ಕ್ಲಿನಿಕ್‍ಗಳ ಮೇಲೆ ದಿಢೀರ್ ದಾಳಿ..!!

ಹೊಸದುರ್ಗ:

     ಪಟ್ಟಣದಲ್ಲಿರುವ ವಿವಿಧ ಖಾಸಗಿ ಕ್ಲಿನಿಕ್‍ಗಳ ಮೇಲೆ ತಾಲ್ಲೂಕು ಆರೋಗ್ಯಾಧಿಕಾರಿಗಳ ತಂಡದ ಸದಸ್ಯರು ದಿಡೀರ್ ದಾಳಿ ನಡೆಸಿದ್ದಾರೆ.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ನಿರ್ದೇಶನದಂತೆ ಪಟ್ಟಣದ ವಿವಿಧ ಕ್ಲಿನಿಕ್‍ಗಳಿಗೆ ಭೇಟಿ ನೀಡಿ ವೈದ್ಯರ ವಿವರಗಳನ್ನು ಪರಿಶೀಲನೆ ನಡೆಸಿದರು.

     ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಚಂದ್ರಶೇಖರ್ ಸುದ್ದಿಗಾರರೊಂದಿಗೆ ಮಾತನಾಡಿ ವೈದ್ಯರು ಕೆಪಿಎಂಇ ಖಾಯಿದೆಯನ್ನು ನೊಂದಣಿ ಮಾಡಿಸಿಕೊಂಡಿದ್ದಾರೆಯೇ ಅಥವಾ ನಕಲಿ ವೈದ್ಯರು ಇರುವರೇ ಎಂದು ಖುಲಂಕುಶವಾಗಿ ಪರಿಶೀಲನೆ ಮಾಡುತ್ತೇವೆ ಎಂದರು. ಆಗೇನಾದರೂ ನೊಂದಣಿ ಮಾಡಿಕೊಳ್ಳದವರಿಗೆ ಎಲ್ಲಾ ದಾಖಲಾತಿಗಳನ್ನು ತೆಗೆದುಕೊಂಡು ಒಂದು ವಾರದೊಳಗೆ ಕೆಪಿಎಂಇ ನೊಂದಣಿ ಮಾಡಿಕೊಳ್ಳತಕ್ಕದ್ದು ಎಂದು ಎಚ್ಚರಿಕೆ ನೀಡುತ್ತೇವೆ. ಆಗೇನಾದರೂ ನೊಂದಣಿ ಮಾಡಿಕೊಳ್ಳದವರಿಗೆ ಕೂಡಲೇ ನೋಟಿಸ್‍ ಜಾರಿ ಮಾಡಿ ಮುಂದಿನ ಕಾನೂನು ಕ್ರಮಜರುಗಿಸಲುಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಶಿಪಾರಸ್ಸು ಮಾಡುತ್ತೇವೆಎಂದರು.ಇದೇ ವೇಳೆ ಕೇತ್ರಆರೋಗ್ಯ ಶಿಕ್ಷಣಾಧಿಕಾರಿ ವಿರೇಂದ್ರ ಪಾಟಿಲ್, ಹಿರಿಯಆರೋಗ್ಯ ಸಹಾಯಕರು ಸಿದ್ದರಾಮಸ್ವಾಮಿ ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap