮತ್ತು 21 ಮುಖಗಳುಳ್ಳ ರುದ್ರಾಕ್ಷ ಸೇರಿದಂತೆ ವಿವಿಧ ಬಗೆಯ ರುದ್ರಾಕ್ಷ ಮಾರಾಟಕ್ಕೆ ಲಭ್ಯ ಇವೆ. 50 ರೂಪಾಯಿಯಿಂದ ಒಂದೂವರೆ ಲಕ್ಷ ರೂಪಾಯಿಗಳ ವರೆಗಿನ ಮೊತ್ತದ ರುದ್ರಾಕ್ಷಿಗಳು ದೊರೆಯಲಿವೆ . ಅಲ್ಲದೇ, ಇದೇ ಸಂದರ್ಭದಲ್ಲಿ ಅಸಲಿ ಹಾಗೂ ನಕಲಿ ರುದ್ರಾಕ್ಷಗಳ ಬಗ್ಗೆ ಗ್ರಾಹಕರಲ್ಲಿ ಜಾಗೃತಿ ಸಹ ಮೂಡಿಸಲಾಗುವುದು. ಆಸಕ್ತರು ಬೇಡಿಕೆ ಮಂಡಿಸಿದಲ್ಲಿ ಇತರೆ ಮುಖಗಳ ರುದ್ರಾಕ್ಷಗಳನ್ನು ಸಹ ತರಿಸಿಕೊಡಲಾಗುವುದು ಎಂದು ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
