ಅಗಡಿ
ಗ್ರಾಮ ಪಂಚಾಯತಿವತಿಯಿಂದ ಸಂತೆಯಲ್ಲಿ ಮಿಂಚಿನ ಮತದಾನ ಜಾಗೃತಿ ಅಭಿಯಾನ ಜಾಥಾ ಜರುಗಿತು. ಈ ಸಂಧರ್ಭದಲ್ಲಿ ಪಂಚಾಯತ ಅಭಿವೃದ್ಧಿ ಅಧಿಕಾರಿಯಾದ ಕುಮಾರಿ ಮಾಲಾಶ್ರೀ ಕೆಂಚನಗೌಡ್ರ ಮಾತನಾಡಿ ಮತದಾನ ಎನ್ನುವುದು ಪ್ರಜಾ ಪ್ರಭುತ್ವದ ಆಧಾರ ಸ್ತಂಭ.
ಈ ಸ್ತಂಭ ಗಟ್ಟಿಯಾಗಿರಬೇಕಾದರೆ ಮತದಾನದ ಪ್ರಮಾಣ ಹೆಚ್ಚಾಗಬೇಕಿದೆ. ಅಂದಾಗ ಮಾತ್ರ ಪ್ರಜಾ ಪ್ರಭುತ್ವ ಯಶಸ್ಸಿನ ಹಾದಿಯಲ್ಲಿ ಸಿಗಲಿದೆ ಎಂದು ತಿಳಿಸಿದರು. ಗ್ರಾಮ ಪಂಚಾಯತಿಯ ವ್ಯಾಪ್ತಿಯಲ್ಲಿ ಮತದಾನ ಜಾಗೃತಿ ಕಾರ್ಯಕ್ರಮ ಮತ್ತು ವಿವಿ ಪ್ಯಾಟ ಪ್ರಾತ್ಯಕ್ಷಿಕೆಯಲ್ಲಿ ಮತ್ತು ಇದೆ ಸಂದರ್ಭದಲ್ಲಿ ಮತದಾರರಿಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಹಾಗೆಯೇ ಮುಂದುವರೆದು ಪ್ರಜ್ಞಾವಂತ ಮತದಾರರು ಪ್ರಜಾ ಪ್ರಭುತ್ವದ ಮೂಲ ಕ್ರಿಯೆಯಾಗಿರುವ ಮತದಾನದಲ್ಲಿ ಕಡ್ಡಾಯವಾಗಿ ಮತದಾನ ಮಾಡುವಂತೆ ಕರಪತ್ರಗಳನ್ನು ಹಂಚುವ ಮುಖಾಂತರ ವ್ಯಾಪರಸ್ಥರಿಗೆ ಕರೆ ನೀಡಿದರು.
ನಾವು ಮತದಾನ ಮಾಡುವುದಲ್ಲದೆ ನಮ್ಮ ಸುತ್ತಮುತ್ತಲಿನವರು ಮತದಾನ ಮಾಡಿದ ಬಗ್ಗೆ ಖಾತ್ರಿ ಪಡಿಸಿಕೋಳ್ಳಬೇಕು. ಮತದಾನದಿಂದ ದೂರ ಉಳಿದವರಿಗೆ ಮತದಾನದ ಮಹತ್ವಕುರಿತು, ತಿಳಿಹೇಳುವ ಮೂಲಕ ಮತದಾನ ಮಾಡುವಂತೆ ಪ್ರೇರೆಪಿಸಬೇಕು ಎಂದರು. ಸರಕಾರಿ ಸಿಬ್ಬಂದಿ ತಮ್ಮ ಪರಿಸರದ ಮತದಾರರು ಮತಚಲಾಯಿಸುವಂತೆ ನೋಡಿಕೋಳ್ಳಬೇಕಿದೆ. ಪಂಚಾಯತಿ ವ್ಯಾಪ್ತಿಯಲ್ಲಿ ಮತದಾನ ಶೇಕಡಾ ಪ್ರಮಾಣ ಹೆಚ್ಚಿಸುವಲ್ಲಿ ಕಾಳಜಿವಹಿಸಬೇಕಿದೆ ಎಂದರು. ಕಾರ್ಯಕ್ರಮದಲ್ಲಿ ಪಂಚಾಯತಿ ಸಿಬ್ಬಂದಿ ವರ್ಗದವರು, ಪ್ರಾಥಮಿಕ ಶಾಲಾ ಸಿಕ್ಷಕರು ಆಶಾ/ಅಂಗನವಾಡಿ ಕಾರ್ಯಕರ್ತೆಯರು,ಊರನಾಗರಿಕರು ಭಾಗವಹಿಸಿದ್ದರು.