ತುರುವೇಕೆರೆ:
ನಡೆದಾಡುವ ದೇವರು ಲಕ್ಷಾಂತರ ಮಕ್ಕಳಿಗೆ ವಿದ್ಯೆ,ಅನ್ನ,ಆಶ್ರಯ ನೀಡಿ ತ್ರಿವಿಧ ದಾಸೋಹಿಗಳಾದ ಸಿದ್ದಗಂಗ ಮಠದ ಶ್ರೀ ಶ್ರೀ ಶ್ರೀ ಡಾ|| ಶಿವಕುಮಾರ ಮಹಾಸ್ವಾಮೀಜಿಗಳ ಪುಣ್ಯಾರಾಧನೆಯನ್ನು ಫೆ. 3 ರ ಭಾನುವಾರ ಬೆಳಿಗ್ಗೆ 10:30 ಕ್ಕೆ ಪಟ್ಟಣದ ಬಯಲುರಂಗ ಮಂದಿರದ ಆವರಣದಲ್ಲಿ ಆಯೋಜಿಸಲಾಗಿದೆ ಎಂದು ಶಾಸಕ ಮಸಾಲೆ ಜಯರಾಮ್ ತಿಳಿಸಿದರು.
ಪಟ್ಟಣದ ಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ಪುಣ್ಯರಾಧನೆ ಆಚರಣೆ ಬಗ್ಗೆ
ತಾಲ್ಲೂಕಿನ ಶ್ರೀಗಳ ಅಭಿಮಾನಿಗಳು, ಭಕ್ತವೃಂದ ಹಾಗೂ ವಿವಿಧ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ಸೇರಿದ್ದ ಪೂರ್ವಬಾವಿ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ ಶ್ರೀಗಳು ನಾಡಿಗೆ, ದೇಶಕ್ಕೆ ಅಪಾರವಾದ ಸೇವೆ ಸಲ್ಲಿಸಿ ಜನಮನದಲ್ಲಿ ಬೇರೂರಿದ್ದಾರೆ. ನಾವು ಶಿರಡಿ ಸಾಯಿಬಾಬಾ, ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳು, ಯಡಿಯೂರು ಸಿದ್ದಲಿಂಗೇಶ್ವರನ್ನು ಕಣ್ಣಿಂದ ನೋಡಿಲ್ಲವಾದರೂ ಅವರುಗಳು ಮಾಡಿಹೋದ ಪವಾಡ ಸೇವೆ ಸ್ಮರಿಸಿ ಇಂದು ಅವರುಗಳು ದೇವ ಮಾನವರಾಗಿ ಭಕ್ತರಿಗೆ ಆಶೀರ್ವಾದ ಮಾಡುತ್ತಿದ್ದಾರೆ.
ಅಂತವರ ಸಾಲಿಗೆ ಸೇರಿದ ಶಿವಕುಮಾರ ಸ್ವಾಮಿಗಳ ಪುಣ್ಯ ಸ್ಮರಣೆ ಮಾಡುವುದು ನಮ್ಮ ಭಾಗ್ಯವೆಂದರು. ಪಟ್ಟಣದ ಬಯಲು ರಂಗಮಂದಿದ ಆವರಣದಲ್ಲಿ ಬೃಹತ್ ವೇದಿಕೆ ನಿರ್ಮಿಸಿ ಸ್ವಾಮಿಗಳ ಪಾದುಕೆ ಮತ್ತು ಸ್ವಾಮಿಯವರ 6 ಅಡಿ ಎತ್ತರದ ಪುತ್ಥಳಿಗೆ ಪೂಜೆ ಸಲ್ಲಿಸುವುದರ ಮೂಲಕ ಭಕ್ತಿ ನಮನ ಸಲ್ಲಿಸಲಾಗುವುದು ಎಂದರು.
ಈ ಕಾರ್ಯಕ್ರಮಕ್ಕೆ ವಿವಿಧ ಮಠಾಧೀಶರುಗಳಾದ ಆದಿಚುಂಚನಗಿರಿಯ ಶ್ರೀ ಶ್ರೀ ಪ್ರಸನ್ನನಾಥಸ್ವಾಮೀಜಿ, ಕೆರೆಗೋಡಿರಂಗಾಪುರದ ಶ್ರಿ ಶ್ರೀ ಪರದೇಶಿದೇಶಿಕೇಂದ್ರ ಮಹಾಸ್ವಾಮೀಜಿಗಳು, ನೊಣವಿನಕೆರೆ ಕಾಡುಸಿದ್ದೇಶ್ವರ ಮಠದ ಶ್ರೀ ಶ್ರೀ ಕರಿವೃಷಭದೇಶೀಕೇಂದ್ರ ಸ್ವಾಮೀಜಿ, ತಮಡೀಹಳ್ಳಿ ಮಠದ ಡಾ. ಶ್ರೀಶ್ರೀ ಅಭಿನವ ಮಲ್ಲಿಕಾರ್ಜುನದೇಶೀಕೇಂದ್ರ ಸ್ವಾಮೀಜಿ ಹಾಗು ಗೋಡೆಕೆರೆ ಸ್ವಾಮೀಜಿಗಳು ದಿವ್ಯಸಾನಿಧ್ಯ ವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಶ್ರೀ ಗಳ ಬಗ್ಗೆ ನುಡಿ ನಮನಗಳನ್ನು ನಿವೃತ್ತ ಐ ಎ ಎಸ್ ಅಧಿಕಾರಿ ಡಾ. ಸಿ. ಸೋಮಶೇಖರ್ ನಡೆಸಿಕೊಡಲಿದ್ದಾರೆ. ತಾಲ್ಲೂಕಿನಾದ್ಯಂತ ಸುಮಾರು 10 ಸಾವಿರಕ್ಕೂ ಹೆಚ್ಚು ಭಕ್ತಾಧಿಗಳು ಈ ಪುಣ್ಯರಾಧನೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದ್ದು ಬಂದಂತ ಭಕ್ತರಿಗೆ ಪಾಯಸ ಬೂಂದಿ, ಅನ್ನ ಸಾಂಬಾರು, ಮಜ್ಜಿಗೆ, ಶುದ್ದಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುವುದು ಎಂದರು.
ಮುಂದಿನ ದಿನಗಳಲ್ಲಿ ಅವರ ಸ್ಮರಣಾರ್ಥ ಶ್ರೀಗಳವರ ಪುತ್ಥಳಿ ನಿರ್ಮಾಣ ಅಥವಾ ಯಾವುದಾದರೂಂದು ರಸ್ತೆಗೆ ಅವರ ಹೆಸರನ್ನು ನಾಮಕರಣ ಮಾಡಲಾಗುವುದು ಎಂದರು. ಈ ಸಂದರ್ಭದಲ್ಲಿ ತಾಲ್ಲೂಕು ಒಕ್ಕಲಿಗ ಸಂಘದ ಅಧ್ಯಕ್ಷ ಕಡೇಹಳ್ಳಿ ಸಿದ್ದೇಗೌಡ, ವೀರಶೈವ ಸಮಾಜದ ಅಧ್ಯಕ್ಷ ಕುಮಾರಸ್ವಾಮಿ, ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ಮಹಾಲಿಂಗಪ್ಪ, ಮುಖಂಡರುಗಳಾದ ಮಂಜುನಾಥ್, ದುಂಡ ರೇಣುಕಪ್ಪ, ವಕೀಲ ಧನಪಾಲ್, ಖ್ಯಾತ ವೈದ್ಯ ಡಾ. ನಾಗರಾಜ್, ವರ್ತಕ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ್, ಕೊಂಡಜ್ಜಿ ವಿಶ್ವನಾಥ್, ಕಸಾಪ ಅಧ್ಯಕ್ಷ ನಂ.ರಾಜು, ದೊಂಬರನಹಳ್ಳಿ ಬಸವರಾಜು, ಮಂಗೀಕುಪ್ಪೆ ಗಂಗಣ್ಣ, ಎ.ಪಿ.ಎಂ.ಸಿ. ನಿರ್ದೇಶಕ ವಿ.ಟಿ. ವೆಂಕಟರಾಮ್, ಪ.ಪಂ.ಸ್ಥಾಯಿ ಸಮಿತಿ ಅಧ್ಯಕ್ಷ ಯಜಮಾನ್ ಮಹೇಶ್, ರಾ.ಸ.ನೌ.ಸಂಘದ ಪ್ರಹ್ಲಾದ್, ನಾಗಲಾಪುರ ಮಂಜಣ್ಣ, ವಿ.ಬಿ. ಸುರೇಶ್, ಸೇರಿದಂತೆ ತಾಲ್ಲೂಕಿನ ಅನೇಕ ಮುಖಂಡರುಗಳು ಹಾಗು ಅಪಾರ ಭಕ್ತರು ಪಾಲ್ಗೋಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
