ಬೆಂಗಳೂರು
ಆಂಧ್ರಪ್ರದೇಶದಿಂದ ರಕ್ತಚಂದನ ಮರದ ತುಂಡುಗಳನ್ನು ಕಳ್ಳ ಸಾಗಾಣೆ ಮಾಡಿಕೊಂಡು ಬಂದು ಕಟ್ಟಿಗೇನಹಳ್ಳಿಯಲ್ಲಿ ಶೇಖರಿಸಿ ಬೇರೆಡೆ ಸಾಗಾಟ ಮಾಡುತ್ತಿದ್ದ ಮೂವರು ಸೇರಿ ನಾಲ್ವರನ್ನು ತಿರುಮಲ ಶೆಟ್ಟಿಹಳ್ಳಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆಂಧ್ರದ ಕಡಪ ಜಿಲ್ಲೆಯ ಶೇಖ್ಸಯೈದ್,ಪಟಾಣ್ ಬಾಬಾ ಫಕ್ರುದ್ದೀನ (22), ಪಟಾಣ್ ಹುಸ್ಮಾನ್ (27) ಹಾಗೂ ಹೊಸಕೋಟೆಯ ಕಟ್ಟಿಗೇನಹಳ್ಳಿಯ ಸಲ್ಮಾನ್ ಖಾನ್ (21) ಬಂಧಿತ ಆರೋಪಿಗಳಾಗಿದ್ದಾರೆ.ಬಂಧಿತರಿಂದ 62,400 ರೂ.ಗಳ ಮೌಲ್ಯದ 52 ಕೆಜಿ ರಕ್ತಚಂದನ ಹಾಗೂ ಟೆಂಪೊವನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ.
ಆರೋಪಿಗಳು ಆಂಧ್ರದಿಂದ ರಕ್ತಚಂದನ ಮರದ ತುಂಡುಗಳನ್ನು ಸಾಗಿಸಿಕೊಂಡು ಬಂದು ಕಟ್ಟಿಗೇನಹಳ್ಳಿಯಲ್ಲಿ ಶೇಖರಿಸಿ, ಟೆಂಪೊದಲ್ಲಿ ಸಾಗಿಸುವ ವೇಳೆ ಮಾಲೂರಿನ ಕಡೆಗ ಹೋಗುವ ಸನ್ರೈಸ್ ಶಾಲೆಯ ಬಳಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಆರೋಪಿಗಳನ್ನು ಬಂಧಿಸಿ ರಕ್ತಚಂಜದನ ಮರದ ತುಂಡುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಗ್ರಾಮಾತರ ಎಸ್ಪಿ ಡಾ. ರಾಮ್ನಿವಾಸ್ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
