ಶಿಗ್ಗಾವಿ :
ವಿಶೇಷ ವರದಿ : ಬಸವರಾಜ ವೀ ಹಡಪದ
ಇದೆ ಮೇ 29ರಂದು ನಡೆಯಲಿರುವ ಪುರಸಭೆ ಚುನಾವಣೆಯಲ್ಲಿ ಕಾಂಗ್ರೇಸ್ ಮತ್ತು ಬಿ.ಜೆ.ಪಿ ಪಕ್ಷಗಳ ಆಪ್ತರೆಂದೆ ಗುರುತಿಸಿಕೊಂಡಿದ್ದ ಕೆಲ ಪ್ರಭಾವಿ ನಿಷ್ಟಾವಂತ ಕಾರ್ಯಕರ್ತರಿಗೆ ಟಿಕೆಟ್ ಆಕಾಂಕ್ಷಿಗಳಾಗಿದ್ದರೂ ಟಿಕೇಟ್ ಸಿಗದಿರುವುದಕ್ಕೆ ಟಿಕೆಟ್ ವಂಚಿತರಾದ ವ್ಯಕ್ತಿಗಳ ಮೇಲೆ ವರಿಷ್ಟರ ನಡೆ ಏನು ? ಎಂಬುದು ತೀರ್ವ ಕುತೂಹಲ ಕೆರಳಿಸಿದೆ.
ಪುರಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಟಿಕೆಟ್ ವಂಚಿತರಾದವರು ಕೇವಲ ಸಂಘಟನೆಗೆ ನಮ್ಮನು ಬಳಸಿಕೊಂಡು ಚುನಾವಣಾ ವೇಳೆಯಲ್ಲಿ ನಿಷ್ಟಾವಂತ ಕಾರ್ಯಕರ್ತರನ್ನ ಕಡೆಗಣಿಸಿರುವುದು ಜೆ.ಡಿ.ಎಸ್ ಪಕ್ಷ ಹೊರತಾಗಿ ಬಿ.ಜೆ.ಪಿ ಮತ್ತು ಕಾಂಗ್ರೇಸ್ ಪಕ್ಷದ ಪುರಸಭೆ ಟಿಕೆಟ್ ಆಕಾಂಕ್ಷಿಗಳಾಗಿದ್ದ ಅಭ್ಯರ್ಥಿಗಳಲ್ಲಿ ಅಸಮಾಧಾನದ ಹೊಗೆ ಬುಗಿಲೆದ್ದಿದೆ.
ಒಂದೆಡೆ ಭಾ.ಜ.ಪ ಪುರಸಭೆ ಅಭ್ಯರ್ಥಿಗಳ ಆಯ್ಕೆ ಸಮಿತಿಯ ವರಿಷ್ಟರಾದ ದೇವಣ್ಣ ಚಾಕಲಬ್ಬಿ, ಗಂಗಣ್ಣ ಸಾತಣ್ಣವರ ಹಾಗೂ ಜಯಣ್ಣ ಹೆಸರೂರ, ಶಿವಾನಂದ ಮ್ಯಾಗೇರಿ ಸೇರಿದಂತೆ ಹಲವರು ಬಿ.ಜೆ.ಪಿ ಟಿಕೆಟ್ ಆಕಾಂಕ್ಷಿಗಳಿಗೆ ಕನಿಷ್ಠ 5 ಲಕ್ಷ ಹಣವಿದ್ದರೆ ಮಾತ್ರ ಸ್ಪರ್ಧೆಗೆ ಮುಂದೆ ಬನ್ನಿ ಎಂದು 13ನೇ ವಾರ್ಡ್ನ ಬಿ.ಜೆ.ಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಮಲ್ಲಮ್ಮ ಸೋಮನಕಟ್ಟಿ ಅವರಿಗೆ ಹಾಗೂ ಕೆಲ ಟಿಕೆಟ್ ಆಕಾಂಕ್ಷಿಗಳಿಗೆ ಹೇಳಿರುವುದು ಭಾ.ಜ.ಪ ಆಕಾಂಕ್ಷಿಗಳನ್ನ ಕೆರಳಿಸಿದೆ, ಅಂದರೆ ಹಣವಿದ್ದವರು ಮಾತ್ರ ಚುನಾವಣೆಯಲ್ಲಿ ಸ್ಪರ್ಧಿಸಬೇಕೆಂಬ ನಿಯಮವಿದೆಯೇ ಎಂಬ ಪ್ರಶ್ನೆಗೆ ದೇವಣ್ಣ ಚಾಕಲಬ್ಬಿ ಹಾಗೂ ಇತರರುಗಳೇ ಉತ್ತರ ನಿಡಬೇಕಿದೆ.
22ನೇ ವಾರ್ಡ್ಗೆ ಸಂಭಂದಿಸಿದಂತೆ ಹಾಲಿ ಅಧ್ಯಕ್ಷರಾಗಿರುವ ಶಿವಪ್ರಸಾದ ಸುರಗಿಮಠ ಅವರಿಗೆ ಬಿ.ಜೆ.ಪಿ ಟಿಕೆಟ್ ತಪ್ಪಿ ಹಾಲಿ ಉಪಾಧ್ಯಕ್ಷ ಪರಶುರಾಮ ಸೊನ್ನದ ಅವರಿಗೆ ಸಿಕ್ಕಿದೆ ಆದರೆ ಟಿಕೆಟ್ ವಂಚಿತರಾದ ಸುರಗಿಮಠ ನಡೆ ಯಾವ ಕಡೆ ಎಂಬುದೆ ನಿಗೂಡವಾಗಿದೆ.
ಇನ್ನೊಂದೆಡೆ 21ನೇ ವಾರ್ಡ್ನ ಭಾ.ಜ.ಪ ಟಿಕೆಟ್ ಆಕಾಂಕ್ಷಿಯಾಗಿದ್ದ ಉಮೇಶ ಗೌಳಿ, ಪ್ರಭುಗೌಡ ಕರೆಗೌಡ್ರ, ವಿಜಯ್ ಬುಳ್ಳಕ್ಕನವರ ಅವರಿಗೆ ಟಿಕೆಟ್ ತಪ್ಪಿ ಸಿಧ್ಧಾರ್ಥಗೌಡ ಪಾಟೀಲಗೆ ಸಿಕ್ಕಿದೆ ಇಲ್ಲಿಯೂ ಟಿಕೆಟ್ ವಂಚಿತರ ನಡೆ ನಿಗೂಢವಾಗಿದೆ,
ಇನ್ನು 1ನೇ ವಾರ್ಡನ ನಿಷ್ಟಾವಂತ ಕಾರ್ಯಕರ್ತರು, ಪ್ರಬಲ ಟಿಕೆಟ್ ಆಕಾಂಕ್ಷಿಗಳಾದ ಆನಂದ ದಾನಿ, ವೀಣಾ ಕುರ್ಡೆಕರ್ ಅವರಿಗೆ ಟಿಕೆಟ್ ಕೈ ತಪ್ಪಿ ಈಗಾಗಲೇ 21 ನೇ ವಾರ್ಡಿನಿಂದ ಸ್ಪರ್ಧಿಸಿ ಆಧಿಕಾರ ಅನುಭವಿಸಿದ್ದ ಹಾಲಿ ಸದಸ್ಯೆ ರೂಪ ಬನ್ನಿಕೋಪ್ಪ ಅವರಿಗೆ ನೀಡಿರುವುದರಿಂದ ಸ್ಥಳೀಯ ವಾರ್ಡಿನ ಜನರನ್ನು ಕೆರಳಿಸಿದೆ.
ಟಿಕೆಟ್ ಆಯ್ಕೆ ಸಮೀತಿಯವರ ಮೇಲೆ ಬೇಸರ : ಟಿಕೆಟ್ ಆಕಾಂಕ್ಷಿಗಳಾಗಿದ್ದ ಅಭ್ಯರ್ಥಿಗಳೆಲ್ಲರೂ ಆಯ್ಕೆ ಸಮೀತಿಯ ಸದಸ್ಯರನ್ನೆ ದೂಶಿಸುತ್ತಿದ್ದಾರೆ, ನಾವು ಕಳೆದ 15-20 ವರ್ಷಗಳಿಂದ ಪಕ್ಷದ ನಿಷ್ಟಾವಂತ ಕಾರ್ಯಕರ್ತರಾಗಿದ್ದೇವೆ ಆದರೆ ಆಯ್ಕೆ ಸಮೀತಿಯವರು ನಮ್ಮನ್ನು ಪರಿಗಣಿಸದೇ ಇರುವುದು ಬೇಸರ ತರಿಸಿದೆ ಎಂದು ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ಭಾಜಪ ಆಯ್ಕೆ ಸಮೀತಿಯವರು ಸ್ಥಳೀಯ ವ್ಯಕ್ತಿಗಳಲ್ಲ : ಭಾಜಪ ಟಿಕೆಟ್ ಆಯ್ಕೆ ಸಮೀತಿಯ ಸದಸ್ಯರಲ್ಲಿ ದೇವಣ್ಣ ಚಾಕಲಬ್ಬಿ, ಶಿವಾನಂದ ಮ್ಯಾಗೇರಿ ಅವರುಗಳು ಸ್ಥಳೀಯ ವ್ಯಕ್ತಿಗಳಲ್ಲ, ವಾರ್ಡಗಳಲ್ಲಿ ಬಂದು ನಿಜವಾಗಿ ಅವರು ಜನತೆಯ ಹೇಳಿಕೆಗಳನ್ನ ಕಲೆ ಹಾಕಿದ್ದರೇ ನಾನೇ ಆಯ್ಕೆಯಾಗುತ್ತಿದ್ದೆ ಹಾಗೆ ಮಾಡದೆ ಅವರಿಗೆ ಬೇಕಾದ ವ್ಯಕ್ತಿಗಳಿಗೆ ಟಿಕೆಟ್ ನೀಡಿದ್ದಾರೆ ಎಂದು ಬಂಡಾಯದ ಬಾವುಟ ಹಾರಿಸಲು ರೆಡಿಯಾಗಿದ್ದಾರೆ.
ಒಟ್ಟಾರೆ ಪಟ್ಟಣದ 23 ವಾರ್ಡಗಳಲ್ಲಿ ಟಿಕೆಟ್ ವಂಚಿತರ ಅಸಮಾಧಾನ ಸ್ಪೋಟಗೊಂಡಿದ್ದು ಇದೇ ಮೇ 20 ಕ್ಕೆ ನಾಮಪತ್ರಗಳನ್ನು ಹಿಂಪಡಯಲು ಕೊನೆಯ ದಿನವಾಗಿರುವುದರಿಂದ ಯಾರ್ಯಾರು ಕಣದಲ್ಲಿರುವರೋ ಅಥವಾ ಭಾಜಪದ ಶಾಸಕ ಬಸವರಾಜ ಬೊಮ್ಮಾಯಿಯವರು ಹಾಗೂ ಕಾಂಗ್ರೇಸ್ನ ಮಾಜಿ ಶಾಸಕ ಅಜ್ಜಂಪೀರ್ ಖಾದ್ರಿಯವರು ಮದ್ಯ ಪ್ರವೇಶಿಸಿ ಬಿಸಿಯನ್ನು ತಣ್ಣಗಾಗಿಸಿ ಚುನಾವಣೆ ಎದುರಿಸಿ ಜಯಶಾಲಿಯಾಗುವರೋ ಎಂಬುದು ಇದೇ ತಿಂಗಳು ಮೇ 31 ಕ್ಕೆ ತೀರ್ಮಾನವಾಗಬೇಕಿದೆ.ಚುನಾವಣಾ ನಿಯಮ ಪಾಲಿಸದ ಅಭ್ಯರ್ಥಿ : 14 ನೇ ವಾರ್ಡಿನ ಕಾಂಗ್ರೇಸ್ ಅಭ್ಯರ್ಥಿ ಅತ್ತಾಉಲ್ಲಾಖಾನ್ ಖಾಜೆಖಾನವರ ತಮ್ಮ ಘೋಷಣಾ ಪತ್ರದಲ್ಲಿ ಸರಿಯಾದ ಮಾಹಿತಿ ನೀಡಿಲ್ಲ ಜೊತೆಗೆ ರಾಜ್ಯ ಚುನಾವಣಾ ಆಯೋಗ ಹೊರಡಿಸಿದ ಆದೇಶದ ಪ್ರಕಾರ ಅತ್ತಾಉಲ್ಲಾಖಾನ ಅವರ ಮೇಲಿರುವ ಪ್ರಕರಣಗಳ ಕುರಿತು ನಮೂದಿಸಿರುವುದಿಲ್ಲವೆಂದು ಅದೇ ವಾರ್ಡಿನ ಪಕ್ಷೇತ್ತರ ಅಭ್ಯರ್ಥಿ ಸುಲೇಮಾನ್ ಬಾದಶಾ ತರ್ಲಘಟ್ಟ ಅವರು ಚುನಾವಣಾ ರಿಟರ್ನಿಂಗ್ ಅಧಿಕಾರಿಗಳಿಗೆ ತಕರಾರು ಅರ್ಜಿ ಸಲ್ಲಿಸಿ ಭಾರತೀಯ ದಂಡ ಸಂಹಿತೆ ಅಪರಾದ ಕಲಂ 326, 353, 506 ರ ಅಡಿ ಕಾಂಗ್ರೇಸ್ ಪಕ್ಷದ ಅಭ್ಯರ್ಥಿಯ ನಾಮಪತ್ರ ತಿರಸ್ಕರಿಸಿ ಸೂಕ್ತ ಕಾನೂನು ಕ್ರಮಕ್ಕೆ ಚುನಾವಣಾ ರಿಟರ್ನಿಂಗ್ ಅಧಿಕಾರಿಗಳಾದ ಶಿವಕುಮಾರ ಹಾಗೂ ಬಿಲಾಲ್ ಅವರುಗಳಿಗೆ ಲಿಖಿತ ಮನವಿ ಮಾಡಿದ್ದಾರೆ, ಇದಕ್ಕೆ ಪ್ರತಿಕ್ರಿಯಿಸಿರುವ ರಿಟರ್ನಿಂಗ್ ಅಧಿಕಾರಿಗಳು, ಅತ್ತಾವುಲ್ಲಾಖಾನ್ ಅವರ ನಾಮಪತ್ರ ಅಂಗೀಕಾರ ಮಾಡಲಾಗಿದೆ ಎಸಿ ಮತ್ತು ತಹಸೀಲ್ದಾರರ ನಿರ್ದೇಶನದ ಮೇರೆಗೆ ಮುಂದಿನ ಕ್ರಮದ ಕುರಿತು ತಿಳಿಸಲಾಗುವುದು ಎಂದಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
