ಚಳ್ಳಕೆರೆ
ನಗರದ ಬೆಸ್ಕಾಂ ಕಚೇರಿ ಆವರಣದಲ್ಲಿರುವ ಶ್ರೀ ಶಕ್ತಿ ಗಣಪತಿ ದೇವಾಲಯದಲ್ಲಿ ಸಂಕಷ್ಟಿ ಹಿನ್ನೆಲೆಯಲ್ಲಿ ಸಂಕಟ ಹರ ಗಣಪತಿ ಪೂಜೆಯನ್ನು ಭಕ್ತಿ ಶ್ರದ್ದೆಗಳಿಂದ ಆಚರಿಸಲಾಯಿತು. ಬೆಸ್ಕಾಂನ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ವಿಭಾಗದ ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯ ಸಿ.ನಾಗರಾಜು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕಳೆದ ಸುಮಾರು 5 ವರ್ಷಗಳಿಂದ ಶ್ರೀಸಂಕಷ್ಟಹರ ಗಣಪತಿ ಪೂಜೆ, ಹೋಮವನ್ನು ಯಶಸ್ಸಿಯಾಗಿ ನಡೆಸಲಾಗುತ್ತಿದೆ. ಈ ಬಾರಿ ವಿಶೇಷವಾಗಿ ಬೆಸ್ಕಾಂ ಇಲಾಖೆಯ ಎಲ್ಲಾ ನೌಕರ ವರ್ಗ ಹಾಗೂ ಕುಟುಂಬ ವರ್ಗದವರು ಪೂಜಾ ಕಾರ್ಯದಲ್ಲಿ ಭಾಗವಹಿಸಿ ಉತ್ತಮ ಮಳೆ, ಬೆಳೆ ನೀಡುವಂತೆ ಶ್ರೀಗಣೇಶನನ್ನು ಭಕ್ತಿಯಿಂದ ಪ್ರಾರ್ಥಿಸಿದ್ದಾರೆಂದರು. ಪ್ರತಿ ತಿಂಗಳು ಸಂಕಷ್ಟಿಯಂದು ಗಣಪತಿಗೆ ಹೂ, ಹಣ್ಣು, ವಿವಿಧ ತರಕಾರಿಗಳಿಂದ ಅಲಂಕರಿಸಿ ಪೂಜಿಸಲಾಗುವುದು. ನಗರದ ನೂರಾರು ಭಕ್ತರು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ಸಂತಸ ತಂದಿದೆ ಎಂದರು. ಈ ಸಂದರ್ಭದಲ್ಲಿ ಆರ್ಚಕರಾದ ಕೃಷ್ಣಸ್ವಾಮಿ, ತ್ಯಾಗರಾಜು, ನಾಗರಾಜು, ಸಿಬ್ಬಂದಿಯಾದ ಬೋರಯ್ಯ, ಸಿದ್ದಯ್ಯ ಮುಂತಾದವರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
