ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಬೇರೆಡೆಗೆ ವರ್ಗಾವಣೆ

ಬೆಂಗಳೂರು:

       ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಬಿ.ವಿ.ಪಾಟೀಲ್‍ರನ್ನು ಬೇರೆಡೆಗೆ ವರ್ಗಾವಣೆಯಾಗಿದೆ. ಅವರ ಜಾಗಕ್ಕೆ ಜಿಲ್ಲಾ ನ್ಯಾಯಾಧೀಶ ರಾಮಚಂದ್ರ ಡಿ ಹುದ್ಧರ್ ಆಯ್ಕೆಯಾಗಿದ್ದಾರೆ.

        ಶಾಸಕರು ಹಾಗೂ ಸಂಸದರುಗಳ ವಿರುದ್ಧ ದಾಖಲಾಗುವ ಪ್ರಕರಣಗಳಿಗಾಗಿ ಈ ನ್ಯಾಯಾಲಯ ಇದ್ದು, ರಾಜಕಾರಣಿಗಳಿಗೆ ಸಂಬಂಧಪಟ್ಟ ವಿಚಾರಣೆಗಳು ಇಲ್ಲಿ ನಡೆಯುತ್ತವೆ. ಇನ್ನು ಈಗ ಇದ್ದ ಬಿ.ವಿ.ಪಾಟೀಲ್ ಜಿಲ್ಲಾ ನ್ಯಾಯಾಧೀಶರು,ಓಓಡಿ, ರಿಜಿಸ್ಟ್ರಾರ್(ಮೂಲಸೌಕರ್ಯ ಹಾಗು ನಿರ್ವಹಣೆ)ಸ್ಥಾನಕ್ಕೆ ವರ್ಗಾವಣೆಗೊಂಡಿದ್ದಾರೆ.

      ಇನ್ನು ಈಗ ಆಯ್ಕೆಯಾದ ರಾಮಚಂದ್ರ ಡಿ ಹುದ್ಧರ್,ಜಿಲ್ಲಾ ನ್ಯಾಯಾಧೀಶರು,ಓಓಡಿ,ರಿಜಿಸ್ಟ್ರಾರ್(ಮೂಲಸೌಕರ್ಯ ಹಾಗು ನಿರ್ವಹಣೆ)ಆಗಿ ಇಲ್ಲಿಯವರೆಗೆ ಕಾರ್ಯ ನಿರ್ವಹಿಸುತ್ತಿದ್ದರು.ಇನ್ನು ಯಡಿಯೂರಪ್ಪ, ಜನಾರ್ದನ ರೆಡ್ಡಿ, ಕುಮಾರಸ್ವಾಮಿ, ಲಕ್ಷೀ ಹೆಬ್ಬಾಳ್ಕರ್, ಪ್ರತಾಪ್ ಸಿಂಹ ಹೀಗೆ ಹಲವಾರು ಕೇಸ್‍ಗಳ ವಿಚಾರಣೆಯನ್ನು ಬಿ. ವಿ ಪಾಟೀಲ್ ನಡೆಸಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap