ಸಂಚಾರಿ ನಿಯಮ ಮುರಿದರೆ ಕಟ್ಟುನಿಟ್ಟಿನ ಕ್ರಮ : ಎಸ್ಪಿ

ತುಮಕೂರು

    ಜಿಲ್ಲಾ ಪೊಲೀಸ್ ಮತ್ತು ತುಮಕೂರು ಸಂಚಾರಿ ಪೊಲೀಸ್ ಅವರು ಸಾರ್ವಜನಿಕರಿಗೆ ಮತ್ತು ವಾಹನ ಸವಾರರು, ಚಾಲಕರಿಗೆ ಮೋಟಾರ್ ಕಾಯ್ದೆ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ನಗರದಲ್ಲಿ ಬೈಕ್ ಜಾಥಾ ನಡೆಸಲಾಯಿತು, ನಗರದ ಎಸ್ಪಿ ಕಚೇರಿಯಿಂದ ಆರಂಭಗೊಂಡ ಬೈಕ್ ಜಾಥಾ ಎಸ್‍ಎಸ್‍ಪುರಂ, ಬಿ.ಎಚ್.ರಸ್ತೆ, ಎಂ.ಜಿ.ರಸ್ತೆ, ಅಶೋಕರಸ್ತೆ ಸೇರಿದಂತೆ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚಾರ ನಡೆಯಿತು.

    ಬೈಕ್ ಜಾಥಾಕ್ಕೆ ಚಾಲನೆ ನೀಡಿದ ಬಳಿಕ ಎಸ್ಪಿ ವಂಶಿಕೃಷ್ಣ ಅವರ ವಾಹನದಲ್ಲಿಯೇ ಕುಳಿತ ಜಿಲ್ಲಾಧಿಕಾರಿ ರಾಕೇಶ್‍ಕುಮಾರ್ ಹೆಲ್ಮೆಟ್ ಧರಿಸಿ ನಗರ ಸಂಚಾರ ಕೈಗೊಂಡಿದ್ದರು. ಈ ಎಎಸ್ಪಿ ಉದೇಶ್, ಡಿವೈಎಸ್‍ಪಿ ತಿಪ್ಪೇಸ್ವಾಮಿ ಸೇರಿದಂತೆ ಪೊಲೀಸ್ ಸಬ್ ಇನ್‍ಸ್ಪೆಕ್ಟರ್ ಹಾಗೂ ಇನ್‍ಸ್ಪೆಕ್ಟರ್ ಮತ್ತು ಪೊಲೀಸ್ ಪೇದೆಗಳು ಇದ್ದರು.

      ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link