ಚಳ್ಳಕೆರೆ
ವಿಶ್ವಮಟ್ಟದಲ್ಲಿ ಖ್ಯಾತಿಯಾಗಿರುವ ಕ್ರಿಕೆಟ್ ಪಂದ್ಯಾ ಇಂದು ನಗರ ಹಾಗೂ ಗ್ರಾಮಾಂತರ ಪ್ರದೇಶಗಳ ಯುವ ಜನರ ಮೆಚ್ಚಿನ ಆಟವಾಗಿದೆ. ಪ್ರತಿಯೊಬ್ಬ ಯುವಕನಲ್ಲೂ ಸಹ ಇಂದು ಕ್ರಿಕೆಟ್ ಆಟವಾಡಲೇಬೇಕೆಂಬ ಹಂಬಲ ಹುಟ್ಟಿಕೊಳ್ಳುತ್ತಿದೆ. ಕ್ರಿಕೆಟ್ ಆಟವಾಡುವ ಯುವಕರು ಉತ್ತಮ ಆಟ ಪ್ರದರ್ಶಿಸುವ ಮೂಲಕ ತಮ್ಮಲ್ಲಿರುವ ಸಾಮಥ್ರ್ಯವನ್ನು ಪ್ರದರ್ಶಿಸಬೇಕು. ಯಾವುದೇ ಹಂತದಲ್ಲೂ ಕ್ರೀಡೆಯ ನಿಯಮಗಳನ್ನು ಉಲ್ಲಂಘಿಸಬಾರದು ಎಂದು ಪಿಎಸ್ಐ ಎನ್.ಗುಡ್ಡಪ್ಪ ತಿಳಿಸಿದರು.
ಅವರು, ಶುಕ್ರವಾರ ಇಲ್ಲಿನ ಮದಕರಿನಗರದ ಮುರುಗನ್ ಮೀಲ್ ಹಿಂಭಾಗದಲ್ಲಿ ರಾಜು, ಗಂಡುಗಲಿ ಮತ್ತು ಸೂಪರ್ ಬಾಯ್ಸ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಮೂರು ದಿನಗಳ ಆಹ್ವಾನಿಯ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಿಮೆಂಟನ್ನು ಉದ್ಘಾಟಿಸಿ ಮಾತನಾಡಿದರು. ಕ್ರಿಕೆಟ್ ಆಟವಾಡುವುದರಿಂದ ಶರೀರಕ್ಕೆ ಉತ್ತಮ ವ್ಯಾಯಾಮವಾಗುವುದಲ್ಲದೆ ಆರೋಗ್ಯವೂ ಸಹ ವೃದ್ದಿಯಾಗುವುದು. ಕ್ರಿಕೆಟ್ ಆಟದ ಎಲ್ಲಾ ಆಯಾಮಗಳ ಬಗ್ಗೆ ಆಟಗಾರ ಅರಿತು ಆಟವಾಡಬೇಕು. ಕ್ರಿಕೆಟ್ ಆಡುವುದರಿಂದ ಉತ್ತಮ ಬದುಕನ್ನು ಸಹ ರೂಪಿಸಿಕೊಳ್ಳುವ ಅವಕಾಶಗಳು ಇವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರಾಜ್ಯ ಅಥವಾ ರಾಷ್ಟ್ರ ಮಟ್ಟದಲ್ಲಿ ಪ್ರಶಸ್ತಿ ಪಡೆದ ಆಟಗಾರರಿಗೆ ಯಾವುದೇ ನಿಯಮಗಳಿಲ್ಲದೆ ಸರ್ಕಾರಿ ನೌಕರಿ ಪಡೆಯುವ ಅವಕಾಶವಿದ್ದು, ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬ ಆಟಗಾರರು ಕ್ರಿಕೆಟ್ನ ಹಿರಿಮೆಯನ್ನು ಎತ್ತಿ ಹಿಡಿಯುವ ಕಾರ್ಯದಲ್ಲಿ ಮುಂದಾಗಬೇಕು ಎಂದರು.
ನಗರಸಭಾ ಸದಸ್ಯ, ಕ್ರೀಡೆಗಳ ಪ್ರೋತ್ಸಾಹಕ ಬಿ.ಟಿ.ರಮೇಶ್ಗೌಡ ಮಾತನಾಡಿ, ಕಳೆದ ಹಲವಾರು ವರ್ಷಗಳಿಂದ ಮದಕರಿ ನಗರದ ಯುವಕರು ಕ್ರಿಕೆಟ್ ಟೂರ್ನಿಮೆಂಟ್ ಹಮ್ಮಿಕೊಳ್ಳುವ ಮೂಲಕ ಕ್ರಿಕೆಟ್ ಆಟಕ್ಕೆ ಹೆಚ್ಚಿನ ಪ್ರೋತ್ಸಾವನ್ನು ನೀಡುತ್ತಿದ್ದಾರೆ. ಕ್ರಿಕೆಟ್ ಆಟದಿಂದ ಎಲ್ಲಾ ಆಟಗಾರರಲ್ಲೂ ವಿಶ್ವಾಸ ಹಾಗೂ ಸ್ನೇಹ ಬೆಳೆಯುತ್ತದೆ. ಆಟಗಾರರು ಸಹ ತಮ್ಮ ಪ್ರತಿಭೆಯನ್ನು ಕ್ರಿಕೆಟ್ ಆಟದಲ್ಲಿ ಪ್ರದರ್ಶಿಸಬೇಕಿದೆ. ಬೇರೆ ಎಲ್ಲಾ ಕ್ರೀಡೆಗಳಿಗಿಂತ ಈ ಕ್ರೀಡೆಗೆ ಹೆಚ್ಚು ಪ್ರೋತ್ಸಾಹ ಹಾಗೂ ಅವಕಾಶ ಹೆಚ್ಚಿದ್ದು. ಚಳ್ಳಕೆರೆ ನಗರದ ಅನೇಕ ಕ್ರೀಡಾಪಟುಗಳು ಇಂದು ರಾಷ್ಟ್ರೀಯ ಮನ್ನಣೆ ಪಡೆದಿದ್ದಾರೆ.
ಇಲ್ಲಿನ ಕ್ರೀಡಾಪಟುಗಳು ಉಜ್ವಲ ಭವಿಷ್ಯಕ್ಕಾಗಿ ಕ್ಷೇತ್ರದ ಅಭಿವೃದ್ಧಿ ಹರಿಕಾರರಾದ ಶಾಸಕ ಟಿ.ರಘುಮೂರ್ತಿ 6.67 ಕೋಟಿ ವೆಚ್ಚದಲ್ಲಿ ಪಾವಗಡ ರಸ್ತೆಯಲ್ಲಿ ಆಧುನಿಕ ಕ್ರೀಡಾಂಗಣ ನಿರ್ಮಾಣಕ್ಕೆ ಈಗಾಗಲೇ ಚಾಲನೆ ನೀಡಿದ್ದಾರೆ. ನಗರದ ಎಲ್ಳಾ ಆಟಗಾರರು ಪ್ರತಿಯೊಂದು ಆಟವನ್ನು ಪ್ರೋತ್ಸಾಹಿಸಬೇಕು. ಉತ್ತಮ ಆಟಗಾರರಾಗಿ ರೂಪುಗೊಳ್ಳಬೇಕೆಂದು ಮನವಿ ಮಾಡಿದರು.
ಕಾರ್ಯಕ್ರಮದ ವ್ಯವಸ್ಥಾಪಕರಾದ ತಿಪ್ಪೇಸ್ವಾಮಿ(ಕಾಳಿ), ಪ್ರಸನ್ನ ಮಾತನಾಡಿ, ಪ್ರಸ್ತುತ ಈ ಪಂದ್ಯಾವಳಿಯಲ್ಲಿ ಚಳ್ಳಕೆರೆ ನಗರದ ಕ್ರೀಡಾಪಟುಗಳು ಮಾತ್ರ ಭಾಗವಹಿಸಲು ಅವಕಾಶವಿದ್ದು, ಈಗಾಗಲೇ 20 ತಂಡಗಳು ನೊಂದಾವಣೆಯಾಗಿವೆ. ಡಿ.16ರಂದು ಪಂದ್ಯಾವಳಿಯ ಸಮಾರೋಪ ಸಮಾರಂಭ ನಡೆಯಲಿದ್ದು, ಪ್ರಥಮ ಸ್ಥಾನ ಪಡೆದ ಸ್ಥಾನಕ್ಕೆ 15 ಸಾವಿರ ನಗದು, ಪಾರಿತೋಷಕರ, ದ್ವೀತಿಯ ಸ್ಥಾನ ಪಡೆದ ತಂಡಕ್ಕೆ 10 ಸಾವಿರ ನಗದು, ಪಾರಿತೋಷಕ ನೀಡಲಾಗುವುದು ಎಂದರು.
ನಗರಸಭಾ ಸದಸ್ಯ ಹೊಯ್ಸಳ ಗೋವಿಂದ, ವ್ಯವಸ್ಥಾಪಕಾರ ಸುನೀಲ್, ಮಾರುತಿ, ವಿನೋದ್, ಕಭೀರ, ರಘು, ಮಂಜುನಾಥ, ಆದರ್ಶ, ಆರ್.ಪ್ರಸನ್ನ, ಡಿ.ಎಸ್.ರಾಘವೇಂದ್ರಚಾರ್ ಮುಂತಾದವರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
