ಸುಡುಗಾಡು ಸಿದ್ಧರ ಕಾಲೋನಿಗೆ ನೀರಿನ ವ್ಯವಸ್ಥೆ : ಸತ್ಯಭಾಮಗೆ ಪ್ರಶಂಸೆ

ಚಿತ್ರದುರ್ಗ:

      ಮೆದೇಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿರುವ ಸುಡುಗಾಡು ಸಿದ್ಧರ, ಬುಡುಗಜಂಗಮ ಕಾಲೋನಿಗಳಿಗೆ ಗ್ರಾಮಪಂಚಾಯಿತಿ ವತಿಯಿಂದಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿರುವುದಕ್ಕೆ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಸತ್ಯಭಾಮ ಅವರಿಗೆ ಮಹಿಳೆಯರು ಮತ್ತುಕಾಲೋನಿಯಜನರು ಪ್ರಶಂಸೆಯ ಮಹಾಪೂರವೇ ಹರಿಸಿದರು.

         ಸುಡುಗಾಡು ಸಿದ್ಧರು, ಬುಡುಗಜಂಗಮರು ಮೆದೇಹಳ್ಳಿ ಗ್ರಾಮದ ಬಳಿ ವಾಸ ಮಾಡಲು ಆರಂಭಿಸಿ ಕಳೆದು ಎಂಟು ಹತ್ತು ವರ್ಷಗಳೇ ಆಯಿತು.ಆದರೆ ಆ ಕಾಲೋನಿಗಳಿಗೆ ಭೇಟಿ ನೀಡಿದಂತಹ ಅಧಿಕಾರಿಗಳು ಮತ್ತು ರಾಜಕಾರಣಿಗಳು ಭರವಸೆ ನೀಡಿದ್ದು ಹೊರತುಪಡಿಸಿದರೆ ಯಾವುದೇ ಬೇಡಿಕೆಗಳು ಈಡೇರಿರಲಿಲ್ಲ.

       ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ವಿಮುಕ್ತಿ ವಿದ್ಯಾಸಂಸ್ಥೆ, ಕರ್ನಾಟಕ ಶಾಂತಿ ಮತ್ತು ಸೌಹಾರ್ದ ವೇದಿಕೆ, ಸ್ವೀಪ್ ಸಮಿತಿ ವತಿಯಿಂದ ಏರ್ಪಡಿಸಲಾಗಿದ್ದ ಮತದಾನಜಾಗೃತಿ ಸಮಾರಂಭದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಜಿ.ಪಂ. ಸಿ.ಇ.ಓ. ಸತ್ಯಭಾಮ ಅವರು ಸುಡುಗಾಡು ಸಿದ್ಧರು, ಬುಡುಗಜಂಗಮ ಕಾಲೋನಿ ಜನರ ಪರಿಸ್ಥಿತಿ ಕಂಡು ಮರುಕಪಟ್ಟಿದ್ದರು.

        ಇಲ್ಲಿಗೆ ಸುಮ್ಮನಾಗದ ಸಿ.ಇ.ಓ. ರವರು ಸ್ಥಳದಲ್ಲಿಯೇ ಇದ್ದ ಗ್ರಾಮಪಂಚಾಯಿತಿ ಪಿ.ಡಿ.ಓ. ಸಂತೋಷ್‍ಕುಮಾರ್‍ರವರಿಗೆ ಮಾರ್ಗದರ್ಶನ ನೀಡಿ, ಲೋಕಸಭಾಚುನಾವಣೆ ಮತದಾನ ಮುಗಿದ ನಂತರ ಈ ಕಾಲೋನಿಗಳಿಗೆ ಪೈಪ್‍ಲೈನ್ ಅಳವಡಿಸಿ, ಕುಡಿಯುವ ನೀರು ವ್ಯವಸ್ಥೆ ಮಾಡುವಂತೆ ಸೂಚನೆ ನೀಡಿದ್ದರು. ಆ ಹಿನ್ನೆಲೆಯಲ್ಲಿಕುಡಿಯುವ ನೀರಿನ ವ್ಯವಸ್ಥೆಯನ್ನುಕಲ್ಪಿಸಲಾಗಿತ್ತು.

       ಮತದಾನ ಜಾಗೃತಿ ಸಭೆ ಏರ್ಪಡಿಸಿ, ಸುಡುಗಾಡು ಸಿದ್ಧರ ಕಾಲೋನಿಗೆ ಸಿ.ಇ.ಓ. ಸತ್ಯಭಾಮಅವರನ್ನುಕರೆತರುವಲ್ಲಿ ಶ್ರಮಿಸಿದ್ದ ವಿಮುಕ್ತಿ ವಿದ್ಯಾಸಂಸ್ಥೆ ನಿರ್ದೇಶಕಆರ್. ವಿಶ್ವಸಾಗರ್, ಶಾಂತಿ ಸೌಹಾರ್ದ ವೇದಿಕೆಯ ನರೇನಹಳ್ಳಿ ಅರುಣ್‍ಕುಮಾರ್‍ಇವರು, ಅಲೆಮಾರಿ, ಅರೆಅಲೆಮಾರಿಜನರ ನೈಜ ಸಮಸ್ಯೆಗಳನ್ನು ಸಿ.ಇ.ಓ. ಅವರ ಗಮನಕ್ಕೆ ತಂದುಕುಡಿಯುವ ನೀರು, ರಸ್ತೆ, ಚರಂಡಿ, ಬೀದಿ ದೀಪ ಮಕ್ಕಳಿಗೆ ಶಾಲಾ ವ್ಯವಸ್ಥೆ, ಜಾತಿ ಪ್ರಮಾಣ ಪತ್ರಗಳನ್ನು ಮಾಡಿಸಿಕೊಡಬೇಕೆಂದು ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿತಕ್ಷಣವೇ ಸ್ಪಂದಿಸಿದ ಸಿ.ಇ.ಓ. ಸತ್ಯಭಾಮಅವರು ಸಭೆಯಲ್ಲಿ ಉಪಸ್ಥಿತರಿದ್ದ ತಾಲ್ಲೂಕು ಪಂಚಾಯತ್‍ಕಾರ್ಯನಿರ್ವಾಹಕಅಧಿಕಾರಿ ಮತ್ತು ಪಿ.ಡಿ.ಓ.ರವರಿಗೆ ಸೂಚನೆ ನೀಡಿ, ತುರ್ತಾಗಿಕುಡಿಯುವ ನೀರಿನ ವ್ಯವಸ್ಥೆಕಲ್ಪಿಸುವಂತೆ ಮಾರ್ಗದರ್ಶನ ಮಾಡಿದ್ದರು.

           ಸಿ.ಇ.ಓ. ಸತ್ಯಭಾಮರವರ ಸೂಚನೆಯ ಮೇರೆಗೆ ಪೈಪ್‍ಲೈನ್ ಅಳವಡಿಸಿ, ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವುದನ್ನು ಇಂದುಕಾಲೋನಿಯಜನರಿಗೆ ನೀರುಕಲ್ಪಿಸುವ ಮೂಲಕ ಬಹುದಿನಗಳ ಬೇಡಿಕೆಯನ್ನು ಈಡೇರಿಸಿದಂತಾಗಿದೆ.ಕುಡಿಯುವ ನೀರನ್ನು ಜನರಿಗೆ ಕಲ್ಪಿಸುವ ಪೈಪ್ ಲೈನ್‍ಗಳಿಗೆ ಚಾಲನೆ ನೀಡಿದ ಸಂದರ್ಭದಲ್ಲಿ ಸ್ಥಳದಲ್ಲಿ ಉಪಸ್ಥಿತರಿದ್ದ ಕಾಲೋನಿಯತಿಪ್ಪಮ್ಮ ಮಾಡಿ, ಎಷ್ಟೇಷ್ಟೊ ಬಾರಿ ತಾಲ್ಲೂಕು ಮತ್ತು ಜಿಲ್ಲಾಡಳಿತ ಕಛೇರಿಗಳಿಗೆ ಮನವಿ ಮಾಡಿಕೊಂಡಾಗ್ಯೂ ನೀರಿನ ವ್ಯವಸ್ಥೆಆಗಿರಲಿಲ್ಲ. ಆದರೆ ಕಳೆದ ವಾರವಷ್ಟೇ ಕಾಲೋನಿ ಗೆ ಭೇಟಿ ನೀಡಿ ಹೋದ, ಸಿ.ಇ.ಓ. ಸತ್ಯಭಾಮಅವರು ನೀರಿನ ವ್ಯವಸ್ಥೆ ಕಲ್ಪಿಸಿರುವುದಕ್ಕೆ ಅತೀವ ಸಂತೋಷವಾಗಿದೆಎಂದುಕಾಲೋನಿಯ ಮಹಿಳೆಯರು ಪ್ರಶಂಸೆಯ ಮಹಾಪೂರವನ್ನೇ ಹರಿಸಿದರು.

        ಇದೇ ಸಂದರ್ಭದಲ್ಲಿ ವಿಮುಕ್ತಿ ವಿದ್ಯಾಸಂಸ್ಥೆಯ ನಿರ್ದೇಶಕಆರ್.ವಿಶ್ವಸಾಗರ್, ಕರ್ನಾಟಕ ಶಾಂತಿ ಮತ್ತು ಸೌಹಾರ್ದ ವೇದಿಕೆಯ ನರೇನಹಳ್ಳಿ ಅರುಣ್‍ಕುಮಾರ್, ವಕೀಲರಾದರಾಘವೇಂದ್ರ ನಾಯ್ಕ, ಪಿಡಿಓ ಸಂತೋಷ್‍ಕುಮಾರ್ ಮತ್ತು ಸಿಬ್ಬಂಧಿ ವರ್ಗ ಮತ್ತು ವಿಮುಕ್ತಿ ವಿದ್ಯಾಸಂಸ್ಥೆಯಕುಮಾರ್, ಗುರುರಾಜ್ ಮುಂತಾದವರು ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link