ಕನ್ನಡದ ಮಣ್ಣು ಬಹುಬಗೆಯದ್ದು : ಪ್ರೊ.ಕೆ.ಬಿ.ಸಿದ್ದಯ್ಯ

ಚಿತ್ರದುರ್ಗ :

        ಕನ್ನಡದ ಮಣ್ಣು ಬಹುಬಗೆಯದ್ದು. ನಾಡಿನ ಬಹುತ್ವ ಚಿಂತನೆಗಳನ್ನು ಅಲ್ಲಮರ ಚಿಂತನೆ ತಂದು ನಿಲ್ಲಿಸುತ್ತದೆ. ಅಂತಹ ವಿಶೇಷ ಗುಣ ಈ ಮಣ್ಣಿಗಿದೆ ಎಂದು ಕವಿ ಪ್ರೊ.ಕೆ.ಬಿ.ಸಿದ್ದಪ್ಪ ಪ್ರತಿಪಾದಿಸಿದ್ದಾರೆ

       ಚಿತ್ರದುರ್ಗದ ಮುರುಘಾಮಠದಲ್ಲಿ ಶೂನ್ಯಪೀಠದ ಪ್ರಥಮಾಧ್ಯಕ್ಷ ಅಲ್ಲಮಪ್ರಭುದೇವರ ಸ್ಮರಣೆ ಮತ್ತು ಯುಗಾದಿ ಕವಿಗೋಷ್ಠಿಯಲ್ಲಿ ಮುಖ್ಯ ಅಥಿತಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು

        ಇಂಗ್ಲಿಷ್‍ನಲ್ಲಿ ಬಹಳ ದೊಡ್ಡ ಕವಿಗಳಿದ್ದಾರೆ ಆದರೆ ಸಂತರೂ, ಕವಿಯೂ ಆಗಿರುವ ಅಪರೂಪದ ವ್ಯಕ್ತಿತ್ವ ಅಲ್ಲಮರದು. ಸಹಜವಾದುದನ್ನು ಅಲ್ಲಮರು ನುಡಿಯುತ್ತಾರೆ. ಅವರ ಸ್ಮರಣೆ ನಮ್ಮ ಪ್ರಜ್ಞೆಯನ್ನು ಹೊತ್ತಿಸುತ್ತದೆ, ಸೃಷ್ಟಿಸುತ್ತದೆ. ಅಲ್ಲಮರು ನಾಗಾರ್ಜುನನ ತರ್ಕ ಮತ್ತು ಬುದ್ಧನ ಪ್ರಭಾವದಿಂದ ಪ್ರಭಾವಿತರಾಗಿದ್ದಾರೆ. ಅವರ ಜ್ಞಾನದ ಅನ್ವೇಷಣೆ ವಿಜ್ಞಾನವನ್ನು ಮೀರಿದ್ದು. ಅಲ್ಲಮಪ್ರಭು ತನ್ನ ನಡೆ ನುಡಿಯಲ್ಲಿ ಕಟ್ಟಿದ ಚಿಂತನೆ ಅಪಾರವಾದುದು ಎಂದರು.

        ಡಾ. ಶಿವಮೂರ್ತಿ ಮುರುಘಾ ಶರಣರು ಮಾತನಾಡಿ, ಅಲಮ್ಮನ ಬದುಕನ್ನು ಶಿವಯೋಗ ಸಾಧಕ, ಕವಿ (ಚಿಂತಕ) ಮತ್ತು ವಿಮರ್ಶಕ ಮೂರು ಹಂತದಲ್ಲಿ ಗುರುತಿಸಬಹುದು. ಶಿವಯೋಗ ಸಾಧನೆ ಆತನ ಆಪ್ತವಾದ ಅಭ್ಯಾಸ. ಏಕಾಂತದಲ್ಲಿ ಕುಳಿತು ಧ್ಯಾನ ಮಾಡುತ್ತಿದ್ದ. ಅಲ್ಲಮನ ಒಳಗೆ ಒಬ್ಬ ಅನ್ವೇಷಕ ಇದ್ದ. ಆಧ್ಯಾತ್ಮಿಕ ಶಕ್ತಿ ಅತೀಂದ್ರಯವಾದ ಶಕ್ತಿಯಿತ್ತು. ಆಧ್ಯಾತ್ಮ ಮತ್ತು ಅನುಭವ ಆತನದ್ದು.

        ಅಲ್ಲಮನಲ್ಲಿ ಅವ್ಯಕ್ತವಾಗಿರುವ ಶಕ್ತಿ ಇದೆ. ಸಮಾಜವನ್ನು ಸರಿದಾರಿಗೆ ತರಬೇಕೆಂಬ ಪ್ರಯತ್ನ ಅವರದ್ದಾಗಿತ್ತು ಎಂದರು.
ಕವಿಗೋಷ್ಠಿಯಲ್ಲಿ ಬೀದರ್‍ನ ಸಂಗಮೇಶ ಎನ್. ಜವಾದಿ – ಕೃಷಿ, ಬೇಗೂರಿನ ಸುಭಾಷ್ ಹೇಮಣ್ಣ ಚವ್ಹಾಣ್ – ಚೈತ್ರಾಶಯ, ಕೂಡ್ಲಹಳ್ಳಿ ಜಗದೀಶ್ – ಯಾತಕೋ, ಪಿ.ಎಂ. ಸಿದ್ದಯ್ಯ ಹೊನ್ನಾಳಿ – ವಿಶ್ವಮಾನವ, ಹಾಲೇಶ್ ಹಕ್ಕಂಡಿ ವರಕನಹಳ್ಳಿ – ಒಡನಾಡಿ ನೀನಾಗು, ಪ್ರಕಾಶ ಜಹಾಗೀರದಾರ ವಿಜಯಪುರ – ಕವಿಯಾಗುವೆ ನಾ, ಅಪ್ಪಾಜಿ ಎ. ಮುಸ್ಟೂರು – ಮರಳಿ ಬರುವುದೀ, ಎಂ.ಎಸ್. ಮಂಜುಳಾ ಡಾ. ಸ್ವಾಮಿ, ರಾಂಪುರ – ಸಾರ್ಥಕತೆ, ಶಿವಗಂಗಾ ಚಿತ್ತಯ್ಯ ಚಳ್ಳಕೆರೆ – ಹತನಾದನೇ ಕರ್ಣ, ಡಾ. ಕೆ.ಜೆ. ತಿಮ್ಮರಾಜು ಧರ್ಮಪುರ, – ಭ್ರೂಣ ಹತ್ಯೆ ಕುರಿತು ಕವಿತೆ ವಾಚಿಸಿದರು

         ತುರುವನೂರು ಕೆ. ನರಸಿಂಹಪ್ಪ, – ಪುಣ್ಯಭೂಮಿ, ಸತೀಶ ಡಿ. ಹೊಳಲ್ಕೆರೆ – ಕೆಂಪಾದ ಕಣ್ಣುಗಳಲ್ಲಿ, ಟಿ. ಶಿವರುದ್ರಪ್ಪ ಪಂಡರಹಳ್ಳಿ – ಭ್ರಮೆಯ ಹಕ್ಕಿ, ಟಿ.ಪಿ. ಉಮೇಶ್ – ಚಂದ್ರವಳ್ಳಿ, ಬಬ್ಬೂರು ತಿಪ್ಪೀರನಾಯಕ – ಹೆತ್ತವರ ನೆನಪು, ಪ್ರವೀಣ್ ಬೆಳಗೆರೆ- ಆಧುನಿಕ ಬಸವಣ್ಣ, ಪವಿತ್ರಾ ಆರ್. ಹುಲಿಕಂತಿಮಠ, ಹುಬ್ಬಳ್ಳಿ – ಯೋಧರಿಗೆ ಜೈಕಾರ, ಶ್ರೀಮತಿ ದಾಕ್ಷಾಯಣಿ ಉದಗಟ್ಟಿ, ರಾಣೇಬೆನ್ನೂರು – ಕಾಣದ ಕೈವಾಡ, ಗೀತಾ ಮಂಜು, ಜಗಳೂರು – ಧರ್ಮದ ಬೆಳೆ, ಬಿ. ಮೊಹಿದ್ದೀನ್‍ಖಾನ್ ಚಿತ್ರದುರ್ಗ – ನಾನಲ್ಲದ ಬದುಕು, ಆ.ಇ. ಮುನಾವರ್, ಚಿತ್ರದುರ್ಗ – ಅರಿವು, ಶ್ರೀಮತಿ ಚಿನ್ಮಯಿ ಎಂ.ಪಾಟೀಲ ಧಾರವಾಡ – ಯುಗಾದಿ, ಬಿ.ಎಸ್. ಚಂದನ, ಚಿತ್ರದುರ್ಗ – ಸೈನಿಕರೆ ನಿಮಗೊಂದು ಸಲಾಂ, ನರ್ಮದಾ ಕೈಲಾಶಸ್ಥಾವರ ಮಠ ಬೀದರ್ – ಕಾದಾಟ, ಕಾಮ್ರಾನ್ ಬೇಗ್ ಚಿತ್ರದುರ್ಗ – ನಾನೂ ನಿಮ್ಮವನು, ಸರೋಜಿನಿ ಭದ್ರಾಪುರ್ ಪೂನಾ – ಜಗದಣ್ಣ ನೀ ಕೇಳಣ್ಣ ಕವನಗಳನ್ನು ವಾಚಿಸಿದರು.ಪ್ರಾರಂಭದಲ್ಲಿ ಜಮುರಾ ಕಲಾವಿದರು ಪ್ರಾರ್ಥಿಸಿದರು. ಮಮತ ಎನ್. ಸ್ವಾಗತಿಸಿದರು. ಪ್ರದೀಪ್‍ಕುಮಾರ್ ನಿರೂಪಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link