ಜನರಲ್ಲಿ ಜೀವ ಭಯ ಹುಟ್ಟಿಸಿರುವ ಸ್ಮಾರ್ಟ್ ಸಿಟಿ ಕಾಮಗಾರಿ..!

ತುಮಕೂರು:
    ಎಲ್ಲಿ ತನ್ನ ವಾಹನ ಸಿಕ್ಕಿಕೊಳ್ಳುವುದೋ ಎಂಬ ಭಯ… ರಸ್ತೆಯಲ್ಲಿ ಹೋಗುವಾಗ ಗುಂಡಿಯೊಳಗೆ ಬಿದ್ದು ಬಿಡುವ ಆತಂಕ… ಹಿಂದಿನಿಂದ ಬರುವ ವಾಹನಗಳು ಡಿಕ್ಕಿ ಹೊಡೆಯುವ ಭೀತಿ… ಇದು ತುಮಕೂರು ನಗರದಲ್ಲಿ ಸಂಚರಿಸುವ ಎಲ್ಲರಲ್ಲೂ ಒಂದು ಕ್ಷಣ ಉದ್ಭವವಾಗುವ ಆತಂಕದ ಮನಸ್ಥಿತಿ.
    ಸ್ಮಾರ್ಟ್ಸಿಟಿ ಹೆಸರಿನಲ್ಲಿ ನಡೆಯುತ್ತಿರುವ ಯದ್ವಾತದ್ವಾ ಕಾಮಗಾರಿಗಳನ್ನು ನೋಡಿದವರಿಗೆ ಈ ಪರಿಸ್ಥಿತಿ ಅರ್ಥವಾಗುತ್ತದೆ. ವರ್ಷಗಟ್ಟಲೆ ಇಂತಹ ಕೀಳು ಮಟ್ಟದ ಕಾಮಗಾರಿಗಳು ನಡೆಯುತ್ತಿದ್ದರೂ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ತುಟಿ ಪಿಟಿಕ್ ಎನ್ನುತ್ತಿಲ್ಲ. ಈ ವ್ಯವಸ್ಥೆಯ ದಟ್ಟ ದಾರಿದ್ರö್ಯದಲ್ಲಿ ಕಷ್ಟ ಅನುಭವಿಸುತ್ತಿರುವವರು ಸಾಮಾನ್ಯ ನಾಗರಿಕರು.
    ನವೆಂಬರ್ 2 ರಂದು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸ್ಮಾರ್ಟ್ಸಿಟಿ ಸಮನ್ವಯ ಸಮಿತಿ ಸಭೆ ನಡೆಯಿತು. ಈ ಸಭೆಯಲ್ಲಿ ಸಂಬAಧಿತ ಅಧಿಕಾರಿಗಳು, ಇಂಜಿನಿಯರ್‌ಗಳು ಭಾಗವಹಿಸಿದ್ದರು. ಪತ್ರಿಕೆಯಲ್ಲಿ ಪ್ರಕಟಗೊಳ್ಳುತ್ತಿರುವ ಅವೈಜ್ಞಾನಿಕ ಕಾಮಗಾರಿಗಳ ಬಗ್ಗೆ ಜಿಲ್ಲಾಧಿಕಾರಿಗಳು ಸಭೆಯಲ್ಲಿ ಪ್ರಸ್ತಾಪಿಸಿದ್ದಾರೆ. ಅಗತ್ಯ ಸುರಕ್ಷತಾ ಕ್ರಮ ಕೈಗೊಳ್ಳದ ಇಂಜಿನಿಯರ್‌ಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂಬ ಎಚ್ಚರಿಕೆ ನೀಡಿದ್ದಾರೆ. 
     ಸಾರ್ವಜನಿಕರಿಂದ ಪ್ರತಿನಿತ್ಯ 10 ದೂರವಾಣಿ ಕರೆಗಳು ಬರುತ್ತಿವೆ. ಅಪಘಾತಗಳ ಸಂಖ್ಯೆ ದಿನೆ ದಿನೇ ಹೆಚ್ಚುತ್ತಿವೆ. ಕಾಮಗಾರಿ ಪ್ರಗತಿಯಲ್ಲಿರುವ ಸ್ಥಳದಲ್ಲಿ ಸೂಚನಾ ಫಲಕಗಳನ್ನು ಪ್ರದರ್ಶಿಸದೇ ಇರುವುದು ಅಪಘಾತಗಳಿಗೆ ಕಾರಣವಾಗುತ್ತಿವೆ. ಮಳೆ ಬಂದಿರುವುದರಿAದ ರಸ್ತೆ ಯಾವುದು, ಹಳ್ಳ ಯಾವುದು ಎಂದೇ ತಿಳಿಯುತ್ತಿಲ್ಲ. ವಾಹನಗಳು ಕೆಸರಿನಲ್ಲಿ ಸಿಲುಕಿ ಸಂಚಾರಕ್ಕೆ ಅಡ್ಡಿಯಾಗುತ್ತಿದೆ ಎಂಬ ಮಾತುಗಳನ್ನು ಜಿಲ್ಲಾಧಿಕಾರಿಗಳೇ ವ್ಯಕ್ತಪಡಿಸಿದ್ದಾರೆಂದರೆ ಸ್ಮಾರ್ಟ್ಸಿಟಿ ಕಾಮಗಾರಿಗಳ ನೈಜತೆ ಯಾವ ಸ್ಥಿತಿಯಲ್ಲಿವೆ ಎಂಬುದನ್ನು ಊಹಿಸಬಹುದು. 
       531 ಕೋಟಿ ರೂ.ಗಳ ಕಾಮಗಾರಿ ಪ್ರಗತಿಯಲ್ಲಿರುವ (ಈಗಾಗಲೇ ಕೆಲವು ಮುಗಿದು ಹೋಗಿವೆ) ತುಮಕೂರು ಸ್ಮಾರ್ಟ್ ಸಿಟಿಗೆ ಧಾತರೆ ಇಲ್ಲ. ಮಹಾನಗರ ಪಾಲಿಕೆಗೆ ಪೂರ್ಣಾವಧಿ ಆಯುಕ್ತರಿಲ್ಲ. ಯಾವುದೇ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗದಂತಹ ಪರಿಸ್ಥಿತಿ ಬಂದೊದಗಿದ್ದು, ಸ್ಮಾರ್ಟ್ಸಿಟಿಯಾಗುತ್ತಿರುವ ತುಮಕೂರಿನಲ್ಲಿ ಈಗ ಎಲ್ಲವೂ ಅಯೋಮಯ ಎನ್ನುವಂತಾಗಿದೆ. ಎರಡಕ್ಕೂ ಐಎಎಸ್ ಅಧಿಕಾರಿಯಾದರೆ ಸಭೆಗಳನ್ನು ಸುಸೂತ್ರವಾಗಿ ನಡೆಸಿಕೊಂಡು ಕೋಆರ್ಡಿನೇಟ್ ಮಾಡಲು ಸಹಕಾರಿ. ಆದರೆ ಇಲ್ಲಿ ಅಂತಹ ಯಾವುದೇ ಲಕ್ಷಣಗಳು ಕಂಡುಬರುತ್ತಿಲ್ಲ. ಸ್ಮಾರ್ಟ್ಸಿಟಿ ಕಾಮಗಾರಿಗಳು ಯಾರ ಕೈಕೆಳಗೆ ನಡೆಯುತ್ತಿವೆ? ಇವುಗಳ ಉಸ್ತುವಾರಿ ಯಾರು? ಎಲ್ಲವೂ ಗೊಂದಲಮಯ. 
     22.9.2019 ರಂದು ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕರೂ ಆಗಿದ್ದ ಪಾಲಿಕೆಯ ಆಯುಕ್ತ ಟಿ.ಭೂಬಾಲನ್ ಅವರ ವರ್ಗಾವಣೆಯ ದಿಢೀರ್ ಆದೇಶ ಹೊರಬಿತ್ತು. ಈ ಆದೇಶ ಹೊರಬಿದ್ದದ್ದೆ ತಡ ಅದೇ ದಿನ ಭೂಬಾಲನ್ ಇಲ್ಲಿಂದ ಘಟಪ್ರಭಾ- ಮಲಪ್ರಭಾ ಯೋಜನೆಯ ವಿಶೇಷ ಜಿಲ್ಲಾಧಿಕಾರಿ ಹುದ್ದೆ ವಹಿಸಿಕೊಳ್ಳಲು ದೌಡಾಯಿಸಿದರು. ಅಂದಿನಿಂದ ತುಮಕೂರು ನಗರದಲ್ಲಿ 2 ಪ್ರಮುಖ ಹುದ್ದೆಗಳು ಖಾಲಿ ಇವೆ. ಪೂರ್ಣಾವಧಿ ಆಯುಕ್ತರು ಹಾಗೂ ಸ್ಮಾರ್ಟ್ಸಿಟಿ ವ್ಯವಸ್ಥಾಪಕ ನಿರ್ದೇಶಕರು ಇಲ್ಲದ ಕಾರಣ ನಗರ ಪಾಲಿಕೆಯಲ್ಲಿ ಸಭೆಗಳೆ ನಡೆಯುತ್ತಿಲ್ಲ.
 
     ಕೆಲವು ಸಮಸ್ಯೆಗಳನ್ನು ಹೇಳಿಕೊಳ್ಳಲು ಅನೇಕ ಸದಸ್ಯರು ತುದಿಗಾಲಿನಲ್ಲಿ ನಿಂತಿದ್ದಾರೆ. ಆದರೆ ಸಭೆಯೆ ನಡೆಯುತ್ತಿಲ್ಲ ಎಂದಾದರೆ ಈ ಸಮಸ್ಯೆಗಳನ್ನು ಹೇಳಿಕೊಳ್ಳುವುದಾದರೂ ಎಲ್ಲಿ? ಅಧಿಕೃತ ಸಭೆಗಳು ನಡೆಯದೆ ಎಲ್ಲೆಂದರಲ್ಲಿ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲು ಸಾಧ್ಯವೇ? ಬಾಕಿ ಉಳಿದಿರುವ ಹಲವು ಹತ್ತು ಸಮಸ್ಯೆಗಳಿಗೆ ಉತ್ತರ ಸಿಗುವುದು ಯಾವಾಗ ಎಂಬಂತಹ ಸ್ಥಿತಿ ಈಗ ನಿರ್ಮಾಣವಾಗಿದೆ. ಸ್ಮಾರ್ಟ್ಸಿಟಿಗೆ ಸಂಬಂಧಿಸಿದ ಸಭೆಗಳು ನಡೆಯುತ್ತಿಲ್ಲ ಎಂದಲ್ಲ. ಆದರೆ ಧಾತರೇ ಇಲ್ಲದ ಸಂದರ್ಭದಲ್ಲಿ ಸಭೆಗಳು ಎಷ್ಟರ ಮಟ್ಟಿಗೆ ಫಲಪ್ರದವಾಗುತ್ತವೆ ಎಂಬುದು ಮುಖ್ಯ. ಯಾರೋ ಹೇಳುತ್ತಾರೆ, ಇರುವವರು ಕೇಳಿಸಿಕೊಳ್ಳುತ್ತಾರೆ. ಸಭೆ ಬರ್ಕಾಸ್ತು ಆಗುತ್ತದೆ.
     ಸ್ಮಾರ್ಟ್ ಸಿಟಿ ಲಿಮಿಟೆಡ್ ಹಾಗೂ ನಗರ ಪಾಲಿಕೆ ಈ ಎರಡೂ ಆಡಳಿತಗಳು ಬೇರೆ ಬೇರೆಯೆ ಆಗಿರಬಹುದು. ಅನುದಾನವೂ ಪ್ರತ್ಯೇಕವಾಗಿರಬಹುದು. ಸ್ಮಾರ್ಟ್ ಸಿಟಿಗೆ ಅದರದ್ದೇ ಆದ ಒಂದು ಕಂಪನಿ ಆಧಾರಿತ ಆಡಳಿತಾತ್ಮಕ ವ್ಯವಸ್ಥೆ ಅನುಷ್ಠಾನ ದಲ್ಲಿರಬಹುದು. ಆದರೆ ಕಾಮಗಾರಿಗಳನ್ನು ಜಾರಿಗೆ ತರಬೇಕಾದರೆ ನಗರ ಪಾಲಿಕೆ ಹಾಗೂ ಸ್ಮಾರ್ಟ್ಸಿಟಿ ಈ ಎರಡರ ನಡುವೆ ಪರಸ್ಪರ ಸಮಾಲೋಚನೆ, ಚರ್ಚೆಯ ಅಗತ್ಯವಂತೂ ಇದ್ದೇ ಇದೆ. ಈವರೆಗೆ ತುಮಕೂರಿನಲ್ಲಿ ನಡೆದಿರುವ ಹಾಗೂ ನಡೆಯುತ್ತಿರುವ ಕಾಮಗಾರಿಗಳನ್ನು ಗಮನಿಸಿದರೆ ಇಲ್ಲಿ ಸಮಾಲೋಚನೆ ಮತ್ತು ಹೊಂದಾಣಿಕೆಯ ವಾತಾವರಣವೆ ಕಂಡು ಬರುತ್ತಿಲ್ಲ. ಎರಡೂ ಪ್ರತ್ಯೇಕ ಇಲಾಖೆಗಳಂತೆಯೇ ಕಾರ್ಯನಿರ್ವಹಿಸುತ್ತಿವೆ. 
       ನಗರದ 6 ವಾರ್ಡ್ಗಳಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿಗಳು ನಡೆಯುತ್ತಿವೆ. ಈ ಭಾಗದ ಕಾರ್ಪೋರೇಟರ್‌ಗಳಿಗೆ ಸ್ಮಾರ್ಟ್ ಸಿಟಿಯ ಸಂಪೂರ್ಣ ಚಿತ್ರಣ ಇರಬೇಕು. ಆದರೆ ಅದೆಷ್ಟೋ ಸದಸ್ಯರಿಗೆ ಈವರೆಗೂ ಮಾಹಿತಿ ಲಭಿಸಿಲ್ಲ. ಸಾರ್ವಜನಿಕರು ಕಾಮಗಾರಿಗಳ ಬಗ್ಗೆ ಪ್ರಶ್ನಿಸಿದರೆ ಸ್ಮಾರ್ಟ್ಸಿಟಿಯವರನ್ನು ಕೇಳಿ ಎನ್ನುವಂತಹ ಪರಿಸ್ಥಿತಿ ಇದೆ. ವಿವಿಧ ಕಾಮಗಾರಿಗಳ ಬಗ್ಗೆ ಮಾಹಿತಿ ವಿನಿಮಯದ ಕೊರತೆ ಎದ್ದು ಕಾಣುತ್ತಿದೆ. ಯಾವುದೇ ರಸ್ತೆ ಕಾಮಗಾರಿಯಾದರೂ ಅದು ಸ್ಮಾರ್ಟ್ಸಿಟಿಯಿಂದ ನಡೆದರೂ ಮಹಾನಗರ ಪಾಲಿಕೆಯ ಗಮನಕ್ಕೆ ಬರಲೇಬೇಕು.
 
     ಕೆಲವೊಂದು ವಿಷಯಗಳಲ್ಲಿ ಪಾಲಿಕೆಯ ಅನುಮತಿಯೂ ಬೇಕು. ಸ್ಮಾರ್ಟ್ಸಿಟಿ ಕಾಮಗಾರಿಗಳು ಪಾಲಿಕೆಯಿಂದ ಮುಕ್ತ ಹಾಗೂ ಪ್ರತ್ಯೇಕ ಎಂಬುದನ್ನು ಆಡಳಿತಾತ್ಮಕ ದೃಷ್ಟಿಯಿಂದ ಒಪ್ಪಬಹುದಾದರೂ ಮಾಹಿತಿ ವಿನಿಮಯ ಹಾಗೂ ಸಮಾಲೋಚನೆ ಇರಲೇಬೇಕಲ್ಲವೆ?ನಗರ ಪಾಲಿಕೆ ವ್ಯಾಪ್ತಿಯಲ್ಲಿ ಯಾವುದೇ ಕಾಮಗಾರಿ ನಡೆಯಬೇಕಾದರೂ ಪಾಲಿಕೆಯ ಎನ್‌ಓಸಿ ಪಡೆಯಬೇಕೆಂಬ ನಿಯಮವಿದೆ. ನಿಯಮ ನಿಬಂಧನೆಗಳಿಗೆ ಅನುಗುಣವಾಗಿ ಎನ್‌ಓಸಿ ನೀಡಲಾಗುತ್ತದೆ. ಇದಕ್ಕೆ ಸಂಬAಧಿಸಿದAತೆ ಪಾಲಿಕೆಯ ಎಂಜಿನಿಯರ್ ವಿಭಾಗವು ಇದೆಲ್ಲವನ್ನೂ ಪರಿಶೀಲಿಸಬೇಕು.
     ಲೋಪದೋಷಗಳಿದ್ದರೆ ಮೇಲಧಿಕಾರಿಗಳಿಗೆ ವರದಿ ಮಾಡಬೇಕು. ಅಂತಹ ದೋಷಗಳ ಬಗ್ಗೆ ಕ್ರಮ ಕೈಗೊಳ್ಳಬೇಕು. ಸಮಸ್ಯೆಗಳ ಬಗ್ಗೆ ಆಯಾ ವಾರ್ಡ್ ವ್ಯಾಪ್ತಿಯ ಸದಸ್ಯರ ಗಮನಕ್ಕೂ ತರಬೇಕು. ಆದರೆ ಅಧಿಕಾರಿಗಳು ಯಾರಿಗೆ ವರದಿ ಮಾಡುತ್ತಿದ್ದಾರೆ? ಎಂಜಿನಿಯರ್‌ಗಳ ಪಾತ್ರವೇನು? ನಿಯಮ ನಿಬಂಧನೆಗಳ ಪರಿಶೀಲನೆ ಹೇಗಾಗುತ್ತಿದೆ ಎಂಬ ಯಾವ ಮಾಹಿತಿಗಳೂ ಲಭ್ಯವಾಗುತ್ತಿಲ್ಲ. 
     ಸ್ಮಾರ್ಟ್ ಸಿಟಿ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಎಂಜಿನಿಯರ್‌ಗಳು ಏನು ಮಾಡುತ್ತಿದ್ದಾರೆ? ಪಾಲಿಕೆಯ ಎಂಜಿನಿಯರ್‌ಗಳಿದ್ದಾರೆ, ಸ್ಮಾರ್ಟ್ಸಿಟಿ ಕಾಮಗಾರಿಗಳಿಗಾಗಿಯೇ ಪ್ರತ್ಯೇಕ ಅಧಿಕಾರಿಗಳ ವ್ಯವಸ್ಥೆ ಇದೆ. ಇವರೆಲ್ಲ ಕುಳಿತು ಚರ್ಚಿಸಬೇಕು. ಸಮಸ್ಯೆಗಳನ್ನು ಸಂಬಂಧಪಟ್ಟವರ ಗಮನಕ್ಕೆ ತರಬೇಕು. ಎಂಜಿನಿಯರ್‌ಗಳು ಯಾರು? ಯಾವ ಕಾಮಗಾರಿಯನ್ನು ಯಾರು ನಿರ್ವಹಿಸುತ್ತಿದ್ದಾರೆ? ಈ ಮಾಹಿತಿ ಎಲ್ಲಿ ಸಿಗುತ್ತದೆ? ಇದಕ್ಕೆ ಯಾರ ಬಳಿಯೂ ಉತ್ತರವಿಲ್ಲ. ಅದಕ್ಕೆ ಕೆಲವರು ಹೇಳುತ್ತಿರುವುದು ಇದು ಸ್ಮಾರ್ಟ್ಸಿಟಿಯಲ್ಲ, ಡರ್ಟಿ ಸಿಟಿ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link