ಬರಗೂರು :
ಷೇರುದಾರರಿಗೆ ಮನದಟ್ಟಾದರೆ, ಹಣ ಹೊಡಿಕೆದಾರರ ಸಂಖ್ಯೆ ದ್ವಿಗುಣವಾಗುತ್ತದೆ ಇದರಿಂದ ಸಂಘ ಬ್ಯಾಂಕ್ ಆಗಿ ಬೆಳವಣಿಗೆಯಾಗಲು ಕಾರಣವಾಗಲಿದೆ. ಷೇರಿದಾರರೆ ಸಂಘಗಳಿಗೆ ಆರ್ಥಿಕ ಭದ್ರ ಬುನಾದಿ ಎಂದು ಶ್ರೀ ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀನಂಜಾವಧೂತ ಸ್ವಾಮಿಜಿ ಹೇಳಿದರು.
ಶಿರಾ ತಾಲ್ಲೂಕಿನ ಬರಗೂರಿನಲ್ಲಿ ನೂತನವಾಗಿ ಸ್ಥಾಪನೆಗೊಂಡಿರುವ ಸ್ಪಟಿಕಪುರಿ ಶ್ರೀನಂಜಾವಧೂತ ಸ್ವಾಮಿಜಿ ಪತ್ತಿನ ಸಹಕಾರ ಸಂಘದ 2.ಶಾಖೆಯನ್ನು ಉದ್ಘಾಟನೆ ನೆರವೇರಿಸಿ ಮಾತನಾಡಿದರು.ಷೇರುದಾರರ ನಂಬಿಕೆ, ಪ್ರೀತಿ ವಿಶ್ವಾಸಗಳಿಸಿ ಸಹಕಾರ ತತ್ವ ಆದರ್ಶ ಮೈಗೊಡಿಸಿ ಕೊಂಡ ಗ್ರಾಹಕರಿಗೆ ನಗು ಮುಖದ ಸೇವೆ ನೀಡಿದಾಗ ಸಂಘ ಬ್ಯಾಂಕ್ ಆಗಿ ಬೆಳವಣಿಗೆ ಪಡೆಯಲು ಸಾಧ್ಯ ಎಂದರು.
ಕೆಎಸ್ಆರ್ಟಿಸಿ ಅಧ್ಯಕ್ಷ, ಶಾಸಕ ಬಿ.ಸತ್ಯನಾರಾಯಣ ಮಾತನಾಡಿ ಜನ ಸಾಮಾನ್ಯರು ಪಡೆದಂತ ಸಾಲ ಪ್ರಮಾಣಿಕವಾಗಿ ಮರು ಪಾವತಿ ಮಾಡುವ ಮೂಲಕ ಸಂಘಗಳ ಪ್ರಗತಿಗೆ ಕೈಜೋಡಿಸುವ ಅಗತ್ಯವಿದೆ ಬ್ಯಾಂಕ್ ಗ್ರಾಹಕರ ವಿಶ್ವಾಸಗಳಿಸಿದರೆ, ಆರ್ಥಿಕ ವಹಿವಾಟು ಪ್ರಗತಿಯತ್ತ ಸಾಗುತ್ತದೆ ಎಂದರು.
ಸಂಘದ ಅಧ್ಯಕ್ಷ ಹೊಸ್ಮನೆ ರಂಗನಾಥ್, ಈ.ಶಿವಾನಂದ್, ತಾಪಂ ಮಾಜಿ ಅಧ್ಯಕ್ಷ ಜಿ.ಎನ್.ಮೂರ್ತಿ, ಡಾ.ಎಂ.ರಾಜೇಶ್ಗೌಡ, ಜಿಪಂ.ಸದಸ್ಯ ಎಸ್.ರಾಮಕೃಷ್ಣ, ಮಾಜಿ ಜಿಪಂ ಸದಸ್ಯ ಪ್ರಕಾಶ್ಗೌಡ, ಮುಖಂಡ ಬಿ.ಹಲಗುಂಡೇಗೌಡ, ಆರ್.ಟಿ.ನಾರಾಯಣ, ವೀರಗ್ಯಾತಪ್ಪ, ಮುದ್ದುಕೃಷ್ಣಗೌಡ, ಸಿದ್ದಗಂಗಪ್ಪ, ಮುಬಾರಕ್, ನಾಗರಾಜು, ಹನುಮಂತೇಗೌಡ, ಮೂಡಲಗಿರಿಯಪ್ಪ, ಹೆಚ್.ಎಸ್.ಸತೀಶ್, ಚಂದ್ರಶೇಖರ್ ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
