ಅನೈತಕ ಸಂಬಂಧ-ಕೊಲೆ

ಬೆಂಗಳೂರು

      ಶೇಷಾದ್ರಿಪುರಂನಲ್ಲಿ ಶುಕ್ರವಾರ ನಡೆದ ಹೊಟೇಲ್ ಮಾಲೀಕ ಸಂತೋಷ್ ಶೆಟ್ಟಿಯ ಕೊಲೆಗೆ ಅನೈತಕ ಸಂಬಂಧ ಕಾರಣವಾಗಿರುವುದು ಪ್ರಕರಣದ ತನಿಖೆಯಲ್ಲಿ ಕಂಡುಬಂದಿದೆ.

      ಯುವ ವಕೀಲನ ಮೋಹಕ್ಕೆ ಸಿಲುಕಿದ ಸಂತೋಷ್‍ಶೆಟ್ಟಿಯ ಪತ್ನಿ ಅನ್ನಪೂರ್ಣೇಶ್ವರಿ ಶೆಟ್ಟಿ (45) ಕೊಲೆ ನಡೆಸಿದ್ದಾರೆ. ವಿವಾಹವಾಗಿ 20 ವರ್ಷ ಕಳೆದಿದ್ದರೂ ತಂದೆ ಸ್ನೇಹಿತನ ಪುತ್ರನಾಗಿದ್ದ ಯುವ ವಕೀಲ ಯುವ ವಕೀಲ ಪ್ರಕಾಶ್ (26) ಜೊತೆ ಸೇರಿ ಗಾಂಧಿನಗರದಲ್ಲಿ ಮಹಾಲಕ್ಷ್ಮಿ ಹೋಟೆಲ್ ನಡೆಸುತ್ತಿದ್ದ ಪತಿಯನ್ನು ಅನ್ನಪೂರ್ಣೇಶ್ವರಿ ಶೆಟ್ಟಿ ಕೊಲೆ ಮಾಡಿಸಿದ್ದು ಇಬ್ಬರನ್ನು ಜೈಲಿಗೆ ಕಳುಹಿಸಲಾಗಿದೆ.

      ತಾಯಿ ಹಾಗೂ ಪ್ರಕಾಶ್ ಸೇರಿ ತಂದೆ ಸಂತೋಷ್ ಶೆಟ್ಟಿಯನ್ನು ಕೊಲೆ ಮಾಡಿರುವ ಮಾಹಿತಿಯನ್ನು ಇಂಜಿನಿಯರಿಂಗ್ ಓದುತ್ತಿರುವ ಪುತ್ರನೇ ಪೊಲೀಸರ ಬಳಿ ತಿಳಿಸಿ ದೂರು ನೀಡಿದ್ದು, ಕೃತ್ಯವೆಸಗಿದ ಇಬ್ಬರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಹೇಳಿದರು.

      ಅನ್ನಪೂರ್ಣೇಶ್ವರಿ ಶೆಟ್ಟಿಗೆ ಪಿಯುಸಿ ಓದುತ್ತಿದ್ದ ಮಗಳು ಹಾಗೂ ಇಂಜಿನಿಯರಿಂಗ್ ಓದುತ್ತಿದ್ದ ಮಗ ಸೇರಿ ಇಬ್ಬರು ಮಕ್ಕಳಿದ್ದರು. ಆದರೂ ಅನೈತಿಕ ಸಂಬಂಧದ ಕಾರಣಕ್ಕಾಗಿ ಸಂತೋಷ್ ಶೆಟ್ಟಿಯನ್ನು ಕೊಲೆ ಮಾಡಿದ್ದಾರೆ. ಸಂತೋಷ್ ಶೆಟ್ಟಿ ಕೂಡ ಮದ್ಯವ್ಯಸನಿಯಾಗಿದ್ದು , ಪ್ರತಿದಿನ ಕುಡಿದು ಬಂದು ಗಲಾಟೆ ಮಾಡುತ್ತಿದ್ದ.

      ಪ್ರಕಾಶ್ ಜತೆ ಹೊಂದಿದ್ದ ಅನೈತಿಕ ಸಂಬಂಧ ತಿಳಿದು ಜಗಳ ಮಾಡುತ್ತಿದ್ದು, ಮಕ್ಕಳ ಮುಂದೆಯೇ ಶೀಲಶಂಕಿಸಿ ಜಗಳ ಮಾಡುತ್ತಿದ್ದರಿಂದ ನೊಂದಿದ್ದ ಅನ್ನಪೂರ್ಣೇಶ್ವರಿ ಶೆಟ್ಟಿ ರೋಸಿಹೋಗಿ ಪ್ರಕಾಶನನ್ನು ಶೇಷಾದ್ರಿಪುರಂನ ಮನೆಗೆ ಕರೆಸಿಕೊಂಡು ಕೊಲೆ ಮಾಡಿದ್ದಾರೆ ಎಂದು ದೇವರಾಜ್ ತಿಳಿಸಿದ್ದಾರೆ.

                    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link