ಸಾಧನೆಯೇ ಮಾತಾಗಬೇಕೆ ಹೊರತು ಮಾತೇ ಸಾಧನೆ ಆಗಬಾರದು

ಬೆಂಗಳೂರು

      ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಸೊರಬ ತಾಲೂಕಿನ ಅನೇಕ ಗ್ರಾಮಗಳಿಗೆ ಭೇಟಿ ನೀಡಿ ಮತಯಾಚನೆ ನಡೆಸಿದ್ದಾರೆ.ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಕೋಟಿಪುರ ಗ್ರಾಮದಲ್ಲಿ ಮತದಾರನ್ನು ಉದ್ದೇಶಿಸಿ ಮಾತನಾಡಿದ ಬಿವೈಆರ್, ಈ ಭಾಗದ ನೀರಾವರಿ ಯೋಜನೆಗಳು ಬಿ.ಎಸ್.ಯಡಿಯೂರಪ್ಪನವರ ಹೋರಾಟಗಳ ಫಲವಾಗಿ ಅನುಷ್ಠಾನಕ್ಕೆ ಬಂದಿವೆಯೇ ಹೊರತು ಬೇರೆ ಯಾರಿಂದಲ್ಲ.

      ಆದ್ರೆ ಮೈತ್ರಿ ಪಕ್ಷದ ಅಭ್ಯರ್ಥಿ ಈ ಯೋಜನೆಗಳನ್ನ ನಾನೇ ಈ ಕ್ಷೇತ್ರಕ್ಕೆ ತಂದಿದ್ದು ಎಂದು ಸುಳ್ಳು ಹೇಳುತ್ತಾ ತಿರುಗುತ್ತಿದ್ದಾರೆ. ಇಂತಹ ಸುಳ್ಳು ಬಹಳ ದಿನ ನಡೆಯುವುದಿಲ್ಲ. ಹಾಗಾಗಿಯೇ ಈ ಭಾಗದ ಜನ ಅವರನ್ನ ಮನೆಗೆ ಕಳಿಸಿದ್ದಿರಿ ಎಂದು ಟಾಂಗ್ ನೀಡಿದ್ಧಾರೆ. ಅಲ್ಲದೆ ಸಾಧನೆಯೇ ಮಾತಾಗಬೇಕೆ ಹೊರತು ಮಾತೇ ಸಾಧನೆ ಆಗಬಾರದು ಎಂದಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap