ಚಿನ್ನದ ಕಿರೀಟ ತ್ಯಜಿಸಿ ಶೂನ್ಯಪೀಠವೇರಿದ ಶರಣರು..!

ಚಿತ್ರದುರ್ಗ

    ಮುರುಘಾಮಠದಲ್ಲಿ ನಡೆಯುತ್ತಿರುವ ಶರಣ ಸಂಸ್ಕೃತಿ ಉತ್ಸವದಲ್ಲಿ ಬುಧವಾರ ಡಾ.ಶಿವಮೂರ್ತಿ ಮುರುಘಾಶರಣರ ಶೂನ್ಯಪೀಠಾರೋಹಣ, ಧರ್ಮಗುರು ಬಸವೇಶ್ವರರ ಹಾಗೂ ಪ್ರಾಚೀನ ಹಸ್ತಪ್ರತಿಗಳ ಮೆರವಣಿಗೆ ಅದ್ದೂರಿಯಾಗಿ ಜರುಗಿತು
ಮುರುಘಾಮಠದಲ್ಲಿ ಸಡಗರ-ಸಂಭ್ರಮ ಮೈದೆಳೆದು ಎಲ್ಲಿ ನೋಡಿದಲ್ಲಿ ಜನಸಾಗರವೇ ತುಂಬಿಹೋಗಿತ್ತು.

   ಕಳೆದ ಅಕ್ಟೋಬರ್ 2ನೇ ತಾರೀಖಿನಿಂದ ನಡೆದುಕೊಂಡು ಬಂದಿರುವ ಶರಣಸಂಸ್ಕೃತಿ ಉತ್ಸವದಲ್ಲಿಂದು ಸಂಭ್ರಮದ ವಾತಾವರಣ ಮನೆ ಮಾಡಿತ್ತು. ವೈಚಾರಿಕತೆಯಿಂದ ಗುರುತಿಸಿಕೊಂಡಿರುವ ಮುರುಘಾಮಠದ ಶೂನ್ಯಪೀಠಾರೋಹಣ ಅತ್ಯಂತ ಮಹತ್ವ ಪಡೆದುಕೊಂಡಿದೆ. ಡಾ.ಶಿವಮೂರ್ತಿ ಮುರುಘಾ ಶರಣರು ರುದ್ರಾಕ್ಷಿ ಕಿರೀಟಧಾರಣೆ ಮಾಡಿ, ಸರಳವಾಗಿ ಪೀಠಾರೋಹಣ ಮಾಡಿದರು. ಡಾ. ಶಿವಮೂರ್ತಿ ಮುರುಘಾ ಶರಣರು ಶ್ರೀಮಠದ ಕರ್ತೃ ಮುರುಗಿ ಶಾಂತವೀರಸ್ವಾಮಿಗಳ ಗದ್ದುಗೆಗೆ ಭಕ್ತಿ ಸಮರ್ಪಿಸಿ, ಚಿನ್ನದ ಕಿರೀಟ, ಇತರೆ ಎಲ್ಲ ಆಭರಣಗಳನ್ನು ಭಕ್ತರ ಕೈಗೆ ನೀಡಿ, ರುದ್ರಾಕ್ಷಿ ಕಿರೀಟ ಧರಿಸಿ, ವಚನ ಕೃತಿಯನ್ನಿಡಿದುಕೊಂಡು ಪೀಠಾರೋಹಣ ಮಾಡಿದರು.

    ಈ ಸಂದರ್ಭದಲ್ಲಿ ನಾಡಿನ ವಿವಿಧ ಮಠಾದೀಶರು, ಹರಗುರುಚರಮೂರ್ತಿಗಳು, ಸಾಧಕರು, ಭಕ್ತರು, ಉತ್ಸವ ಸಮಿತಿಯ ಸದಸ್ಯರು, ಎಸ್.ಜೆ.ಎಂ.ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯರು, ಶಾಲಾಕಾಲೇಜುಗಳ ಮುಖ್ಯಸ್ಥರುಗಳು, ನೌಕರ ವರ್ಗದವರು, ಅಪಾರ ಸಂಖ್ಯೆಯ ಜನ ಸಮೂಹ ಜಯಘೋಷಣೆಗಳೊಂದಿಗೆ ಶ್ರೀಮಠದಲ್ಲಿ ಶೂನ್ಯ ಪೀಠಾರೋಹಣವನ್ನು ವೀಕ್ಷಿಸಿದರು.

    ವಿವಿಧ ಕಲಾತಂಡಗಳು ಶ್ರೀಮಠದ ರಾಜಾಂಗಣದಲ್ಲಿ ತಮ್ಮ ಕಲೆಯನ್ನು ಪ್ರದರ್ಶಿಸಿದರು. ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ ಭಕ್ತ ಸಮೂಹ ಸರದಿ ಸಾಲಿನಲ್ಲಿ ನಿಂತು ಶೂನ್ಯಪೀಠಾರೋಹಣ ವೀಕ್ಷಣೆ ಮಾಡಿ, ಶರಣರಿಗೆ ಫಲಪುಷ್ಪ ಕಾಣಿಕೆಗಳನ್ನು ನೀಡಿ ಆಶೀರ್ವಾದ ಪಡೆದುಕೊಂಡರು.

     ಶ್ರೀಮಠದಲ್ಲಿಂದು ನಡೆದ ಐತಿಹಾಸಿಕ ಸನ್ನಿವೇಶಗಳಿಗೆ ಶ್ರೀಮಠವನ್ನು ತಳಿರು-ತೋರಣಗಳಿಂದ ಸಿಂಗರಿಸಲಾಗಿತ್ತು. ಶ್ರೀಮಠದ ರಾಜಾಂಗಣದಲ್ಲಿ ಬಿಡಿಸಿದ್ದ ಹೂವಿನ ಬೃಹತ್ ಅಲಂಕಾರ ಎಲ್ಲರ ಗಮನ ಸೆಳೆಯಿತು. ಇಂದಿನ ಸಮಾರಂಭದಲ್ಲಿ ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು, ಬರುವ ಎಲ್ಲ ಭಕ್ತಾದಿಗಳಿಗೆ ಮಹಾದಾಸೋಹ ವ್ಯವಸ್ಥೆಯನ್ನು ಮಾಡಲಾಗಿತ್ತು.

ಮಕ್ಕಳ ಮೇಳ

    ಶ್ರೀಮಠದ ಅನುಭವ ಮಂಟಪದಲ್ಲಿ ನಡೆಯುತ್ತಿರುವ ಶರಣ ಸಂಸ್ಕøತಿ ಉತ್ಸವದಲ್ಲಿ ಮಕ್ಕಳಮೇಳ ಕಾರ್ಯಕ್ರಮ ಜರುಗಿತು ಕಾರ್ಯಕ್ರಮದಲ್ಲಿ ಜೀ ಟೀವಿ ಕನ್ನಡ ಕಣ್ಮಣಿ ಪ್ರಶಸ್ತಿ ವಿಜೇತೆ ಉಡುಪಿಯ ಸಂಹಿತಾ, ಜೀ ಟೀವಿ ಕನ್ನಡ ಕಣ್ಮಣಿ ಪ್ರತಿಭೆ ಹುಬ್ಬಳ್ಳಿಯ ಶ್ರೇಯಾ ಭಾಷಣ, ಜೀ ಟೀವಿ ಸರಿಗಮಪ ಪ್ರಶಸ್ತಿ ವಿಜೇತ ಓಂಕಾರ ಪತ್ತಾರ, ಕಲರ್ಸ್ ಕನ್ನಡ ವಾಹಿನಿಯ ಕನ್ನಡ ಕೋಗಿಲೆ ಪ್ರತಿಭೆ ಕೊಪ್ಪಳದ ಅರ್ಜುನ ಇಟಗಿ, ಕನ್ನಡ ಕೋಗಿಲೆ ಪ್ರತಿಭೆ ಹುಬ್ಬಳ್ಳಿಯ ಮಹನ್ಯ ಗುರುಪಾಟೀಲ ಸುಗಮ ಸಂಗೀತ, ಡ್ರಾಮಾ ಜೂನಿಯರ್ ಪ್ರತಿಭೆ ಚಿ.ಯತೀಶ ಏಕಪಾತ್ರಾಭಿನಯ, ಶಿರಸಿಯ ಭರತನಾಟ್ಯ ಪ್ರತಿಭೆ ಚಿ. ಸೌಭಾಗ್ಯ ಹಂದ್ರಾಳ ನೃತ್ಯ, ಯೋಗ ಗಿನ್ನಿಸ್ ವಲ್ರ್ಡ್ ರೆಕಾರ್ಡ್ ಸಾಧಕಿ ಉಡುಪಿಯ ಚಿ.ತನುಶ್ರೀ ವಿಶೇಷ ಯೋಗ, ಬೆಂಗಳೂರು ಯತೀಶ್ ಇವೆಂಟ್ಸ್ ಹಾಗೂ ರಮೇಶ್ ನಿರ್ದೇಶಿತ ಮಕ್ಕಳ ತಂಡಗಳು ಸಮೂಹ ನೃತ್ಯ ಹಾಗೂ ತಮಿಳುನಾಡಿನ ಚಿ.ವೈಷ್ಣವಿ ಸಾಹಸ ಪ್ರದರ್ಶನವನ್ನು ನೀಡಿದರು

    ಕಾರ್ಯಕ್ರಮದಲ್ಲಿ ಚಿತ್ರದುರ್ಗ ಶ್ರೀ ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮಿಗಳು, ಹೊಸದುರ್ಗದ ಕುಂಚಿಟಿಗ ಗುರುಪೀಠದ ಡಾ.ಬಸವಶಾಂತವೀರಸ್ವಾಮಿಗಳು, ಶರಣ ಸಂಸ್ಕೃತಿ ಉತ್ಸವದ ಸಮಿತಿ ಕಾರ್ಯಾಧ್ಯಕ್ಷರಾದ ಹನುಮಲಿ ಷಣ್ಮುಖಪ್ಪ ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap