ಚಿತ್ರದುರ್ಗ:
ಚಿತ್ರರಂಗ ಹಾಗೂ ರಾಜಕಾರಣದ ದಿಗ್ಗಜರಾದ ನಟ ಅಂಬರೀಷ್ ಹಾಗೂ ಕೇಂದ್ರದ ಮಾಜಿ ರೈಲ್ವೆ ಸಚಿವ ಸಿ.ಕೆ.ಜಾಫರ್ಷರೀಫ್ರವರ ನಿಧನಕ್ಕೆ ಕರ್ನಾಟಕ ರಾಜ್ಯ ಡಾ.ವಿಷ್ಣುವರ್ಧನ್ರವರ ಆದರ್ಶ ಬಳಗ ಹಾಗೂ ಜಿಲ್ಲಾ ಕಟ್ಟಡ ಕಾರ್ಮಿಕರ ಫೆಡರೇಷನ್ ಸಿ.ಐ.ಟಿ.ಯು . ವತಿಯಿಂದ ತುರುವನೂರು ರಸ್ತೆಯಲ್ಲಿರುವ ಡಾ.ವಿಷ್ಣುವರ್ಧನ್ರವರ ಉದ್ಯಾನವನದಲ್ಲಿ ಭಾನುವಾರ ಭಾವಪೂರ್ಣ ಶ್ರದ್ದಾಂಜಲಿ ಸಲ್ಲಿಸಲಾಯಿತು.
ಕರ್ನಾಟಕ ರಾಜ್ಯ ಡಾ.ವಿಷ್ಣುವರ್ಧನ್ರವರ ಆದರ್ಶ ಬಳದ ರಾಜ್ಯಾಧ್ಯಕ್ಷ ಸಿ.ಕೆ.ಗೌಸ್ಪೀರ್ ಮಾತನಾಡಿ ಡಾ.ವಿಷ್ಣುರವರ ಅಗಲಿಕೆಯ ನೋವು ಇನ್ನು ಅಭಿಮಾನಿಗಳ ಮನದಿಂದ ಮಾಸುವ ಮುನ್ನವೇ ರೆಬೆಲ್ಸ್ಟಾರ್ ಅಂಬರೀಷ್ ನಿಧನರಾಗಿರುವುದು ಅಭಿಮಾನಿಗಳಿಗೆ ಅತೀವ ನೋವುಂಟು ಮಾಡಿದೆ. ಅದೇ ರೀತಿ ಚಿತ್ರದುರ್ಗಕ್ಕೆ ರೈಲ್ವೆ ಸಂಪರ್ಕವನ್ನು ಕಲ್ಪಿಸುವಲ್ಲಿ ಅಪಾರ ಕೊಡುಗೆ ನೀಡಿದ ಮಾಜಿ ಕೇಂದ್ರ ಸಚಿವ ಸಿ.ಕೆ.ಜಾಫರ್ಷರೀಫ್ರವರ ನಿಧನ ಕೂಡ ರಾಜಕಾರಣಕ್ಕೆ ತುಂಬಲಾರದ ನಷ್ಟವುಂಟಾಗಿದೆ ಇಬ್ಬರ ಆತ್ಮಕ್ಕೆ ಭಗವಂತ ಶಾಂತಿ ನೀಡಲಿ ಎಂದು ಪ್ರಾರ್ಥಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
