ಜಗಳೂರು:

ನಾವು ಗಳಿಸಿದ ಜ್ಞಾನದ ಸಂಪತ್ತನ್ನು ಮಕ್ಕಳಿಗೆ ಉಣ ಬಡಿಸುವ ಮೂಲಕ ತಮ್ಮ ಕರ್ತವ್ಯದ ಜೊತೆಗೆ ಪ್ರೌಢ ಶಾಲಾ ಮಕ್ಕಳಿಗೆ ಕನಸು ಬಿತ್ತುವ ಕೆಲಸ ,ರಾಷ್ಟ್ರ ಕಟ್ಟುವ ಕೆಲಸ ಮಾಡಬೇಕೆಂದು ಎಂದು ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹೇಳಿದರು.
ತಾಲ್ಲೂಕಿನ ಹೊಸಕೆರೆ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾಪಂಚಾಯಿತ್ , ಶಿಕ್ಷಣ ಇಲಾಖೆ ದಾವಣಗೆರೆ ಜಿಲ್ಲೆ ಸಹೋಗದೊಂದಿಗೆ “ಕನಸು ಬಿತ್ತುವ ಕೆಲಸ , ರಾಷ್ಟ್ರ ಕಟ್ಟುವ ಕೆಲಸ” ವಿನೂತನ ಪ್ರಯತ್ನದೊಂದಿಗೆ ವಿದ್ಯಾರ್ಥಿಗಳೊಂದಿಗೆ ಶೈಕ್ಷಣಿಕ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನಾನು ಚಿಕ್ಕ ವಯಸ್ಸಿನಲ್ಲಿ ಇದ್ದಾಗ ನಮ್ಮ ತಂದೆಯನ್ನು ಕಳೆದುಕೊಂಡು ನಮ್ಮ ತಾಯಿಯ ಆಶ್ರಯದಲ್ಲಿ ಬೆಳೆದುನನ್ನ ವಿದ್ಯಾಭ್ಯಾಸವನ್ನುಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಕನ್ನಡದಲ್ಲಿ ಓದಿ ನಾನು ಐಎಎಸ್ ಮಾಡಿ ಜಿಲ್ಲಾಧಿಕಾರಿಯಾಗಿ ಬಡ ಜನರಿಗೆ ಸೇರಿದಂತೆ ಎಲ್ಲರಿಗೂ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇನೆ. ವಿದ್ಯಾರ್ಥಿಗಳಾದ ನೀವುಗಳು ಸಹ ತಮ್ಮ ಜ್ಞಾನದ ಸಂಪತ್ತನ್ನು ಛಲದೊಂದಿಗೆ ರೈತರು ಮಳೆ ಬಂದಾಗ ಹೇಗೆ ಭೂಮಿಯನ್ನು ಹದ ಮಾಡಿ ಬಿತ್ತನೆ ಮಾಡಿ ಬೆಳೆ ಹೇಗೆ ಬೆಳೆಯುತ್ತಾರೆ , ಹಾಗೆಯೇ ವಿದ್ಯಾರ್ಥಿಗಳು ತಮ್ಮ ಮುಂದಿನ ಗುರಿ ಇಟ್ಟುಕೊಂಡು ಓದುವ ಗುಣವನ್ನು ಬೆಳೆಸಿಕೊಂಡು ಮುಂದೆ ಐಪಿಎಸ್, ಐಎಎಸ್ ಸೇರಿದಂತೆ ವಿವಿಧ ಹುದ್ದೆಗಳಿಗೆ ಸೇರಿ ಕನಸು ಬಿತ್ತುವ ಕೆಲಸ , ರಾಷ್ಟ್ರ ಕಟ್ಟುವ ಕೆಲಸ ಮಾಡಬೇಕೆಂದು ಅವರು ವಿದ್ಯಾರ್ಥಿಗಳಿಗೆ ಕರೇನೀಡಿದರು.
ಜಿಲ್ಲಾ ಮುಖ್ಯಕಾರ್ಯನಿರ್ವಾಹಾಕಾಧಿಕಾರಿ ಪದ್ಮಾವಸಂತಪ್ಪ ಮಾತನಾಡಿ ಪ್ರಾಣಿಗಳ ಹಾಗೂ ಮನಷ್ಯರ ನಡುವೆ ವ್ಯತ್ಯಾಸ ಇರುತ್ತದೆ. ನಮ್ಮಲ್ಲಿ ಯೋಚನೆ ಮಾಡುವ ಶಕ್ತಿ ಇದೆ. ಭವಿಷ್ಯದ ಯೋಚನೆ ಇರುತ್ತದೆ. ಪ್ರಾಣಿಗಳಲ್ಲಿ ಇರುವುದಿಲ್ಲ. ಪೋಷಕರು ವಿದ್ಯಾರ್ಥಿಗಳನ್ನು ಭಿತ್ತನೆ ಮಾಡಲು, ಕಳೆ ತೆಗೆಯಲು ಸೇರಿದಂತೆ ಹೊಲ ಕೆಲಸಗಳಿಗೆ ಕರೆದುಕೊಂಡು ಹೋಗದೇ ಶಾಲೆಗಳಿಗೆ ಬರಲು ಅನುಕೂಲ ಕಲಿಸಬೇಕು.
ಸರ್ಕಾರ ಸರ್ಕಾರಿ ಶಾಲೆಗಳಿಗೆ ಮಕ್ಕಳ ವಿದ್ಯಾಬ್ಯಾಸಕ್ಕಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. ವಿದ್ಯಾರ್ಥಿಗಳು ಗುರಿ ಇಟ್ಟುಕೊಂಡು ಚಲದಿಂದ ಓದಬೇಕು . ಆದರೆ ನಮ್ಮ ತಂದೆ ಕಡು ಬಡುವ ಕುಟುಂಬದಲ್ಲಿ ನಾನು ಪಕ್ಕದ ಹಳ್ಳಿಗಳ ಶಾಲೆಗಳಿಗೆ ಹೋಗಿ ವಿದ್ಯಾಭ್ಯಾಸ ಮಾಡಿ ಇಂದು ನಾನು ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಕೆಲಸ ನಿರ್ವಹಿಸುತ್ತಿದ್ದೇನೆ. ಜಿಲ್ಲಾಧಿಕಾರಿಗಳು ವಿದ್ಯಾರ್ಥಿಗಳು ಸಹ ನಮ್ಮಂತೆ ಉನ್ನತ ಅಧಿಕಾರಿಗಳಾಗಲಿ ಎಂಬ ಕನಸನ್ನು ಇಟುಕೊಂಡು ಬರಪೀಡಿತ ಜಗಳೂರು ತಾಲ್ಲೂಕಿನ ಹೊಸಕೆರೆ ಶಾಲೆಯಿಂದ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು.
ನಗಾರಾಭಿವೃದ್ದಿ ಜಿಲ್ಲಾ ಯೋಜನಾಧಿಕಾರಿ ಶ್ರೀಮತಿ ನಜ್ಮಾ ಮಾತನಾಡಿ ವಿದ್ಯಾರ್ಥಿಗಳಲ್ಲಿ ಓದುವಾಗ ಆತ್ಮ ವಿಶ್ವಾಸ ಇರಬೇಕು. ಛಲ ಇದ್ದಾಗ ಸೋಲು ಸುಳಿಯುವುದಿಲ್ಲ. ನಿಮ್ಮ ಕನಸು ನನಸಾಗಬೇಕಾದರೆ ದೇವರಲ್ಲಿ ನಂಬಿಕೆ ಇರಬೇಕು. ಪೋಷಕರು ಸಹ ಸಹಕಾರ ಕೊಡಬೇಕು. ಗುರಿ ತಾನಾಗಿಯೇ ಮುಟ್ಟುತ್ತಾರೆ ಇದಕ್ಕೆ ನಾನೇ ಸಾಕ್ಷಿ ಎಂದರು.
ದಾವಣಗೆರೆ ಉಪವಿಭಾಗಾಧಿಕಾರಿ ಮಮತಾ ಮಾತನಾಡಿ ಗುರಿ ಇದ್ದರೆ ಏನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ನಾನೇ ಸಾಕ್ಷಿ. ನಾನು ಟೀಚರ್ ಆಗಿ ಕೆಲಸ ನಿರ್ವಹಿಸಿ, ಅದರ ಮದ್ಯೆಯೇ ಮಕ್ಕಳ ಮಕ್ಕಳು ಮನೆಯ ಜೊತೆಯಲ್ಲೇ ಬಿಡುವಿನ ಮದ್ಯೆ ನಾನು ಓದಿ ಕೆಎಎಸ್ ಮಾಡಿ 8 ನೇ ರ್ಯಾಂಕ್ ಪಡೆದು ಇಂದು ಉಪವಿಭಾಗಾಧಿಕಾರಿಯಾಗಿದ್ದೇನೆ. ಮಕ್ಕಳು ಕೆಟ್ಟದ್ದನ್ನು ಬಿಟ್ಟು, ಒಳ್ಳೆಯದನ್ನು ಆಯ್ಕೆ ಮಾಡಿಕೊಂಡು ಗುರಿ ಹಾಕಿಕೊಂಡು ಶ್ರದ್ದೆಯಿಂದ ವಿದ್ಯಾಭ್ಯಾಸ ಮಾಡಿದರೆ ಗುರಿ ಮುಟ್ಟಬಹುದೆಂದು ತಮ್ಮ ಮನದಾಳ ಮಾತನ್ನು ವಿದ್ಯಾರ್ಥಿಗಳಿಗೆ ಮನ ಮುಟ್ಟುವಂತೆ ತಿಳಿಸಿದರು.
ಜಿಲ್ಲಾ ಭೂಸ್ವಾಧೀನಾಧಿಕಾರಿ ರೇಷ್ಮಾಹಾನಗಲ್, ಜಿಲ್ಲಾ ತೋಟಾಗಾರಿಕೆ ನಿರ್ದೇಶಕರಾದ ಲಕ್ಷ್ಮಿಕಾಂತ, ಡಿಡಿಪಿಐ ಚಂದ್ರಶೇಖರಪ್ಪ, ಜಿಲ್ಲಾ ಅಲ್ಪ ಸಂಖ್ಯಾತ ಇಲಾಖೆಯ ಅಧಿಕಾರಿ ಗಂಗಪ್ಪ, ಜಿಲ್ಲಾ ಆರೋಗ್ಯಾಧಿಕಾರಿ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಅನುಷ್ಠಾನಾಧಿಕಾರಿಗಳು ತಾವು ಓದಿ ಬಂದ ಅನುಭವವನನು ಹಂಚಿಕೊಳ್ಳುವ ಮೂಲಕ ಮಕ್ಕಳಿಗೆ ಶಿಕ್ಷಣದ ಪ್ರೋತ್ಸಾಹ ಮೂಡಿಸಿದರು. ಜಗಳೂರು ತಹಶೀಲ್ದಾರ್ ಹುಲ್ಲುಮನೆ ತಿಮ್ಮಣ್ಣ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
