ಚಿಕ್ಕನಾಯಕನಹಳ್ಳಿ
ತಾಲ್ಲೂಕಿನ ಆಶ್ರೀಹಾಳ್ ಬಳಿಯ ಕರೆಕಲ್ಲು ಗುಡ್ಡದಲ್ಲಿ ಪೂರ್ತಿ ಸುಟ್ಟು ಕರಕಲಾಗಿರುವ ಅಸ್ಥಿಪಂಜರದ ಭಾಗಗಳು ಸಿಕ್ಕಿವೆ. ಇದನ್ನು ಕೊಲೆ ಎನ್ನಲಾಗುತ್ತಿದ್ದು ತನಿಖೆ ಮುಂದುವರೆದಿದೆ.
ಗುರುವಾರ ಬೆಳಗ್ಗೆ 11 ಗಂಟೆ ಸುಮಾರಿನಲ್ಲಿ ಆಶ್ರೀಹಾಳ್ನ ಗ್ರಾಮಸ್ಥರು ನೀಡಿದ ಮಾಹಿತಿಯ ಮೇರೆಗೆ ಪೊಲೀಸರು ಸ್ಥಳಕ್ಕೆ ತೆರಳಿದ್ದು, ದೇಹ ಪೂರ್ಣ ಸುಟ್ಟು ಹೋಗಿದ್ದು, ಗಂಡಸಿನ ದೇಹವೆಂದು ಮೇಲ್ನೋಟಕ್ಕೆ ಕಂಡು ಬಂದಿದೆ. ಹೆಚ್ಚಿನ ಗುರುತುಗಳೇನು ಸ್ಥಳದಲ್ಲಿ ದೊರೆಯದ ಕಾರಣ ಸ್ಪಷ್ಟ ನಿರ್ಧಾರಕ್ಕೆ ಬರಲಾಗಿಲ್ಲ, ಪೆÇಲೀಸರು ತನಿಖೆಯನ್ನು ಮುಂದುವರೆ ಸಿದ್ದಾರೆ. ಸ್ಥಳಕ್ಕೆ ತಿಪಟೂರು ಡಿವೈಎಸ್ಪಿ ವಿಜಯಕುಮಾರ್, ಸಿ.ಪಿ.ಐ. ವೀಣಾ, ಪಿ.ಎಸೈ. ರಮೇಶ್ಕುಮಾರ್ ಭೇಟಿ ನೀಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ