ಪಂಡಿತಾರಾಧ್ಯ ಶ್ರೀಗಳ ಆಸ್ಟ್ರೇಲಿಯ ಪ್ರವಾಸ

ಸಾಣೇಹಳ್ಳಿ,

         ತರಳಬಾಳು ಮಠದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರು 103 ಜನ ಭಕ್ತರು ಮತ್ತು 12 ಜನ ಕಲಾವಿದರೂ ಸೇರಿದಂತೆ ಒಟ್ಟು 115 ಜನರೊಡಗೂಡಿ ಮೇ 6 ರಿಂದ 16 ರವರೆಗೆ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದ್ದಾರೆ.

     ಆಸ್ಟ್ರೇಲಿಯದಲ್ಲಿರುವ ಬಸವ ಸಮಿತಿ ಮತ್ತು ರಾಷ್ಟ್ರೀಯ ಬಸವ ಪ್ರತಿಷ್ಠಾನಗಳ ಸಂಯುಕ್ತಾಶ್ರಯದಲ್ಲಿ ಬಸವ ಸಮಿತಿ ರಚನೆಗೊಂಡು 25 ವರ್ಷಗಳಾದ ಹಿನ್ನೆಲೆಯಲ್ಲಿ ಮೇ 11 ರಂದು ಸಿಡ್ನಿಯಲ್ಲಿ ಏರ್ಪಡಿಸಿರುವ `ಅಂತರಾಷ್ಟ್ರೀಯ ವಚನ ಸಾಹಿತ್ಯ ಸಮ್ಮೇಳನ’ದಲ್ಲಿ ಪೂಜ್ಯರು ವಿಶೇಷ ಉಪನ್ಯಾಸ ನೀಡುವರು.

       ಇದೇ ಸಂದರ್ಭದಲ್ಲಿ ಸಾಣೇಹಳ್ಳಿಯ ಶ್ರೀ ಶಿವಕುಮಾರ ಕಲಾಸಂಘದ ಕಲಾವಿದರು ವಚನಗೀತೆಗಳನ್ನು ಹಾಡುವುದರ ಜೊತೆಗೆ `ಉರಿಲಿಂಗ ಪೆದ್ದಿ’ ಎನ್ನುವ ನಾಟಕ ಪ್ರದರ್ಶಿಸುವರು. ಈ ಹಿಂದೆ ಅಂದರೆ 2014 ರಲ್ಲಿ ಸಿಡ್ನಿ, ಮೆಲ್ಬರ್ನ್ ಮತ್ತಿತರ ಕಡೆ ನಡೆದ ಬಸವ ಜಯಂತಿಯಲ್ಲಿಯೂ ಪಂಡಿತಾರಾಧ್ಯ ಶ್ರೀಗಳು ವಿಶೇಷ ಉಪನ್ಯಾಸ ನೀಡಿದ್ದರು. ಮೇ 5 ರಂದು ಬೆಂಗಳೂರಿನಿಂದ ಪ್ರಯಾಣ ಬೆಳೆಸಿ 17ಕ್ಕೆ ಹಿಂದಿರುಗುವರು.

      ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು 25 ವರ್ಷಗಳ ಹಿಂದೆ ಆಸ್ಟ್ರೇಲಿಯಾದ ಮೆಲ್ಬೋರ್ನಿನ ಬೇವಿನಕೊಪ್ಪದ ಅವರ ಮನೆಯಲ್ಲಿ `ಬಸವ ಸಮಿತಿ’ಯನ್ನು ಹುಟ್ಟುಹಾಕಿದ್ದನ್ನು ನೆನಪಿಸಿಕೊಳ್ಳುವ ಜೊತೆಗೆ ಪ್ರವಾಸಕ್ಕೆ ಶುಭ ಹಾರೈಸಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap