SARI ಸಮೀಕ್ಷೆಗೆ ಶಿಕ್ಷಕರ ನಿಯೋಜನೆ : ಶಿಕ್ಷಕರಲ್ಲಿ ಹೆಚ್ಚಿದ ಆತಂಕ..!

ಬೆಂಗಳೂರು:

     ನಿರ್ದಿಷ್ಟವಾದಂತಹ  ಆರೋಗ್ಯ ಸಮೀಕ್ಷೆಯನ್ನು ನಡೆಸಲು ಶಿಕ್ಷಕರನ್ನು ನಿಯೋಜಿಸಲಾಗುತ್ತಿದೆ.ಇದಕ್ಕಾಗಿ ಬುಧವಾರ ಅರ್ಜಿ ಕರೆಯಲಾಗಿದೆ.ಕೋವಿಡ್ -19 ನಿಂದ ಉಂಟಾಗುವ ಮತ್ತಷ್ಟು ಆರೋಗ್ಯ ಸಮಸ್ಯೆಗಳನ್ನು ತಡೆಯಲು ವಿಎಲ್ ಐ ( ಶೀತಜ್ವರ) ಸಾರಿ (ತೀವ್ರವಾದ ಉಸಿರಾಟದ ಸೋಂಕು) ಮತ್ತಿತರ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವವರನ್ನು ಮುಂಚಿತವಾಗಿ ಗುರುತಿಸಲು ಕುಟುಂಬಗಳ ಸಮೀಕ್ಷೆಯನ್ನು ರಾಜ್ಯಾದ್ಯಂತ ನಡೆಸಲಾಗುವುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಸುತ್ತೋಲೆಯಲ್ಲಿ ತಿಳಿಸಿದೆ. 

     ಆದರೆ, ಶಿಕ್ಷಕರು ತಮ್ಮ ಸುರಕ್ಷತೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಮಾಸ್ಕ್ ಗಳು, ಗ್ಲೌಸುಗಳನ್ನು ನೀಡಿದ್ದರೂ ನಮ್ಮಲಿ ಸರ್ವೆ ಮಾಡಲು ಭಯವಿದೆ, ಸೋಂಕನ್ನು ತಡೆಯುವ ತಾಂತ್ರಿಕ ಜ್ಞಾನವನ್ನು ಹೊಂದಿರದ ಕಾರಣ ಶಿಕ್ಷಕರಿಗೆ ಕೆಂಪು ವಲಯಗಳಲ್ಲಿ  ಸರ್ವೆಗಳಿಗೆ ನಿಯೋಜಿಸಬಾರದು ಎಂದು  ರಾಜ್ಯ ಪ್ರೌಢಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಯೊಬ್ಬರು ಹೇಳುತ್ತಾರೆ. 

    ಆರೋಗ್ಯ ಕಾರ್ಯಕರ್ತರಿಗೆ ಒದಗಿಸುವಂತೆ ಶಿಕ್ಷಕರಿಗೂ ಸರ್ಕಾರ ವಿಮೆ ಸೌಲಭ್ಯ ಒದಗಿಸಬೇಕೆಂದು  ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಚಂದ್ರಶೇಖರ್ ನುಗ್ಲಿ ಒತ್ತಾಯಿಸಿದ್ದಾರೆ.ಈ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯಿಸಿದ ಶಿಕ್ಷಣ ತಜ್ಞ ನಿರಂಜನಾರಾಧ್ಯ,  ಶಿಕ್ಷಕರನ್ನು ಪರೀಕ್ಷಿಸದ ಕಾರಣ, ಮನೆಗಳಿಗೆ ಭೇಟಿ ನೀಡುವಂತೆ ಕೇಳಿಕೊಳ್ಳುವುದು ಸೋಂಕಿನ ಅಪಾಯವನ್ನು ಹೆಚ್ಚಿಸುತ್ತದೆ  ಸುತ್ತೋಲೆಯ ಪ್ರಕಾರ, ಮತದಾನ ಅಧಿಕಾರಿಗಳಾಗಿ ಕೆಲಸ ಮಾಡಿದ ಶಿಕ್ಷಕರು ಇದರಲ್ಲಿ ಮತ್ತೆ ಕೆಲಸ ಮಾಡುತ್ತಾರೆ. ಮೇ 3 ರ ಗಡುವು ನಿಗದಿಪಡಿಸಲಾಗಿದೆ. ಉಪ ನಿರ್ದೇಶಕರು (ಆಡಳಿತ) ಮತ್ತು ಬಿಇಒಗಳನ್ನು ಡಿಸಿಗಳ ಮಾರ್ಗದರ್ಶನದಲ್ಲಿ ಕೆಲಸ ಮಾಡಲು ನಿರ್ದೇಶಿಸಲಾಗಿದೆ. ಮೊಬೈಲ್ ಅಪ್ಲಿಕೇಶನ್ ‘ಹೆಲ್ತ್ ವಾಚ್’ ಸ್ಥಳದಲ್ಲೇ ಮಾಹಿತಿಯನ್ನು ಅಪ್‌ಲೋಡ್ ಮಾಡಲು ಅವಕಾಶ ಮಾಡಿಕೊಡಲಿದೆ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap