ಹುಳಿಯಾರು
ಹುಳಿಯಾರು ಹೋಬಳಿಯ ತಿಮ್ಲಾಪುರ ಗ್ರಾಮ ಪಂಚಾಯ್ತಿಯಿಂದ ಶಾಲೆಗಳಿಗೆ ಕ್ರೀಡಾ ಸಾಮಗ್ರಿಗಳನ್ನು ವಿತರಿಸಲಾಯಿತು.
ಗ್ರಾಪಂ ಅಧ್ಯಕ್ಷ ಎನ್.ಬಿ.ದೇವರಾಜು ಅವರು ಕ್ರೀಡಾ ಸಾಮಗ್ರಿಗಳನ್ನು ವಿತರಿಸಿ ಮಾತನಾಡಿ, 13 ಮತ್ತು 14 ನೆ ಹಣಕಾಸು ಯೋಜನೆಯಲ್ಲಿ ಬಿಡುಗಡೆಯಾದ ಅನುದಾನದಲ್ಲಿ ಕ್ರೀಡಾ ಸಾಮಗ್ರಿಗಳನ್ನು ತಂದಿದ್ದು, ಎಲ್ಲ ಶಾಲೆ ಮಕ್ಕಳು ಇದರ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.
ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ವೈಯಕ್ತಿಕ ಕಾಮಗಾರಿಗಳನ್ನು ಅಂದರೆ ದನದ ಕೊಟ್ಟಿಗೆ, ಕೃಷಿ ಹೊಂಡ, ಉದಿ-ಬದು ನಿರ್ಮಿಸಿಕೊಳ್ಳಲು ಅವಕಾಶವಿದ್ದು, ಕೊರೊನಾದ ಆರ್ಥಿಕ ಸಂಕಷ್ಟ ಎದುರಿಸಲು ಉದ್ಯೋಗಖಾತ್ರಿ ಯೋಜನೆ ಬಳಸಿಕೊಳ್ಳುವಂತೆ ಹೇಳಿದರು.
ತಿಮ್ಮಲಾಪುರ ಗ್ರಾಮ ಪಂಚಾಯತಿಗೆ ಸೇರಿದ ತಿಮ್ಲಾಪುರ, ಹೊಸಳ್ಳಿ, ಹೊಸಳ್ಳಿ ಪಾಳ್ಯ ಸೀಗೆಬಾಗಿ, ತೊರೆಮನೆ, ನಂದಿಹಳ್ಳಿ, ತೊರೆಸೂರಗೊಂಡನಹಳ್ಳಿ, ಸೈಯದ್ ಪಾಳ್ಯ ಶಾಲೆಗಳ ಶಿಕ್ಷಕರು ಕ್ರೀಡಾ ಸಾಮಗ್ರಿಗಳನ್ನು ಪಡೆದುಕೊಂಡರು.ಈ ಸಂದರ್ಭದಲ್ಲಿ ಗ್ರಾಪಂ ಉಪಾಧ್ಯಕ್ಷ ಮೋಹನ್ಕುಮಾರ್, ಸದಸ್ಯರುಗಳಾದ ಟಿ.ಕೆ.ಶಂಕರಪ್ಪ, ಸುಂದರೇಶ್, ಚಂದ್ರಕಲಾ, ದಯಾನಂದ, ಮೂರ್ತಿ, ಗಾಯತ್ರಿದೇವಿ, ಮಾಜಿ ಅಧ್ಯಕ್ಷ ಕೃಷ್ಣಮೂರ್ತಿ. ಪಿಡಿಓ ಎಸ್.ನಾಗರಾಜ್, ಉಮಾದೇವಿ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
