ಹುಳೀಯಾರು
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಸೀತಾ ವಲ್ಲಭ ಧಾರಾವಾಹಿಯ ತಂಡದವರಿಂದ ಸೀರಿಯಲ್ ಸಂತೆ ಕಾರ್ಯಕ್ರಮವನ್ನು ಹುಳಿಯಾರಿನ ಕೋಡಿಪಾಳ್ಯದ ಧ್ಯಾನ ನಗರಿಯ ಸಂಸ್ಕೃತಿಕ ಸದನದಲ್ಲಿ ಜುಲೈ 6 ರ ಶನಿವಾರ ಸಂಜೆ 6 ಗಂಟೆಯಿಂದ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀಮಾತಾ ಚಾರಿಟಬಲ್ ಟ್ರಸ್ಟಿನ ವ್ಯವಸ್ಥಾಪಕ ಧರ್ಮದರ್ಶಿ ಗಂಗಾಧರ್ ತಿಳಿಸಿದರು.
ಈ ಬಗ್ಗೆ ಹುಳಿಯಾರಿನ ಮಾತಾ ಯಾತ್ರಿ ನಿವಾಸದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು ಹುಳಿಯಾರು ಜನತೆಗೆ ವಿಭಿನ್ನ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿರುವ ಶ್ರೀಮಾತಾ ಚಾರಿಟಬಲ್ ಟ್ರಸ್ಟ್ ಈ ಬಾರಿ ಸೀರಿಯಲ್ ನಟನಟಿಯರನ್ನು ಪರಿಚಯಿಸುವ ನಿಟ್ಟಿನಲ್ಲಿ ಸೀರಿಯಲ್ ಸಂತೆ ಆಯೋಜಿಸಿರುವುದಾಗಿ ತಿಳಿಸಿದರು.
ಕಾರ್ಯಕ್ರಮಕ್ಕೆ ಆಗಮಿಸುವ ಸಹಸ್ರಾರು ಪ್ರೇಕ್ಷಕರಿಗೆ ಪಾಸ್ ವಿತರಣೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚಿಸಿದರು.ಈ ವೇಳೆ ಬ್ಯಾಂಕ್ ಮರುಳಪ್ಪ, ಕೆಂಕೆರೆ ಸತೀಶ್, ಎಂ.ಎಸ್. ನಟರಾಜ್, ಎಲ್.ಆರ್.ಚಂದ್ರಶೇಖರ್, ಬಡಗಿ ರಾಮಣ್ಣ, ಹು.ಕೃ.ವಿಶ್ವನಾಥ್ , ಕೆಂಕೆರೆ ಗ್ರಾಪಂ ಅಧ್ಯಕ್ಷೆ ಆಶಾ ಉಮೇಶ್, ಕಲಾವಿದ ಗೌಡಿ, ಚಿರುಮುರಿ ಶ್ರೀನಿವಾಸ್, ಹಾಡ್ರ್ವೇರ್ ಸಂಘದ ಬಸವರಾಜು, ಭವಾನಿ ರಮೇಶ್, ಎಲ್.ಆರ್.ಸುಧೀರ್, ಸ್ಟುಡಿಯೋ ರಾಜು, ಕಂಪನಹಳ್ಳಿ ಪ್ರಕಾಶ್, ಮೆಡಿಕಲ್ ಚಂಬಣ್ಣ, ಪಾಳ್ಯ ಉಮೇಶ್, ಉಪನ್ಯಾಸಕ ನರೇಂದ್ರಬಾಬು, ಸ್ಟುಡಿಯೋ ತಾಂಡವಾಚಾರ್ ಮತ್ತಿತರರು ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
