ಮತದಾನಕ್ಕಾಗಿ ವಿಷೇಶ ರೈಲಿನ ವ್ಯವಸ್ಥೆ …!!

ಕುಂದಾಪುರ:

     ಚುನಾವಣೆ  ಹಿನ್ನೆಲೆಯಲ್ಲಿ  ಬೆಂಗಳೂರಿನಿಂದ ಮಂಗಳೂರು ಮತ್ತಿತರ ಕಡೆ ತೆರಳುವ  ಪ್ರಯಾಣಿಕರಿಗೆ  ವಿಶೇಷ ರೈಲಿನ ವ್ಯವಸ್ಥೆ  ಮಾಡಲಾಗಿದೆ ಎಂದು ಆಯೋಗ ತಿಳಿಸಿದೆ

      ಬೆಂಗಳೂರಿನಿಂದ ತೆರಳುವ ಖಾಸಗಿ ಬಸ್‌ಗಳು ವಿಪರೀತ ದರ ಏರಿಸಿರುವ ಹಿನ್ನೆಲೆಯಲ್ಲಿ  ಬೇರೆ ಊರಿನಲ್ಲಿರುವ ಮತದಾರರು ಮತ ಚಲಾಯಿಸಲು ಅನುವಾಗುವಂತೆ ಸಾರಿಗೆ ವ್ಯವಸ್ಥೆ ಕುರಿತು ಗಮನ ಹರಿಸುವಂತೆ ಚುನಾವಣ ಆಯೋಗ ಕೆಎಎಸ್‌ಆರ್‌ಟಿಸಿ ಮತ್ತು ರೈಲ್ವೇ ಇಲಾಖೆಗೆ ಸೂಚನೆ ನೀಡಿತ್ತು.

       ಈಗ ನೈಋತ್ಯ ರೈಲ್ವೇ ವಲಯದಿಂದ ಬೆಂಗಳೂರಿಂದ ಮಂಗಳೂರು, ಉಡುಪಿ, ಕಾರವಾರಕ್ಕೆ ತತ್ಕಾಲ್‌ ಸ್ಪೆಷಲ್‌ ಎಂಬ ಹೆಸರಿನ ರೈಲು ಹೊರಡಿಸಲು ಸೂಚನೆ ನೀಡಲಾಗಿದೆ.

      ಈ ರೈಲು  ಎ. 17ರಂದು ಬೆಂಗಳೂರಿನಿಂದ ರಾತ್ರಿ 10 ಗಂಟೆಗೆ ಯಶವಂತಪುರದಿಂದ ಹೊರಡಲಿದೆ. ಕಾರವಾರಕ್ಕೆ ಎ. 18ರಂದು ಸಂಜೆ 3.30ಗೆ ತಲುಪಲಿದೆ. ಕಾರವಾರದಿಂದ ಸಂಜೆ 6 ಗಂಟೆಗೆ ಮರುಪ್ರಯಾಣ ಬೆಳೆಸಿ ಬೆಂಗಳೂರಿಗೆ ಶುಕ್ರವಾರ 10.35ಕ್ಕೆ ತಲುಪಲಿದೆ.

Recent Articles

spot_img

Related Stories

Share via
Copy link
Powered by Social Snap