ಕೊರಟಗೆರೆ:-
ಭಾರತೀಯ ಜನತಾ ಪಾರ್ಟಿಯ ಪ್ರಭಾವಿ ನಾಯಕ ಹಾಗೂ ಹಾಲಿ ಕೇಂದ್ರ ಸಚಿವ ಅನಂತ ಕುಮಾರ್ ಅಕಾಲಿಕ ಮರಣಕ್ಕೆ ಕೊರಟಗೆರೆ ವಿಧಾನಸಭಾಕ್ಷೇತ್ರ ವ್ಯಾಪ್ತಿಯ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಸಂತಾಪ ಸೂಚಿಸಿ ಶ್ರದ್ದಾಂಜಲಿ ಸಲ್ಲಿಸಿದರು. ಪಟ್ಟಣದ ಎಸ್ಎಸ್ಆರ್ ವೃತ್ತದ ಬಳಿ ಬಿಜೆಪಿ ಪಕ್ಷದ ವತಿಯಿಂದ ಸೋಮವಾರ ಕೇಂದ್ರ ಸಚಿವ ಅನಂತ ಕುಮಾರ್ ಮೃತಪಟ್ಟ ಹಿನ್ನಲೆಯಲ್ಲಿ ಅವರಿಗೆ ಶ್ರದ್ದಾಂಜಲಿ ಸಲ್ಲಿಸಿ ಸಂತಾಪ ಸೂಚಿಸಿದರು.
ಶ್ರದ್ದಾಂಜಲಿ ಅರ್ಪಿಸಿ ಮಾತನಾಡಿದ ತುಮಕೂರು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪವನ್ ಕುಮಾರ್ ಅನಂತ್ ಕುಮಾರ್ ರವರ ನಿಧನದಿಂದ ಬಿಜೆಪಿ ಹಾಗೂ ರಾಜ್ಯಕ್ಕೆತುಂಬಲಾಗದ ನಷ್ಟವಾಗಿದ್ದು ಕೇಂದ್ರದಲ್ಲಿ ರಾಜ್ಯದ ಅಭಿವೃದ್ದಿ ಹಾಗೂ ಸಮಸ್ಯೆಗಳ ಬಗ್ಗೆ ದ್ವನಿ ಎತ್ತುವಂತಹ ಒಬ್ಬ ರಾಜ್ಯ ಮಹತ್ವ ಕಾಂಕ್ಷಿ ರಾಜಕಾರಣಿಯನ್ನು ಕಳೆದುಕೊಂಡಂತಾಗಿದೆ ಎಂದುನೋವು ತೋಡಿಕೊಂಡರು.
ಕರ್ನಾಟಕ ರಾಜ್ಯದಲ್ಲಿ ಸತತ ಆರು ಭಾರಿ ಸಂಸದರಾಗಿ ಆಯ್ಕೆಯಾಗಿ ಕರ್ನಾಟಕದ ಅಭಿವೃದ್ದಿಗೆ ಸಿಂಹಪಾಲು ಅನುಧಾನ ತಂದ ಕೀರ್ತಿ ಅನಂತ ಕುಮಾರ್ ಸಲ್ಲುತ್ತದೆ .ನರೇಂದ್ರ ಮೋದಿ ನೇತೃತ್ವದ ಬಿಜೆಪಿಯಕೇಂದ್ರ ಸರಕಾರದಲ್ಲಿ ರಸಗೊಬ್ಬರ ಮತ್ತು ಸಂಸದೀಯ ಸಚಿವರಾಗಿ ರಾಜ್ಯದ ಅಭಿವೃದ್ದಿ ಮತ್ತು ನಾಡು ನುಡಿಯ ವಿಚಾರದಲ್ಲಿ ಬಹಳ ಸೂಕ್ಷ್ಮತೆಯಿಂದ ಕೆಲಸ ಮಾಡಿದ ನಾಯಕ ನಮಗೆ ಇನ್ನೂ ನೆನಪು ಮಾತ್ರ ಎಂದು ಹೇಳಿದರು.
ಬಿಜೆಪಿ ಪಕ್ಷದ ಯುವ ಕಾರ್ಯಕರ್ತರ ಪಾಲಿನ ಸಂಘಟನಾ ಚತುರನ ಸಾವಿನಿಂದ ಪಕ್ಷಕ್ಕೆ ತುಂಬಲಾರದ ನಷ್ಟವಾಗಿದೆ . ರಾಜ್ಯ ಮತ್ತು ರಾಷ್ಟ್ರದಲ್ಲಿ ಮೋದಿಯ ಪರಮ ಮಿತ್ರನಾಗಿ ಕೆಲಸ ಮಾಡಿದ ಕೀರ್ತಿಯು ಇವರಿಗೆ ಸಲ್ಲುತ್ತದೆ. ಭಗವಂತ ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥನೆ ಮಾಡುತ್ತೇವೆ ಎಂದರು .ಇದೇ ವೇಳೆ ತಮ್ಮನ್ನು ಅಗಲಿದ ನಾಯಕನಿಗೆ 5 ನಿಮಿಷಗಳ ಕಾಲ ಮೌನದಿಂದ ಪ್ರಾರ್ಥನೆ ಸಲ್ಲಿಸಿದರು .
ಈ ಸಂದರ್ಭದಲ್ಲಿ ಬಿಜೆಪಿ ಪಕ್ಷದ ಮುಖಂಡರಾದ ಪ್ರಸನ್ನಕುಮಾರ್, ಗುರುಧತ್, ಕುಮಾರ್, ಚಂದ್ರಣ್ಣ, ನಟರಾಜು, ಪ್ರಕಾಶ್, ರೆಡ್ಡಿ, ಮಹೇಶ್, ಸಂತೋಷ್, ನಂಜುಂಡಯ್ಯ, ಆಟೋಗೋಪಿ, ಪುಟ್ಟವೀರಾಆರಾಧ್ಯ, ಮಧು, ಶಶಿಕುಮಾರ್, ಶ್ರೀನಿವಾಸ್, ನಾಗಭೂಷಣ ಸೇರಿದಂತೆಇತರರುಇದ್ದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ